ಸೋಮವಾರ, ಏಪ್ರಿಲ್ 28, 2025
HomeBreakingಕರುನಾಡಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ : ಸತತ ಎರಡನೇ ದಿನವೂ 40 ಸಾವಿರ ಕೇಸ್ ದಾಖಲು

ಕರುನಾಡಲ್ಲಿ ನಿಲ್ಲದ ಕೊರೊನಾ ಅಟ್ಟಹಾಸ : ಸತತ ಎರಡನೇ ದಿನವೂ 40 ಸಾವಿರ ಕೇಸ್ ದಾಖಲು

- Advertisement -

ಬೆಂಗಳೂರು : ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ‌ ಆರ್ಭಟ ಹೆಚ್ಚುತ್ತಲೇ‌ ಇದೆ. ಸತತ ಎರಡನೇ ದಿನವೂ ಕೋವಿಡ್ ಪ್ರಕರಣಗಳ ಸಂಖ್ಯೆ 40 ಸಾವಿರ ಗಡಿ ದಾಟಿದೆ.

ಶನಿವಾರವೂ 40,990 ಹೊಸ ಪ್ರಕರಣ ದಾಖಲಾಗಿವೆ.‌ ಬೆಂಗಳೂರಲ್ಲಿ ಸೋಂಕಿತರ ಪ್ರಮಾಣ ಕೊಂಚ ಕಡಿಮೆಯಾಗಿದೆಯಾದ್ರೂ, ರಾಜ್ಯದ ಇತರ ಜಿಲ್ಲೆಗಳಲ್ಲಿ ಕೊರನಾ ಆರ್ಭಟ ಶುರುವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 405068ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತ ಪಡುತ್ತಿರುವರ ಸಂಖ್ಯೆ ಇನ್ನೂರರ ಗಡಿದಾಟಿದೆ.‌ ಶನಿವಾರ ಬರೋಬ್ಬರಿ 271 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಕೋವಿಡ್ ಸೋಂಕಿನಿಂದ ಮೃತ ಪಟ್ಟವರ ಸಂಖ್ಯೆ 15794ಕ್ಕೆ ತಲುಪಿದೆ.

ರಾಜ್ಯದ ಬೆಂಗಳೂರು ನಗರದಲ್ಲಿ 19,535 ಪ್ರಕರಣ ದಾಖಲಾಗಿದೆ. ಉಳಿದಂತೆ ಬಾಗಲಕೋಟೆ 319, ಬಳ್ಲಾರಿ 1163, ಬೆಳಗಾವಿ 532, ಬೆಂಗಳೂರು ಗ್ರಾಮಾಂತರ 940, ಬೀದರ್ 360, ಚಾಮರಾಜನಗರ‌ 548, ಚಿಕ್ಕಬಳ್ಳಾಪುರ 820, ಚಿಕ್ಕಮಗಳೂರು 500, ಚಿತ್ರದುರ್ಗ 103, ದಕ್ಷಿಣ ಕನ್ನಡ 933, ದಾವಣಗೆರೆ386, ಧಾರವಾಡ 540, ಗದಗ 205, ಹಾಸನ 790, ಹಾವೇರಿ 168, ಕಲಬುರಗಿ 1407, ಕೊಡಗು 590, ಕೋಲಾರ 440, ಕೊಪ್ಪಳ 1019, ಮಂಡ್ಯ 1235, ಮೈಸೂರು 2529, ರಾಯಚೂರು 601, ರಾಮನಗರ 577, ಶಿವಮೊಗ್ಗ 661, ತುಮಕೂರು 2308, ಉಡುಪಿ 670, ಉತ್ತರ ಕನ್ನಡ 687, ವಿಜಯಪುರ 340, ಯಾದಗಿರಿಯಲ್ಲಿ 266 ಪ್ರಕರಣ‌ ದಾಖಲಾಗಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular