bs yediyurappa grand daughter soundarya : ಸೌಂದರ್ಯ ಆತ್ಮಹತ್ಯೆ ಪ್ರಕರಣ: ನಿಜಕ್ಕೂ ಅಪಾರ್ಟ್​ಮೆಂಟ್​ನಲ್ಲಿ ನಡೆದದ್ದೇನು..?ಇಲ್ಲಿದೆ ಡಿಟೈಲ್ಸ್​

ಬೆಂಗಳೂರು : bs yediyurappa grand daughter soundarya: ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಸಾವು ಇಡೀ ಕುಟುಂಬಕ್ಕೆ ದೊಡ್ಡ ಆಘಾತವನ್ನೇ ತಂದಿದೆ. ಹಿರಿಯ ಪುತ್ರಿ ಪದ್ಮಾವತಿಯವರ ಮಗಳಾಗಿದ್ದ ಸೌಂದರ್ಯ ಅಗಲಿಕೆಯಿಂದ ಇಡೀ ಕುಟುಂಬದಲ್ಲಿ ದುಃಖದ ಕಾರ್ಮೋಡವೇ ಆವರಿಸಿದೆ. ಆದರೆ ಸುಖ ಸಂಸಾರದಲ್ಲಿ ಹಾಯಾಗಿದ್ದ ಸೌಂದರ್ಯ ಇಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾದರೂ ಏಕೆ ಎಂಬ ಪ್ರಶ್ನೆ ಜೋರಾಗಿ ಕಾಡುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಹೆರಿಗೆಯ ಬಳಿಕ ಸೌಂದರ್ಯ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.



ವೃತ್ತಿಯಲ್ಲಿ ವೈದ್ಯೆಯಾಗಿದ್ದ ಸೌಂದರ್ಯ 2018ರಲ್ಲಿ ಬೆಂಗಳೂರು ಜಿಲ್ಲಾ ಪಂಚಾಯತ್​​ ಅಧ್ಯಕ್ಷ ಮುನಿಸ್ವಾಮಪ್ಪ ಸಹೋದರನ ಪುತ್ರನನ್ನು ವರಿಸಿದ್ದರು. ಇಬ್ಬರೂ ವೃತ್ತಿಯಲ್ಲಿ ವೈದ್ಯರಾಗಿದ್ದರಿಂದ ಇಬ್ಬರಿಗೂ ಮೊದಲೇ ಪರಿಚಯವಿತ್ತು. ಕುಟುಂಬಸ್ಥರ ಇಚ್ಛೆಯಂತೆ ಮದುವೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೆರವೇರಿಸಲಾಗಿತ್ತು.


ಬೌರಿಂಗ್​ ಆಸ್ಪತ್ರೆಯಲ್ಲಿ ಸೌಂದರ್ಯ ಸರ್ಜನ್​ ಆಗಿದ್ದರು. ಪತಿ ನೀರಜ್​ ಕೂಡ ವೃತ್ತಿಯಲ್ಲಿ ವೈದ್ಯರು. ಆರು ತಿಂಗಳ ಹಿಂದೆ ಸೌಂದರ್ಯ ಗಂಡು ಮಗುವಿಗೆ ಜನ್ಮ ನೀಡಿದ್ದರು, ಇದಾದ ಬಳಿಕ ಸೌಂದರ್ಯ ತಮ್ಮ ತಾಯಿಯ ಮನೆಯಲ್ಲಿಯೇ ಇದ್ದರು ಎನ್ನಲಾಗಿದೆ. ತಾತನ ಕಾವೇರಿ ನಿವಾಸದಿಂದ ಸೌಂದರ್ಯ ಎರಡು ದಿನಗಳ ಹಿಂದೆಯಷ್ಟೇ ಗಂಡನ ಮನೆಗೆ ಮರಳಿದ್ದರು.


ಆದರೆ ಕಳೆದ ಕೆಲವು ದಿನಗಳಿಂದ ಪತಿ ನೀರಜ್​ ಜೊತೆಯಲ್ಲಿ ಸೌಂದರ್ಯ ಸಣ್ಣ ಜಟಾಪಟಿ ಮಾಡಿಕೊಂಡಿದ್ದರು .. ವಸಂತನಗರದಲ್ಲಿರುವ ನೀರಜ್​ ಫ್ಲಾಟ್​ಗೆ ತೆರಳಿದ್ದ ವೇಳೆಯಲ್ಲಿ ಇಬ್ಬರ ನಡುವೆ ಕಲಹ ಏರ್ಪಟ್ಟಿತ್ತು ಎನ್ನಲಾಗಿದೆ. ಆದರೆ ಇದನ್ನು ಹೊರತುಪಡಿಸಿ ಪತಿ ಪತ್ನಿ ನಡುವೆ ಯಾವುದೇ ರೀತಿಯ ಜಗಳ, ಮನಸ್ತಾಪಗಳೇನೂ ಇರಲಿಲ್ಲ ಎನ್ನಲಾಗಿದೆ.


ಪತಿ ನೀರಜ್​ ಬೆಳಗ್ಗೆ 8 ಗಂಟೆ ಸುಮಾರಿಗೆ ಎಂದಿನಂತೆ ತಮ್ಮ ಕೆಲಸಕ್ಕೆ ತೆರಳಿದ್ದರು. ಮನೆಯಲ್ಲಿ ಮಗು ಹಾಗೂ ಮನೆಗೆಲಸದವರು ಇದ್ದರು. ಮನೆಯ ಕೆಲಸದಾಕೆಗೆ ಮಗುವನ್ನು ನೋಡಿಕೊಳ್ಳುವಂತೆ ಹೇಳಿದ್ದ ಸೌಂದರ್ಯ ತಮ್ಮ ಬೆಡ್​ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದರು. 10 ಗಂಟೆ ಕಳೆದರೂ ಸೌಂದರ್ಯ ಬಾಗಿಲು ತೆರೆಯದ್ದನ್ನು ನೋಡಿ ಮನೆಗೆಲಸದಾಕೆಗೆ ಅನುಮಾನ ಶುರುವಾಗಿದೆ. ಕೂಡಲೇ ಹೋಗಿ ಬಾಗಿಲು ತಟ್ಟಿದ್ದಾರೆ.
ಆದರೆ ಸೌಂದರ್ಯ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನೆಲೆಯಲ್ಲಿ ಮನೆಗೆಲಸದಾಕೆ ನೀರಜ್​ಗೆ ಕರೆ ಮಾಡಿದ್ದಾರೆ. ಅಲ್ಲದೇ ಅಪಾರ್ಟ್​ಮೆಂಟ್​ನ ಸಿಬ್ಬಂದಿಗೂ ಮಾಹಿತಿ ನೀಡಲಾಗಿತ್ತು. ಅಪಾರ್ಟ್​ಮೆಂಟ್​ನ ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ಸೌಂದರ್ಯ ದುಪ್ಪಟ್ಟಾದಿಂದ ನೇಣು ಬಿಗಿದುಕೊಂಡಿದ್ದರು.


ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಸೌಂದರ್ಯರನ್ನು ಮಲ್ಲಿಗೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ವೈದ್ಯರು ಸೌಂದರ್ಯ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದಾರೆ. ಸೌಂದರ್ಯ ಕುತ್ತಿಗೆಯಲ್ಲಿ ಮಾರ್ಕ್​ ಬಿಟ್ಟರೆ ಇನ್ಯಾವುದೇ ಗಾಯದ ಕಲೆಗಳು ಅವರ ದೇಹದ ಮೇಲೆ ಇರಲಿಲ್ಲ. ಬಳಿಕ ಮರಣೋತ್ತರ ಪರೀಕ್ಷೆಗೆ ಅವರ ದೇಹವನ್ನು ಬೌರಿಂಗ್​ ಆಸ್ಪತ್ರೆಗೆ ರವಾನಿಸಲಾಗಿತ್ತು.
ಮರಣೋತ್ತರ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಅಬ್ಬಿಗೆರೆಯಲ್ಲಿರುವ ನೀರಜ್​ ಫಾರ್ಮ್ ಹೌಸ್​ನಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

small miss understanding between bs yediyurappa grand daughter soundarya and her husband neeraj

ಇದನ್ನು ಓದಿ : no night curfew : ಜನವರಿ 31ರಿಂದ ರಾಜ್ಯದಲ್ಲಿ ನೈಟ್​ ಕರ್ಫ್ಯೂ ರದ್ದು : ಶಾಲೆಗಳು ಪುನಾರಂಭ

ಇದನ್ನೂ ಓದಿ : Yadiyurappa grand daughter suicide : ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಮೊಮ್ಮಗಳು ಆತ್ಮಹತ್ಯೆಗೆ ಶರಣು

Comments are closed.