Devotees Special Letter : ಹೆಣ್ಣು ಮಗು ಬೇಕೆಂದು ದೇವರಿಗೆ ಪತ್ರ ಬರೆದ ಭಕ್ತ

ಕೊಪ್ಪಳ : ಕಷ್ಟ ಬಂದಾಗ ದೇವರ ಮೊರೆ ಹೋಗುವುದು ಸಾಮಾನ್ಯ. ಇನ್ನು ಇಷ್ಟಾರ್ಥ ಸಿದ್ದಿಗಾಗಿ ದೇವರಿಗೆ ನಾನಾ ಹರಿಕೆಗಳನ್ನೂ ಹೊತ್ತು ಕೊಳ್ತಾರೆ. ಆದರೆ ಇಲ್ಲೊಬ್ಬ ಭಕ್ತ ತನ್ನ ಪತ್ನಿಗೆ ಹಣ್ಣು ಮಗುವಾಗಲಿ ಅಂತಾ ದೇವರಿಗೆ ಪತ್ರ (Devotees Special Letter ) ಬರೆದಿದ್ದಾನೆ. ತನ್ನ ಕೋರಿಕೆಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಇದೀಗ ದೇವರ ಹುಂಡಿಯ ಹಣ ಲೆಕ್ಕಾಚಾರದ ವೇಳೆಯಲ್ಲಿ ಪತ್ರ ದೊರೆತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿರುವ ಹನುಮನಹಳ್ಳಿಯ ಬಳಿಯಲ್ಲಿರುವ ಅಂಜನಾದ್ರಿ ಬೆಟ್ಟದಲ್ಲಿ ಈ ಪತ್ರ ದೊರೆತಿದೆ. ತಹಶೀಲ್ದಾರ್‌ ವಿ.ಹೆಚ್.‌ ಹೊರಪೇಟೆ ಅವರ ನೇತೃತ್ವ ದಲ್ಲಿ ದೇವರ ಕಾಣಿಕೆ ಹುಂಡಿಯಲ್ಲಿನ ಕಾಣಿಕೆಯ ಎಣಿಕೆಯ ಕಾರ್ಯ ನಡೆದಿದೆ. ಈ ವೇಳೆಯಲ್ಲಿ ಕಾಣಿಕೆ ಹಣದ ಜೊತೆಯಲ್ಲಿ ಪತ್ರವೊಂದು ದೊರೆತಿದೆ. ಪತ್ರದಲ್ಲಿ ನನ್ನ ಪತ್ನಿಗೆ ಹೆಣ್ಣು ಮಗುವಾಗಲಿ, ಹೆರಿಗೆ ಸೂಸುತ್ರವಾಗಿ ಆಗಲಿ ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೇ ನನ್ನ ಮೇಲೆ ಯಾವುದೇ ಪ್ರಕರಣ ಇಲ್ಲದಂತೆ ಮಾಡು ಭಗವಂತ ಎಂದು ಪತ್ರದ ಮೂಲಕ ದೇವರ ಮುಂದೆ ಬೇಡಿಕೆಯಿಟ್ಟಿದ್ದಾನೆ.

ಕಾಣಿಕೆ ಹಣ ಎಣಿಕೆಯ ಹೊತ್ತಲ್ಲೇ ಹರಿಕೆಯ ಪತ್ರ ನೋಡಿದ ಜನ ಅರೆಕ್ಷಣ ಆಶ್ಚರ್ಯ ಪಟ್ಟಿದ್ದಾರೆ. ಅಲ್ದಲೇ ಕಂದಾಯ ಇಲಾಖೆಯ ಸಿಬ್ಬಂದಿಗಳು ಪತ್ರ ಬರೆದಿರುವ ಭಕ್ತನ ಬೇಡಿಕೆ ಗಳನ್ನು ಈಡೇರಿಸಪ್ಪಾ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗಿದೆ. ರಾಜ್ಯದಾದ್ಯಂತ ಓಮಿಕ್ರಾನ್‌, ಕೊರೊನಾ ವೈರಸ್‌ ಸೋಂಕಿನ ಪ್ರಮಾಣ ಹೆಚ್ಚಳವಾಗಿದೆ. ಇದರಿಂದಾಗ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಕ್ಷೀಣಿಸಿದೆ.

ಆದರೂ ಕೂಡ ಕಳೆದ 31 ದಿನದ ಅವಧಿಯಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿರುವುದು ಕಂದಾಯ ಮತ್ತು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಕಳೆದ ಒಂದು ತಿಂಗಳ ಅವಧಿ ಯಲ್ಲಿ 10.45 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದ್ದು, ಅದರಲ್ಲೂ ಅಮೆರಿಕಾ ಮತ್ತು ಫಿಲಿಫೈನ್ ದೇಶದ ಮೂರು ನಾಣ್ಯಗಳು ಕಾಣಿಕೆ ರೂಪವಾಗಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ತಾಯಿ , ಒಡಹುಟ್ಟಿದವರ ಮೇಲೆಯೇ ಗುಂಡು ಹಾರಿಸಿದ 14ರ ಬಾಲಕ

ಇದನ್ನೂ ಓದಿ :  ಎರಡನೆ ಡೋಸ್​ ಲಸಿಕೆ ವಿಚಾರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ ರಾಜ್ಯದ ಈ ಜಿಲ್ಲೆ

(Hundi Money Count time found Devotees Special Letter In Koppala Anjanadri hill)

Comments are closed.