Karnataka Election ticket Fight : ಸಿದ್ಧರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ : ನಿರ್ಧಾರಕ್ಕೆ ಬಿಜೆಪಿಯಲ್ಲೇ ಶುರುವಾಯ್ತು ವಿರೋಧ

ಬೆಂಗಳೂರು : (Karnataka Election ticket Fight) ರಾಜ್ಯದಲ್ಲಿ ಚುನಾವಣೆಯಷ್ಟೇ ಚರ್ಚೆಗೊಳಗಾಗ್ತಿರೋ ಇನ್ನೊಂದು ವಿಚಾರ ಸಿದ್ಧರಾಮಯ್ಯನವರ ಚುನಾವಣಾ ಕ್ಷೇತ್ರ. ಈ ಮಧ್ಯೆ ಸಿದ್ಧು ವರುಣಾದಿಂದ ಸ್ಪರ್ಧಿಸೋದು ಬಹುತೇಕ ಖಚಿತವಾದ ಬೆನ್ನಲ್ಲೇ ಬಿಜೆಪಿ ಸಿದ್ಧರಾಮಯ್ಯ ಸೋಲಿಸಲು ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಈಗ ಬಿಜೆಪಿ ಪ್ಲ್ಯಾನ್ ಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿದ್ದು, ಸಿದ್ಧು ವಿರುದ್ಧ ಬಿಜೆಪಿ ರಣತಂತ್ರ ಆರಂಭದಲ್ಲೇ ವಿಫಲವಾಗಿದೆ. ಸಿದ್ಧರಾಮಯ್ಯನವರು ಅಳೆದು ಸುರಿದು ತೂಗಿ ವರುಣಾದಿಂದಲೇ ತಮ್ಮ ಕೊನೆಯ ಚುನಾವಣೆ ಸ್ಪರ್ಧೆಯನ್ನು ಘೋಷಿಸಿದರು. ಈ ಘೋಷಣೆಯ ಬೆನ್ನಲ್ಲೇ ಬಿಜೆಪಿ ಸಿದ್ಧು ಸೋಲಿಸಲು ಪ್ರಬಲ ಅಭ್ಯರ್ಥಿ ಕಣಕ್ಕಿಳಿಸೋದಾಗಿ ಘೋಷಿಸಿತ್ತು.

ಮೂಲಗಳ ಮಾಹಿತಿ ಪ್ರಕಾರ ಸಿದ್ಧರಾಮಯ್ಯನವರ ವಿರುದ್ಧ ಮಾಜಿಸಿಎಂ ಪುತ್ರ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೆಂದ್ರ ಅವರನ್ನು ಕಣಕ್ಕಿಳಿಸಲು ಪ್ಲ್ಯಾನ್ ಸಿದ್ಧವಾಗಿತ್ತು. ಆದರೆ ಈಗ ಬಿಜೆಪಿಯ ಈ ಪ್ಲ್ಯಾನ್ ಗೆ ಬಿಜೆಪಿಯ ಇನ್ನೊಂದು ಬಣವೇ ಆಕ್ಷೇಪ ವ್ಯಕ್ತಪಡಿಸಿದೆ ಎನ್ನಲಾಗಿದೆ. ಕೇವಲ ಆಕ್ಷೇಪ ಮಾತ್ರವಲ್ಲ ಬಿಜೆಪಿಯ ಈ ಪ್ಲ್ಯಾನ್ ನಿಂದ ಬಿಜೆಪಿಗೆ ಆಗಬಹುದಾದ ನಷ್ಟದ ಬಗ್ಗೆಯೂ ವಿವರಿಸಿದೆ.

ಸಿದ್ದರಾಮಯ್ಯ ಸೋಲಿಸುವ ತಂತ್ರದಿಂದ ಮತ ದೂರ ಆಗುವ ಆತಂಕವಿದೆ. ಅಹಿಂದ ಮತಗಳು ದೂರವಾಗೋದರಿಂದ ಬಿಜೆಪಿಗೆ ಹಿನ್ನಡೆ ಆತಂಕ ಎದುರಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯನ ಶಕ್ತಿ ಜಾಸ್ತಿ ಇದೆ.ಸಿದ್ದರಾಮಯ್ಯ ತಮ್ಮದೇ ಆದ ಜನಬೆಂಬಲ ಇಟ್ಟಿಕೊಂಡಿದ್ಸಾರೆ.ಅಪಾರ ಅಭಿಮಾನಿಗಳು, ಬೆಂಬಲಿಗರ ಬಳಗ ಹೊಂದಿದ್ದಾರೆ. ಯಡಿಯೂರಪ್ಪ ಹೇಗೋ ಹಾಗೇ ಮಾಜಿ ಸಿಎಂ ಕೂಡ ಕರ್ನಾಟಕದಲ್ಲಿ ಒಬ್ಬ ಮಹಾನ್ ನಾಯಕ.ಇಂತಹ ನಾಯಕನನ್ನು ಬೇಕು ಬೇಕು ಅಂತಾ ಸೋಲಿಸಲು ಹೋದ್ರೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗಬಹುದು ಎಂದು ಬಿಜೆಪಿಯ ಕೆಲ ಹಿರಿಯ ನಾಯಕರು ರಾಜ್ಯ ನಾಯಕರಿಗೆ ಹಾಗೂ ಹೈಕಮಾಂಡ್ ಗೆ ಮನವರಿಕೆ ಮಾಡಿಸಿದ್ದಾರಂತೆ. ಈ ಹಿನ್ನೆಲೆ ಇದರ‌ ಬಗ್ಗೆ ಎಚ್ಚರದ ತೀರ್ಮಾನಕ್ಕೆ ಮುಂದಾದ ರಾಜ್ಯ ನಾಯಕರು ಸದ್ಯ ಸಿದ್ಧರಾಮಯ್ಯನವರ ವಿರುದ್ಧ ವಿಜಯೇಂದ್ರ ಸ್ಪರ್ಧೆಯ ವಿಚಾರವನ್ನು ಕೈಬಿಡೋ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಸಿದ್ದರಾಮಯ್ಯ ವಿರುದ್ದ ವಿಜಯೇಂದ್ರ‌ನಂತ ಅಭ್ಯರ್ಥಿ ಹಾಕಿದ್ರೆ, ಪಕ್ಷಕ್ಕೆ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಮುಂದಾಗಿರುವ ರಾಜ್ಯ ನಾಯಕರು ನಾಳೆ ನಾಡಿದ್ದಿನಲ್ಲಿ ಪಕ್ಷದ ಸಭೆಯಲ್ಲಿ ಈ ಬಗ್ಗೆ ಮಹತ್ವದ ಚರ್ಚೆ ನಡೆಸಲಿದ್ದಾರಂತೆ. ಸಧ್ಯ ಸಾಧ್ಯತೆಗಳ ಬಗ್ಗೆ ಚರ್ಚಿಸಿದ ಬಳಿಕ ಅಂತಿಮವಾಗಿ ಈ ಬಗ್ಗೆ ವರಿಷ್ಠರಿಗೆ ತಿಳಿಸಲು ರಾಜ್ಯ ಬಿಜೆಪಿ ತೀರ್ಮಾನಿಸಿದೆ ಎಂಬ ಮಾಹಿತಿ ಬಿಜೆಪಿ ಮೂಲಗಳಿಂದ ಧೃಡಪಟ್ಟಿದೆ.

ಇದನ್ನೂ ಓದಿ : Youth Voter Campaign: ಯುವ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ನಿಂದ ಯುವ ಮತದಾರ ಅಭಿಯಾನ

Karnataka Election Ticket Fight: Siddaramaiah Vs Vijayendra Contest: The opposition to the decision started within the BJP itself

Comments are closed.