ಶಂಕರನಾರಾಯಣ : ಪತಿಯ ಹಿಂಸೆ ತಡೆಯಲಾರದೆ ಪತ್ನಿ ಆತ್ಮಹತ್ಯೆ

Kundapura News : ಶಂಕರನಾರಾಯಣ: ಪತಿಯ ದೈಹಿಕ ಮತ್ತು ಮಾನಸಿಕ ಹಿಂಸೆ ತಡೆಯಲಾರದೆ ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆಗೆ ಸಂಬಂಧಿಸಿದಂತೆ, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲೆಯ ಆಜ್ರಿ ಗ್ರಾಮದ ಹೊಳಂದೂರು ಹೆಬ್ಬಾಗಿಲು ನಿವಾಸಿ ಶ್ರೀಮತಿ ಸುಜಾತಾ (34ವರ್ಷ) ಅವರು ದೂರು ನೀಡಿದ ಮಹಿಳೆ. ಕಮಗೊಳ್ಳಿ ತೊಂಬತ್ತು ನಿವಾಸಿಯಾದ ಸಂತೋಷ್ ಶೆಟ್ಟಿ ಅವರೊಂದಿಗೆ 23-05-2013 ರಂದು ಇವರ ಮದುವೆಯಾಗಿತ್ತು.
ಮದುವೆಯ ಬಳಿಕ ಎರಡು ವರ್ಷಗಳ ಕಾಲ ಪತಿಯ ಮನೆಯಲ್ಲಿ ವಾಸವಾಗಿದ್ದಾಗ, ಸಂತೋಷ್ ಶೆಟ್ಟಿಯು ಕುಡಿದು ಬಂದು ವಿನಾ ಕಾರಣ ಗಲಾಟೆ ಮಾಡುತ್ತಿದ್ದ. ಪತಿಯ ಹಿಂಸೆ ತಡೆಯಲಾಗದೆ ಸುಜಾತಾ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಂದೆಯ ಮನೆಗೆ ಬಂದು ವಾಸವಾಗಿದ್ದರು.
ಆದರೂ ಸಂತೋಷ್ ಶೆಟ್ಟಿಯು ಅಲ್ಲಿಗೂ ಬಂದು ವಿಪರೀತ ಶರಾಬು ಸೇವಿಸಿ ಕೈಯಿಂದ ಹೊಡೆದು ದೌರ್ಜನ್ಯ ಮುಂದುವರೆಸಿದ್ದ. ಈ ಬಗ್ಗೆ ಸುಜಾತಾ ಅವರು ಈ ಹಿಂದೆ ಮೂರು ಬಾರಿ ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಎಚ್ಚರಿಕೆ ನಂತರವೂ ಗಲಾಟೆ ನಿಂತಿರಲಿಲ್ಲ.
ಪತಿಯ ದೈಹಿಕ ಮತ್ತು ಮಾನಸಿಕ ಹಿಂಸೆ (ವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹೊಡೆದು, ಮನೆ ಬಿಟ್ಟು ಹೋಗುವಂತೆ ಬೆದರಿಕೆ) ತಡೆಯಲು ಅಸಾಧ್ಯವಾದಾಗ, ಸುಜಾತಾ ಅವರು ಅಡಿಕೆ ಮರಕ್ಕೆ ಬಳಸುವ ವಿಷವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಇದನ್ನು ಅರಿತ ಅವರ ಮಗಳು ಮತ್ತು ಅಕ್ಕ ತಕ್ಷಣವೇ ಅವರನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 90/2025 ರಂತೆ, ಭಾರತೀಯ ನ್ಯಾಯ ಸಂಹಿತೆಯ (BNS) ಕಲಂ 85, 115(2), 352, 351(2) ಅಡಿಯಲ್ಲಿ ಸಂತೋಷ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಲಾಗಿದೆ.
Shankaranarayana Police Station Kundapura News



