Puneeth Rajkumar ಹಾದಿ ತುಳಿದ ಜಮೀರ್ : ನೇತ್ರದಾನಕ್ಕೆ ಸಹಿ ಹಾಕಿದ ಶಾಸಕ

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ನಿಧನದಿಂದ ಸ್ಯಾಂಡಲವುಡ್ ಬರಿದಾಗಿದೆ. ಆದರೆ ಪುನೀತ್ ಸ್ಪೂರ್ತಿಯಿಂದ ನೇತ್ರದಾನದ ಅರಿವು ರಾಜ್ಯದ ಎಲ್ಲೆಡೆ ಮೂಡಿದ್ದು, ಸಾವಿರಾರು ಅಂಧರಿಗೆ ಬೆಳಕು ಸಿಗುವ ಭರವಸೆ ಮೂಡಿದೆ. ಅಪ್ಪು ಸ್ಪೂರ್ತಿಯಿಂದ ಶಾಸಕ ಜಮೀರ್ ಕೂಡ ನೇತ್ರದಾನ ಮಾಡಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ತಮ್ಮ ಅಪಾರ ಅಭಿಮಾನಿಗಳು,ಕುಟುಂಬವನ್ನು ಅಗಲಿ ಬಾರದ ಲೋಕಕ್ಕೆ ತೆರಳಿದ್ದಾರೆ. ಆದರೆ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಪುನೀತ್ ತಮ್ಮ‌ಕಣ್ಣುಗಳನ್ನು ದಾನ ಮಾಡಿ ನಾಲ್ವರು ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಪುನೀತ್ ನಿಧನದ ಬಳಿಕ ನೇತ್ರದಾನ ಮಾಡಿರೋದು ಈಗ ಪುನೀತ್ ಅಭಿಮಾನಿಗಳಿಗೆ, ಆಪ್ತರಿಗೆ ಹೊಸ‌ಮಾದರಿಯನ್ನೇ ಹಾಕಿಕೊಟ್ಟಿದ್ದು, ಪುನೀತ್ ನಿಧನದ ಬಳಿಕ ರಾಜ್ಯದಲ್ಲಿ ನೇತ್ರದಾನಿಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ.

ಪ್ರತಿಯೊಂದು ಜಿಲ್ಲೆಯಲ್ಲೂ ಪುನೀತ್ ಹೆಸರಿನಲ್ಲಿ ನೇತ್ರದಾನ, ರಕ್ತದಾನ ಶಿಬಿರಗಳು ಆಯೋಜನೆಗೊಳ್ಳುತ್ತಿದ್ದು, ಜನರು ನಾವು ಸತ್ತ ಮೇಲೆ ನಮ್ಮ ಕಣ್ಣು ಮಣ್ಣಲ್ಲಿ ಮಣ್ಣಾಗೋದು ಬೇಡ ಎಂದು ನೇತ್ರದಾನ ಕ್ಕೆ ಮುಂದಾಗುತ್ತಿದ್ದಾರೆ. ಇದೇ ರೀತಿ ಪುನೀತ್ ಮತ್ತು ಡಾ.ರಾಜ್ ಕುಟುಂಬಕ್ಕೆ ಆಪ್ತರಾದ ಶಾಸಕ ಜಮೀರ್ ಅಹ್ಮದ್ ಖಾನ್ ನೇತ್ರದಾನಕ್ಕೆ ಮುಂದಾಗಿದ್ದಾರೆ. ನವೆಂಬರ್ 10 ರಂದು ಬೆಂಬಲಿಗರ ಜೊತೆ ಮಿಂಟೋ ಆಸ್ಪತ್ರೆಗೆ ತೆರಳಿದ ಶಾಸಕ ಜಮೀರ್ ಅಹ್ಮದ್ ತಮ್ಮ ನೇತ್ರದಾನ ಕ್ಕೆ ಸಹಿ ಹಾಕಿದ್ದಾರೆ.

ಜಮೀರ್ ಕುಟುಂಬ ಡಾ.ರಾಜ್ ಕುಟುಂಬದ ಜೊತೆ ಆತ್ಮೀಯವಾದ ಸಂಬಂಧ ಹೊಂದಿದ್ದು ಡಾ‌.ರಾಜ್ ವೀರಪ್ಪನ್ ಕಪಿಮುಷ್ಠಿಯಿಂದ ಹೊರಬಂದ ಮೂರನೇ ದಿನಕ್ಕೆ ಜಮೀರ್ ಮನೆಗೆ ತೆರಳಿ ಜಮೀರ್ ತಾಯಿಯ ಕೈರುಚಿ ಸವಿದಿದ್ದರಂತೆ. ಜಮೀರ್ ತಾಯಿಯ ಕೈರುಚಿಯಲ್ಲಿ ನಾನ್ ವೆಜ್ ಊಟವನ್ನು ರಾಜ್ ಇಷ್ಟ ಪಟ್ಟು ಸವಿಯುತ್ತಿದ್ದರಂತೆ.

ಈ ಬಾಂಧವ್ಯವೂ ಡಾ‌.ರಾ‌ಜ್ ಬಳಿಕ ಅವರ ಮಕ್ಕಳೊಂದಿಗು ಮುಂದುವರೆದಿದ್ದು, ಇಂದಿಗೂ ಜಮೀರ್ ಪುನೀತ್ ಜೊತೆ ಆತ್ಮೀಯವಾಗಿದ್ದರು. ಜಮೀರ್ ಪುತ್ರ ಝೈದ್ ಖಾನ್ ಸಿನಿಮಾರಂಗಕ್ಕೆ ಪ್ರವೇಶಿಸುತ್ತಿದ್ದಾರೆ‌. ಈ ವಿಚಾರಕ್ಕೆ ಸಂಬಂಧಿಸಿದಂತೆ ಝೈದ್ ಖಾನ್ ಗೆ ಪುನೀತ್ ಸಾಕಷ್ಟು ಸಜೇಶನ್ ನೀಡಿದ್ದರಂತೆ ಮಾತ್ರವಲ್ಲ ಸದಾ ಪ್ರೋತ್ಸಾಹಿಸುತ್ತಿದ್ದರಂತೆ. ಪುನೀತ್ ನಿಧನದ ಒಂದು ದಿನ ಮೊದಲು ಕೂಡ ಪುನೀತ್ ಝೈದ್ ಜೊತೆ ಮಾತನಾಡಿದ್ದರಂತೆ. ಹೀಗೆ ಪುನೀತ್ ಆತ್ಮೀಯ ಬಾಂಧವ್ಯ ಹೊಂದಿದ್ದ ಚಾಮರಾಜಪೇಟೆ ಶಾಸಕ ಜಮೀರ್ ತಮ್ಮ ಹಾಗೂ ಪುನೀತ್ ನಡುವಿನ ಸ್ನೇಹವನ್ನು ಚಿರನೆನಪಾಗಿಸಲು ನೇತ್ರದಾನಕ್ಕೆ ಸಿದ್ಧವಾಗಿದ್ದಾರೆ.

ಇದನ್ನೂ ಓದಿ : ಅಪ್ಪುಗೆ ಪದ್ಮಶ್ರೀ ಅಭಿಯಾನ : ಸಹೋದರ ಶಿವಣ್ಣ ಹೇಳಿದ್ದೇನು ಗೊತ್ತಾ?

ಇದನ್ನೂ ಓದಿ : ಪುನೀತ್‌ ರಾಜ್‌ ಕುಮಾರ್ ಪುಣ್ಯಸ್ಮರಣೆ : ಅಭಿಮಾನಿಗಳಿಗೆ ಊಟ ಬಡಿಸಿದ ದೊಡ್ಮನೆ ಕುಟುಂಬ

(Puneeth Raj kumar inspired, Eye Donated MLA Zameer Ahamad Khan)

Comments are closed.