ಬುಧವಾರ, ಜೂನ್ 18, 2025
HomeBreakingದೋಣಿ ಮೂಲಕ ಕೇರಳಿಗರ ಅಕ್ರಮ ಪ್ರವೇಶ : ಮಂಗಳೂರಲ್ಲಿ ಯಾಕೂಬ್ ಗ್ಯಾಂಗ್ ಬಂಧನ

ದೋಣಿ ಮೂಲಕ ಕೇರಳಿಗರ ಅಕ್ರಮ ಪ್ರವೇಶ : ಮಂಗಳೂರಲ್ಲಿ ಯಾಕೂಬ್ ಗ್ಯಾಂಗ್ ಬಂಧನ

- Advertisement -

ಮಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಕೇರಳ – ಕರ್ನಾಟಕ ಗಡಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಕೇರಳದಿಂದ ದೋಣಿಯ ಮೇಲೆ ಅಕ್ರಮವಾಗಿ ಜನರನ್ನು ಸಾಗಾಟ ಮಾಡುತ್ತಿದ್ದ ಯಾಕೂಬ್ ಗ್ಯಾಂಗ್ ನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 8 ಮಂದಿ ಕೇರಳಿಗರನ್ನು ಬಂಧಿಸಿರೋ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ.

Harsha Ips

ಕೇರಳದಿಂದ ಯಾಕೂಬ್ ಹಾಗೂ ಇತರ 8 ಮಂದಿಯ ತಂಡ ದೋಣಿಯ ಮೂಲಕ ಕೇರಳದಿಂದ ಮಂಗಳೂರು ಹೊರವಲಯದ ಅಡ್ಡೂರಿಗೆ ಬಂದಿತ್ತು. ಖಚಿತ ಮಾಹಿತಿಯ ಮೇಲೆ ದಾಳಿ ನಡೆಸಿ ಮಂಗಳೂರು ಪೊಲೀಸರು ಅಕ್ರಮವಾಗಿ ಜಿಲ್ಲೆಯೊಳಗೆ ಪ್ರವೇಶಿಸಿರುವ 9 ಮಂದಿಯನ್ನು ಬಂಧಿಸಿದ್ದಾರೆ.

Mangalore Kerala 2

ಎಲ್ಲರ ಮೇಲೆಯೂ ಕ್ರಿಮಿನಲ್ ಕೇಸು ದಾಖಲಿಸಲಾಗಿದ್ದು, ಅವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಯನ್ನು ನಡೆಸಲಾಗುತ್ತಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಹರ್ಷಾ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

Alvas1

ಯಾಕೂಬ್ ಕೇರಳದಿಂದ ಜನರನ್ನು ಮಂಗಳೂರಿಗೆ ದೋಣಿಯ ಮೇಲೆ ಸಾಗಾಟ ಮಾಡುತ್ತಿದ್ದ ಅನ್ನೋ ಆರೋಪ ಕೇಳಿಬಂದಿದೆ.

Wenlock Hospita

ಇದೀಗ ಯಾಕೂಬ್ ಗ್ಯಾಂಗ್ ಬಂಧನವಾಗುತ್ತಿದ್ದಂತೆಯೇ ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮಾತ್ರವಲ್ಲ ಕೆಲವು ಅಂಬ್ಯುಲೆನ್ಸ್ ಡ್ರೈವರ್ ಗಳನ್ನೂ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಕೇರಳ ಗಡಿ ಬಂದ್ ಆಗಿರೋ ಹಿನ್ನೆಲೆಯಲ್ಲಿ ಈ ಗ್ಯಾಂಗ್ ಜನರನ್ನು ಕರ್ನಾಟಕಕ್ಕೆ ಸಾಗಾಟ ಮಾಡುವ ಕಾರ್ಯವನ್ನು ಮಾಡುತ್ತಿದ್ಯಾ ಅನ್ನೋ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ.

Mangalore Kerala 1

ಇದೀಗ ಯಾಕೂಬ್ ಗ್ಯಾಂಗ್ ಬಂಧನವಾಗುತ್ತಿದ್ದಂತೆಯೇ ಮಂಗಳೂರಲ್ಲಿ ಆತಂಕ ಹೆಚ್ಚಾಗಿದೆ. ಮಂಗಳೂರು ಪೊಲೀಸರು ಈ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular