Chandrashekar guruji murder : ಸರಳವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆ

ಹುಬ್ಬಳ್ಳಿ : ಸರಳವಾಸ್ತು, ಮಾನವಗುರು ಖ್ಯಾತಿಯ ಚಂದ್ರಶೇಖರ್‌ ಗುರೂಜಿ (Chandrashekar guruji murder) ಅವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಲಾಗಿದೆ. ಹುಬ್ಬಳ್ಳಿಯ ಖಾಸಗಿ ಹೋಟಲ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಗ್ರಾಹಕರ ಸೋಗಿನಲ್ಲಿ ಬಂದು ಹೋಟೆಲ್‌ನ ರಿಸೆಪ್ಶನ್‌ನಲ್ಲಿಯೇ ಹತ್ಯೆ ಮಾಡಲಾಗಿದೆ. ಚಂದ್ರಶೇಖರ ಗುರೂಜಿ ಅವರನ್ನು ಹತ್ಯೆ ಮಾಡಿದ ನಂತರದಲ್ಲಿ ಹಂತಕರು ಎಸ್ಕೇಪ್‌ ಆಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಚಂದ್ರಶೇಖರ ಗುರೂಜಿ ಅವರು ಸರಳ ಜೀವನ, ಸರಳ ಅಕಾಡೆಮಿ, ಸರಳ ವಾಸ್ತು ಮೂಲಕ ಖ್ಯಾತಿ ಗಳಿಸಿದ್ದರು. ಕೊಲೆಯ ಬೆನ್ನಲ್ಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೇ ನಗರ ಪೊಲೀಸ್‌ ಆಯುಕ್ತ ಲಾಬೂರಾಮ್‌ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನು ಕಿಮ್ಸ್‌ ಆಸ್ಪತ್ರೆಗೆ ಗುರೂಜಿ ಅವರ ಮೃತದೇಹವನ್ನು ಸಾಗಿಸಲಾಗಿದೆ.

ಇಬ್ಬರೂ ಹಂತಕರು ಕೂಡ ಭಕ್ತರ ಸೋಗಿನಲ್ಲಿ ಹೋಟೆಲ್‌ಗೆ ಬಂದಿದ್ದರು. ಇಬ್ಬರೂ ಹುಡುಗರು ಚಂದ್ರಶೇಖರ್‌ ಗುರೂಜಿ ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ. ನಂತರದಲ್ಲಿ ಇಬ್ಬರೂ ಸೇರಿಕೊಂಡು ಚಂದ್ರಶೇಖರ್‌ ಗುರೂಜಿ ಅವರಿಗೆ ಚಾಕುವಿನಿಂದ ಇರಿದು ಹತ್ಯೆಯನ್ನು ಮಾಡಿದ್ದಾರೆ. ಆದರೆ ಚಂದ್ರಶೇಖರ ಗುರೂಜಿ ಅವರ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸುಫಾರಿ ಕೊಟ್ಟು ಈ ಹತ್ಯೆಯನ್ನು ಮಾಡಲಾಗಿದೆಯಾ ಇಲ್ಲಾ ಬೇರೆಯದೇ ಕಾರಣವಿದೆಯಾ ಅನ್ನೋ ಕುರಿತು ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಜುಲೈ ೨ರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ಗೆ ಬಂದು ಚಂದ್ರಶೇಖರ್‌ ಗುರೂಜಿ ಅವರು ಉಳಿದುಕೊಂಡಿದ್ದರು. ನಾಳೆ ಗುರೂಜಿ ಹೋಟೆಲ್‌ ರೂಂ ಖಾಲಿ ಮಾಡಬೇಕಾಗಿತ್ತು. ಆದ್ರೆ ಹಂತರು ಇಂದು ಗುರೂಜಿ ಅವರನ್ನು ಹತ್ಯೆ ಮಾಡಿದ್ದಾರೆ. ಪೂರ್ವ ನಿಯೋಜಿತವಾಗಿ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಗುರೂಜಿ ಅವರ ಹತ್ಯೆಯ ಆರೋಪಿಗಳ ಹುಡುಕಾಟಕ್ಕಾಗಿ ವಿಶೇಷ ತಂಡವನ್ನು ನಿಯೋಜನೆ ಮಾಡಲಾಗಿದೆ. ನಗರ ಪೊಲೀಸ್‌ ಆಯುಕ್ತರಾಗಿರುವ ಲಾಬೂರಾಮ್‌ ಅವರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿದ್ದು, ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ : ಪ್ರಿಯತಮೆ ಜೊತೆ ಸೆಕ್ಸ್​ ಮಾಡುತ್ತಿದ್ದಾಗ ಹೃದಯಾಘಾತದಿಂದ ವ್ಯಕ್ತಿ ಸಾವು

ಇದನ್ನೂ ಓದಿ : kishore pattikonda hospitalised : ‘ಜೇಮ್ಸ್​’ ಸಿನಿಮಾ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಆಸ್ಪತ್ರೆಗೆ ದಾಖಲು : ಸ್ಥಿತಿ ಗಂಭೀರ

Chandrashekar guruji murder Sarala vaastu in Hubli hotel

Comments are closed.