Artist Nanjayya: ನಾಟಕ ಮಾಡುತ್ತಿದ್ದಾಗ ವೇದಿಕೆಯಲ್ಲೇ ಹೃದಯಾಘಾತ: ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ ನಂಜಯ್ಯ

ಮಂಡ್ಯ: (Artist Nanjayya) ನಾಟಕ ಮಾಡುತ್ತಿದ್ದಾಗಲೇ ವೇದಿಕೆಯಲ್ಲಿ ಹೃದಯಾಘಾತದಿಂದ ಕಲಾವಿದರೊಬ್ಬರು ಕುಸಿದು ಬಿದ್ದಯ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದ ಬಸವನಗುಡಿಯಲ್ಲಿ ನಡೆದಿದೆ. ವೇದಿಕೆಯಲ್ಲಿ ಕುಸಿದು ಬಿದ್ದವರನ್ನು ಕಲಾವಿದ ನಂಜಯ್ಯ (46 ವರ್ಷ) ಎಂದು ಗುರುತಿಸಲಾಗಿದೆ. ಇದೀಗ ಕಲಾವಿದ ನಂಜಯ್ಯನವರು ಕುಸಿದು ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ಮಂಡ್ಯದ ಮಳವಳ್ಳಿ ತಾಲೂಕಿನ ವಿವಿಧ ಗ್ರಾಮಗಳ ಕಲಾವಿದರು ಸೇರಿ ಪೌರಾಣಿಕ ನಾಟಕವನ್ನು ಆಯೋಜನೆ ಮಾಡಿದ್ದರು. ಕುರುಕ್ಷೇತ್ರದ ಕೃಷ್ಣ ಸಂಧಾನ ನಾಟಕ ಪ್ರದರ್ಶನವನ್ನು ಏರ್ಪಡಿಸಿದ್ದರು. ಈ ನಾಟಕ ಪ್ರದರ್ಶನದಲ್ಲಿ ಸೈಂಧವ ಮತ್ತು ಸಾರ್ಥಕಿ ಪಾತ್ರ ನಿರ್ವಹಿಸುತ್ತಿದ್ದ ವೇಳೆ ಕಲಾವಿದ ನಂಜಯ್ಯ (Artist Nanjayya) ವೇದಿಕೆಯ ಮೇಲೆ ಹಠಾತ್‌ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕಲಾವಿದ ನಂಜಯ್ಯ ಕುಸಿದು ಬೀಳುತ್ತಿದ್ದಂತೆಯೇ ಅಲ್ಲಿ ಸೇರಿದ್ದ ಜನರು ಅವರನ್ನು ಮಳವಳ್ಳಿ ಪಟ್ಟಣದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಆಸ್ಪತ್ರೆಗೆ ಕರೆತರುವ ಮೊದಲೇ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ನಂಜಯ್ಯನವರ ಪತ್ನಿ ಮಗಳು ಹಾಗೂ ಕುಟುಂಬಸ್ಥರು ಅಲ್ಲೇ ಇದ್ದ ಕಾರಣ ಅವರ ಸಾವನ್ನು ಕಣ್ಣಾರೆ ಕಂಡ ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ : ಸಾಲ‌ಮನ್ನಾ ಹೆಸರಲ್ಲಿ ಸಿದ್ಧವಾಗ್ತಿದೆ ಭಾವುಕ ಅಸ್ತ್ರ : ರೈತರಿಗೆ ಪತ್ರ ಬರಿತಾರಂತೆ ಎಚ್ ಡಿಕೆ

ಇದನ್ನೂ ಓದಿ : Arecanut today price : ಅಡಿಕೆ ಬೆಲೆಯಲ್ಲಿ ಭರ್ಜರಿ ಏರಿಕೆ : ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟು ಗೊತ್ತಾ ?

ಇದನ್ನೂ ಓದಿ : Mandya KSRTC Bus accident: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಕೆ.ಎಸ್.ಆರ್.ಟಿ.ಸಿ ಬಸ್

ಇದೀಗ ಕಲಾವಿದ ನಂಜಯ್ಯ ಅವರು ವೇದಿಕೆಯಲ್ಲಿ ಹೃದಯಾಘಾತದಿಂದ ಕುಸಿದು ಬೀಳುತ್ತಿರುವ ವಿಡಿಯೋ ವೈರಲ್‌ ಆಗುತ್ತಿದ್ದು, ಅವರ ಅಭಿಮಾನಿಗಳಿಗೆ ನಿಧನದ ಸುದ್ದಿ ಭಾರಿ ಅಘಾತವನ್ನುಂಟುಮಾಡಿದೆ.

(Artist Nanjayya) The incident took place at Basavanagudi of Bandur village in Malavalli taluk of Mandya district where an artist collapsed and died due to a heart attack on the stage while performing a play.

Comments are closed.