ಕರುನಾಡಲ್ಲಿ ಕೊರೊನಾ ಮಹಾಸ್ಪೋಟ : 24 ಗಂಟೆಯಲ್ಲಿ 19 ಸಾವಿರ ಮಂದಿಗೆ ಸೋಂಕು

ಬೆಂಗಳೂರು : ಕೊರೊನಾ ಎರಡನೇ ಅಲೆಯ ಆರ್ಭಟ ಮಿತಿಮೀರಿದೆ. ಕರುನಾಡಲ್ಲಿಂದು ಕೊರೊನಾ ಮಹಾಸ್ಪೋಟವೇ ಸಂಭವಿಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 19,067 ಮಂದಿಗೆ ಸೋಂಕು ಕಾಣಿಸಿಕೊಂಡು ಆತಂಕ ಮೂಡಿಸಿದೆ.

ಕೊರೊನಾ ವೈರಸ್ ಸೋಂಕಿನ ಹಾವಳಿ ಮಿತಿ ಮೀರುತ್ತಿದೆ. ದಿನ ವೊಂದಕ್ಕೆ ರಾಜ್ಯದಲ್ಲಿ ಸರಿ ಸುಮಾರು 20 ಸಾವಿರದ ಅಂಚಿನಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ 19,067 ಮಂದಿಗೆ  ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 11,61,065 ಕ್ಕೆ ಏರಿಕೆಯಾಗಿದೆ. ಅಲ್ಲದೇ ಕಿಲ್ಲರ್ ಕೊರೊನಾ 81 ಮಂದಿಯನ್ನು ಬಲಿ ಪಡೆದಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಪಾಲಿಗೆ ಕೊರೊನಾ ಸೋಂಕು ಆತಂಕ ವನ್ನು ತಂದೊಡ್ಡಿದೆ. ಬೆಂಗಳೂರು ನಗರದಲ್ಲಿ 12,793 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರೆ, ಮೈಸೂರು 777, ಕಲಬುರಗಿ 671, ತುಮಕೂರು 494, ಮಂಡ್ಯ 338, ಹಾಸನದಲ್ಲಿ 348 ಮಂದಿಗೆ ಸೋಂಕು ದೃಢಪಟ್ಟಿದೆ.

Comments are closed.