BJP ticket announcement: ಜೆಡಿಎಸ್, ಕಾಂಗ್ರೆಸ್ ಗೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲ್ಯಾನ್: ಸದ್ಯಕ್ಕಿಲ್ಲ ಟಿಕೆಟ್ ಘೋಷಣೆ

ಬೆಂಗಳೂರು : (BJP ticket announcement) ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ರಾಷ್ಡ್ರೀಯ ಪಕ್ಷಗಳ ಜೊತೆ ಪ್ರಾದೇಶಿಕ ಪಕ್ಷಗಳು ಸೇರಿದಂತೆ‌ ಎಲ್ಲರೂ ಮುಂದಿನ ಚುನಾವಣೆ ಗೆದ್ದು ಸರ್ಕಾರ ರಚಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಮಧ್ಯೆ ರಾಜ್ಯದಲ್ಲಿ ಕಾಂಗ್ರೆಸ್ ಒಂದು ಹಂತದ ಟಿಕೇಟ್ ಘೋಷಣೆ ಮಾಡಿದ್ದರೇ ಜೆಡಿಎಸ್ ಹಾಗೂ ಬಿಜೆಪಿ ಇನ್ನೂ ಉಮೇದುವಾರಿಕೆ ಘೋಷಿಸಿಲ್ಲ‌. ಟಿಕೇಟ್ ಘೋಷಣೆ ವಿಚಾರದಲ್ಲಿ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

ಹೌದು ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದರೂ ಒಳಗೊಳಗೆ ಬಂಡಾಯ ಹಾಗೂ ಶಾಸಕರು ಕೈಕೊಡುವ ಭೀತಿಯೂ ಕಾಡುತ್ತಿದೆ. ಹೀಗಾಗಿ ಬಿಜೆಪಿ ಈ ಭಾರಿ ಪಕ್ಷದ ಟಿಕೇಟ್ ಘೋಷಿಸುವ ಮುನ್ನ ಕಾದು ನೋಡುವ ತಂತ್ರ ಅನುಸರಿಸಲು ಸಿದ್ಧವಾಗಿದೆ. ಹೀಗಾಗಿ ಚುನಾವಣೆ ಘೋಷಣೆಯಾಗಿದ್ದರೂ ಬಿಜೆಪಿ ರಾಜ್ಯದಲ್ಲಿ ಇನ್ನೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ 224 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಬಿಡುಗಡೆ ಮಾಡಿದ ಬಳಿಕ ಅಭ್ಯರ್ಥಿಗಳನ್ನು ಪ್ರಕಟಿಸಲು ಪ್ಲ್ಯಾನ್ ಮಾಡಿದೆ ಎನ್ನಲಾಗ್ತಿದೆ.

ಯಾಕೆಂದರೇ ಬಿಜೆಪಿಯಲ್ಲಿ ಮೂಲ‌ಮತ್ತು ವಲಸಿಗರ ನಡುವೆ ಹಿಂದಿನಿಂದಲೂ ಫೈಟ್ ನಡೆಯುತ್ತಲೇ ಇದೆ. ಜಯನಗರ, ಬಸವನಗುಡಿ,ಚಿಕ್ಕಪೇಟೆ ಸೇರಿದಂತೆ ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮೂಲ ಬಿಜೆಪಿಗರು ಟಿಕೇಟ್ ಆಕಾಂಕ್ಷಿಗಳಾಗಿದ್ದರೇ ಬಿಜೆಪಿ ಸೇರ್ಪಡೆಗೊಂಡವರು ಕೂಡ ಟಿಕೇಟ್ ಬಯಸುತ್ತಿದ್ದಾರೆ. ಇದು ಹೈಕಮಾಂಡ್ ಪಾಲಿಗೆ ತಲೆನೋವಾಗಿದೆ. ಹೀಗೆ ಟಿಕೇಟ್ ಫೈಟ್ ಜೋರಾಗಿರುವಾಗಲೇ ಟಿಕೇಟ್ ಘೋಷಿಸಿದರೇ ಸಹಜವಾಗಿಯೇ ಅಸಮಧಾನಿತರು ಕಾಂಗ್ರೆಸ್ , ಜೆಡಿಎಸ್ ಕಡೆ ಮುಖ ಮಾಡುವ ಸಾಧ್ಯತೆ ಇದೆ.

ಅಲ್ಲದೇ ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ವಲಸೆ ಬಂದಿದ್ದ ಹಾಲಿ ಸಚಿವರುಗಳು ಮತ್ತೆ ಮಾತೃ ಪಕ್ಷಕ್ಕೆ ಮರಳಲಿದ್ದಾರೆ ಎಂಬ ಮಾತು ದಟ್ಟವಾಗಿ ಕೇಳಿಬಂದಿದೆ. ತಮ್ಮ ಪಕ್ಷದಿಂದ ಹೋದವರು ಮರಳಿ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂಬ ನಂಬಿಕೆಯಲ್ಲಿರೋ ಕಾಂಗ್ರೆಸ್ ಕೂಡ ಮೊದಲ ಪಟ್ಟಿಯಲ್ಲಿ ಹಲವು ಕ್ಷೇತ್ರಗಳಿಗೆ ಟಿಕೇಟ್ ಘೋಷಿಸಿಲ್ಲ.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಟಿಕೇಟ್ ಘೋಷಿಸಿದ ಬಳಿಕ ತನ್ನ ಪಟ್ಟಿ ಪ್ರಕಟಿಸುವ ಇರಾದೆಯಲ್ಲಿದೆ.‌ಇದರಿಂದ ಅಸಮಧಾನಿತರಿಗೆ ಯಾವುದೇ ಪಕ್ಷದ ಆಶ್ರಯ ಸಿಗೋದಿಲ್ಲ. ಒಂದೊಮ್ಮೆ ಆಗ ಬಿಜೆಪಿ ಅಸಮಧಾನಿತರು ಕಾಂಗ್ರೆಸ್, ಜೆಡಿಎಸ್ ಮೊರೆ ಹೋದರೂ ಈಗಾಗಲೇ ಘೋಷಣೆಯಾಗಿರುವ ಟಿಕೇಟ್ ಬದಲಾಯಿಸೋದು ಕಷ್ಟ. ಇದರಿಂದ ಅಸಮಧಾನಿತರು ಪಕ್ಷದ ಓಟು ಒಡೆಯುವ ಸಾಧ್ಯತೆ ಕಡಿಮೆಯಾದಂತಾಗುತ್ತದೆ. ಈ ಕಾರಣಕ್ಕೆ ಬಿಜೆಪಿ ಲಿಸ್ಟ್ ಇನ್ನೂ ವಿಳಂಬವಾಗಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : HD Kumaraswamy outrage: ಕೆಎಂಎಫ್ ಮೂಲಕ ಕನ್ನಡಿಗರ ಮೇಲೆ ಹಿಂದಿ ಹೇರಿಕೆ : ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

BJP ticket announcement: BJP plan to tease JDS, Congress: No ticket announcement yet

Comments are closed.