Eshwarappa :‘ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ,ಸಿದ್ದರಾಮಯ್ಯರಂತೆ ಪಕ್ಷಾಂತರಿ ನಾನಲ್ಲ’ : ಈಶ್ವರಪ್ಪ ಗುಡುಗು

ಮೈಸೂರು : Eshwarappa : ಸಚಿವ ಸ್ಥಾನ ಸಿಕ್ಕಿಲ್ಲ ಅಂತಾ ಸಂಘಟನೆ ಬಿಟ್ಟರೆ ತಾಯಿಯನ್ನು ಬಿಟ್ಟಂತೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ನಾನು ಸಂಘಟನೆ ಬಿಡುತ್ತಿದ್ದೇನೆ ಎಂದು ಸುದ್ದಿ ಹಬ್ಬಿಸುತ್ತಿರುವವರಿಗೆ ಸಿದ್ದರಾಮಯ್ಯ ಗಾಳಿ ಬೀಸಿದೆ. ಅವರಿಗೂ ತಾಯಿಯ ವ್ಯತ್ಯಾಸ ಗೊತ್ತಿಲ್ಲ. ಕಾಂಗ್ರೆಸ್ ,ಜೆಡಿಎಸ್​ ಹೀಗೆ ಯಾವ ಪಕ್ಷಕ್ಕೆ ಬೇಕಿದ್ದರೂ ಸಿದ್ದರಾಮಯ್ಯ ಹೋಗುತ್ತಾರೆ. ನಾನು ಸಾಯುವವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದು ಗುಡುಗಿದ್ದಾರೆ,


ಸಿಎಂ ಸ್ಥಾನ ಸಿಕ್ಕಿಲ್ಲ ಅಂದಿದ್ದರೆ ಸಿದ್ದರಾಮಯ್ಯ ಕಾಂಗ್ರೆಸ್​ನಲ್ಲಿ ಇರುತ್ತಾರಾ ಕೇಳಿ. ಸಿದ್ದು ಹಾಗೂ ಡಿಕೆಶಿ ಇಬ್ಬರೂ ಸೈದ್ಧಾಂತಿಕವಾಗಿ ಇರೋದು ಅಂತಾರೆ, ಆದರೆ ಇವರು ವ್ಯಕ್ತಿ ಪೂಜೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ನಿಂತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.


ಕಾಂಗ್ರೆಸ್​ನ ಭಾರತ್​ ಜೋಡೋ ಯಾತ್ರೆ ವಿಚಾರವಾಗಿ ಇದೇ ವೇಳೆ ಮಾತನಾಡಿದ ಅವರು, ಅದು ಅವರ ಪಕ್ಷದ ಕಾರ್ಯಕ್ರಮ, ಅದಕ್ಕೆ ನಮ್ಮ ವಿರೋಧ ಇಲ್ಲ. ಅವರು ಮೊದಲು ಕಾಂಗ್ರೆಸ್ ಜೋಡೋ ಯಾತ್ರೆ ಮಾಡಲಿ. ಭಾರತ್​ ಜೋಡೋ ಯಾತ್ರೆ ಮಾಡುತ್ತಿದ್ದಂತೆಯೇ ದೇಶದಲ್ಲಿ ಕಾಂಗ್ರೆಸ್​ ತೋಡೋ ಆಗುತ್ತಿದೆ. ಭಾರತ್​ ತೋಡೋ ಮಾಡಿದ್ದೇ ಈ ಕಾಂಗ್ರೆಸ್​, ದೇಶದ ಜನತೆ ಕಾಂಗ್ರೆಸ್​ ನಂಬೋದಿಲ್ಲ ಅನ್ನೋದಕ್ಕೆ ಚುನಾವಣೆಯಲ್ಲಿ ಕಾಂಗ್ರೆಸ್​ ಸೋತಿರುವುದೇ ಸಾಕ್ಷಿ. ದೇಶದಲ್ಲಿ ರಾಜಸ್ಥಾನ ಬಿಟ್ಟರೆ ಇನ್ನೆಲ್ಲಿ ಕಾಂಗ್ರೆಸ್​ ಪಕ್ಷವಿದೆ..? ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿಯೂ ಕಾಂಗ್ರೆಸ್​ ಎಲ್ಲಿದೆ ಅಂತಾ ಹುಡುಕಬೇಕಾಗುತ್ತದೆ ಅಂತಾ ವ್ಯಂಗ್ಯವಾಡಿದ್ದಾರೆ.


ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಂಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಷ್ಟು ಕಾಂಗ್ರೆಸ್ ಇದೆ ಎಂದು ಹೇಳಲಿ ಎಂದು ಕೆ,ಎಸ್​ ಈಶ್ವರಪ್ಪ ಕಾಂಗ್ರೆಸ್ಸಿಗರ ಕಾಲೆಳೆದಿದ್ದಾರೆ.


ಆರ್​ಎಸ್​ಎಸ್​ ಬ್ಯಾನ್​ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಇಡೀ ವಂಶವೇ ಆರ್‌ಎಸ್‌ಎಸ್ ನ ಒಂದು ಕೂದಲು ಅಲ್ಲಾಡಿಸಲು ಆಗಿಲ್ಲ. ಇನ್ನು ಸಿದ್ದರಾಮಯ್ಯ ನಮಗೆ ಯಾವ ಲೆಕ್ಕ..? ಹಿಂದುತ್ವ ಬೆಳೆಸಬೇಕು ಎಂದು ಹೇಳುವುದು ಆರ್​ಎಸ್​ಎಸ್. ಸಿದ್ದರಾಮಯ್ಯ ನಮಗೆ ಹಿಂದೂಗಳ ಮತ ಬೇಡ ಅನ್ನಲಿ ನೋಡೋಣ. ಕೇವಲ ಮುಸ್ಲಿಮರಿಂದ ನಾನು ಗೆಲ್ಲುತ್ತೇನೆ ಎನ್ನಲಿ. ಆರ್​ಎಸ್​ಎಸ್​ ಇಲ್ಲ ಅಂದಿದ್ರೆ ಇವತ್ತು ದೇಶ ಎಲ್ಲಿರುತ್ತಿತ್ತೋ.? ಆರ್​ಎಸ್​ಎಸ್​ ಸೂರ್ಯನಿದ್ದಂತೆ. ಇದು ಸಿದ್ದರಾಮಯ್ಯಗೆ ಅರ್ಥವಾಗಬೇಕು ಎಂದಿದ್ದಾರೆ.


ಮುಸ್ಲಿಮ್​ ಜನತೆ ಈಗ ಎಚ್ಚೆತ್ತಿದ್ದಾರೆ. ದಾರಿ ತಪ್ಪುತ್ತಿರುವ ಮುಸ್ಲಿಂ ಯುವಕರಿಗೆ ಬುದ್ಧಿ ಹೇಳುತ್ತಿದ್ದಾರೆ. ಆದರೆ ಈ ಸಿದ್ದರಾಮಯ್ಯ ರಾಷ್ಟ್ರವಿರೋಧಿ ಪಿಎಫ್​ಐ ಜೊತೆ ನಿಂತಿದ್ದಾರೆ. ದಾರಿ ತಪ್ಪಿದ ಮುಸ್ಲಿಮರಿಗೆ ಹಿರಿಯರು ಬುದ್ಧಿವಾದ ಹೇಳ್ತಿದ್ದಾರೆ. ಆದರೆ ಇದೆಲ್ಲ ಕಾಂಗ್ರೆಸ್​ಗೆ ತಿಳೀತಾ ಇಲ್ಲ. ಬಿಜೆಪಿ ಆರ್​​ಎಸ್​ಎಸ್​ನ ಪಾಪದ ಕೂಸಲ್ಲ. ನಾವೆಲ್ಲ ಆರ್​ಎಸ್​ಎಸ್​ನಿಂದ ಬೆಳೆದ ಮಕ್ಕಳು. ನಾವು ಸ್ವಾಭಿಮಾನಿ ಕೂಸುಗಳು ಎಂದು ಹೇಳಿದ್ದಾರೆ.

ಇದನ್ನು ಓದಿ : Shobha Karandlaje’s outrage : ‘ನಾನು ಶೋಭಾ ಗೌಡ ಅಲ್ಲ ಕರಂದ್ಲಾಜೆ, ಮಿಥುನ್​ ರೈ ಒಬ್ಬ ಚಿಲ್ಲರೆ ಮನುಷ್ಯ’ : ಶೋಭಾ ಕರಂದ್ಲಾಜೆ ಸಿಡಿಮಿಡಿ

ಇದನ್ನೂ ಓದಿ : Fans angry on Bumrah: “ಐಪಿಎಲ್’ಗೆ ಸದಾ ರೆಡಿ.. ವಿಶ್ವಕಪ್ ಬಂದ್ರೆ ಹೊರ ನಡಿ ; ಬುಮ್ರಾ ವಿರುದ್ಧ ಕ್ರಿಕೆಟ್ ಪ್ರಿಯರು ಫುಲ್ ಗರಂ

‘I will stay with BJP till I die’: Eshwarappa

Comments are closed.