Padma Shri – Puneeth :ಪುನೀತ್‌ಗೆ ಪದ್ಮಶ್ರೀ : ಪ್ರಧಾನಿ ಮೋದಿಗೆ ಪತ್ರದ ಬರೆದ ರೇಣುಕಾಚಾರ್ಯ

ನಟ ಪುನೀತ್ ರಾಜ್ ಕುಮಾರ್ ಬಾಲನಟರಾಗಿ ಸ್ಯಾಂಡಲ್ ವುಡ್ ಗೆ ಕಾಲಿಟ್ಟು ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿಕೊಂಡವರು. ಇಂಥ ನಟನ ಅಗಲಿಕೆ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿದ್ದು ಈ ಮಧ್ಯೆ ಪುನೀತ್ ಗೆ ಪದ್ಮಶ್ರೀ ನೀಡಬೇಕೆಂಬ ಕೂಗು ಧ್ವನಿ ಪಡೆದುಕೊಂಡಿದ್ದು ರೇಣುಕಾಚಾರ್ಯ ಕೂಡ ಪದ್ಮಶ್ರೀ ನೀಡಬೇಕೆಂದು ಒತ್ತಾಯಿಸಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಪುನೀತ್ ಸಾಮಾಜಿಕ ಕಾರ್ಯಗಳು ಬೆಳಕಿಗೆ ಬಂತು. ಇದರಿಂದ ಪುನೀತ್ ಹೃದಯ ವೈಶ್ಯಾಲತೆ ಅರಿಯುವ ಅವಕಾಶ ಕರುನಾಡಿನ ಜನತೆಗೆ ಸಿಕ್ಕಿತ್ತು. ಇದರ ಜೊತೆಗೆ ಪುನೀತ್ ರಾಜ್ ಕುಮಾರ್ ಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಒತ್ತಡವೂ ಕೇಳಿಬಂದಿದೆ. ಇದೀಗ ಈ ಆಗ್ರಹಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೂಡ ಧ್ವನಿಗೂಡಿಸಿದ್ದು ಪತ್ರದ ಮೂಲಕ ಪದ್ಮಶ್ರೀ ಪ್ರಶಸ್ತಿಗೆ ಒತ್ತಾಯಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಸಿನಿಮಾ,ಸಾಧನೆ,ಸಾಮಾಜಿಕ ಕಾರ್ಯ ಎಲ್ಲದರ ಬಗ್ಗೆಯೂ ವಿವರವಾಗಿ ಉಲ್ಲೇಖಿಸಿ ಪತ್ರ ಬರೆದಿರುವ ರೇಣುಕಾಚಾರ್ಯ ಪುನೀತ್ ಗೆ ಮರಣೋತ್ತರ ಪದ್ಮಶ್ರೀ ಹಾಗೂ ಡಾ‌.ರಾಜ್ ಕುಮಾರ್ ಗೆ ಭಾರತರತ್ನ ನೀಡುವಂತೆ ಒತ್ತಾಯಿಸಿದ್ದಾರೆ. . ಈ ಬಗ್ಗೆ ಕೇಂದ್ರ ಸರ್ಕಾರ, ಪ್ರಧಾನಿ ಮೋದಿ,ಕೇಂದ್ರ ಸಚಿವ ಅನುರಾಗ್ ಠಾಕೂರ್,ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ.ನಡ್ಡಾ,ಸಿಎಂ ಬಸವರಾಜ್ ಬೊಮ್ಮಾಯಿ,ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ರೇಣುಕಾಚಾರ್ಯ ಪತ್ರ ಬರೆದಿದ್ದಾರೆ.

ಇತ್ತೀಚಿಗೆ ಪುನೀತ್ ಸಮಾಧಿಗೆ ಕುಟುಂಬ ಸಮೇತ ಭೇಟಿ ನೀಡಿದ್ದ ಮಾಜಿ ಸಚಿವ ರೇಣುಕಾಚಾರ್ಯ ನೇತ್ರದಾನದ ವಾಗ್ದಾನ ಮಾಡಿದ್ದರು . ಅಲ್ಲದೇ ಪುನೀತ್ ನಿವಾಸಕ್ಕೂ ಭೇಟಿ ನೀಡಿದ್ದು ಅಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಸಾಂತ್ವನ ಹೇಳಿದ್ದಾರೆ.

(MLA Renukacharya writes to PM Modi on giving Padma Shri award to Puneet)

Comments are closed.