ಮತ್ತೊಮ್ಮೆ ಸಂಕಷ್ಟಕ್ಕಿಡಾದ ಮಾಜಿ ಸಚಿವ ರಮೇಶ್ ಜಾರಕಿಹೊಳಿ..! ವಕೀಲರ ಮೂಲಕ ದೂರು ಸಲ್ಲಿಸಿದ ಸಂತ್ರಸ್ಥ ಯುವತಿ…!!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿಪ್ರಕರಣ ಮತ್ತಷ್ಟು ಜಟಿಲವಾಗುತ್ತ ಸಾಗುತ್ತಿದ್ದು, ಸಂತ್ರಸ್ಥೆ ಎನ್ನಲಾದ ಯುವತಿ ವಕೀಲರ ಮೂಲಕ ಭದ್ರತೆ ಕೋರಿ ನಗರ ಪೊಲೀಸ್ ಆಯುಕ್ತರಿಗೆ ದೂರು ಹಾಗೂ ಮನವಿ ಸಲ್ಲಿಸಿದ್ದಾರೆ.

ಯುವತಿಗೆ ಹಾಗೂ ಅವರ ಕುಟುಂಬಕ್ಕೆ ಜೀವಬೆದರಿಕೆ ಎಂದು ಪತ್ರದಲ್ಲಿ ಬರೆಯಲಾಗಿದ್ದು, ಯುವತಿಯೇ ಕೈಬರಹದಲ್ಲಿ  ಬರೆದು ತಮ್ಮ ಮೂಲಕ ಸಹಾಯಕ ಆಯುಕ್ತರಿಗೆ ನೀಡುವಂತೆ ಕೋರಿದ್ದಾರೆ. ಭದ್ರತೆ ಸಿಕ್ಕ ಬಳಿಕ ಯುವತಿಯೇ  ಪೊಲೀಸರ ಆಯುಕ್ತರ ಎದುರು ಹಾಜರಾಗಲಿದ್ದಾರೆ ಎಂದು ಯುವತಿ ಪರ ದೂರು ಸಲ್ಲಿಸಿದ ವಕೀಲ್ ಜಗದೀಶ್ ಮಾಧ್ಯಮಗಳಿಗೆ ಹೇಳಿದ್ದಾರೆ.

ಯುವತಿ ನಗರ ಪೊಲೀಸ್ ಆಯುಕ್ತರಿಗೆ ಇವತ್ತು ವಕೀಲರ ಮೂಲಕ ಆಯುಕ್ತರಿಗೆ ನೀಡಿದ   ದೂರಿನಲ್ಲಿ, ಸಚಿವರಾದ ರಮೇಶ್ ಜಾರಕಿಹೊಳಿ ನನಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನೊಂದಿಗೆ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿ ಬಳಿಕ ನನ್ನನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

ಘಟನೆಯನ್ನು ವಿವರವಾಗಿ ಬರೆದಿರುವ ಯುವತಿ, ಸಾಕ್ಷ್ಯಚಿತ್ರವೊಂದರ ನಿರ್ಮಾಣಕ್ಕಾಗಿ ನಾನು ಸಚಿವರನ್ನು ಭೇಟಿ ಮಾಡಿದ್ದೆ. ಈ ವೇಳೆ ನನ್ನ ಮೊಬೈಲ್ ನಂಬರ್ ಪಡೆದ ಸಚಿವರು ಆತ್ಮೀಯವಾಗಿ ಮಾತನಾಡಿದರು. ಬಳಿಕ ಆಗಾಗ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿ, ನಗ್ನರಾಗಿ ವಿಡಿಯೋ ಕಾಲ್ ಮಾಡುವಂತೆಯೂ ಒತ್ತಾಯಿಸುತ್ತಿದ್ದರು. ‘ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ನನ್ನನ್ನು ದೈಹಿಕವಾಗಿ ಬಳಸಿಕೊಂಡರು.

ಬಳಿಕ ಕರ್ನಾಟಕ ಭವನದಲ್ಲಿದ್ದಾಗಲೂ ನನ್ನೊಂದಿಗೆ ಪೋನ್ ನಲ್ಲಿ ಅಶ್ಲೀಲವಾಗಿ ನಡೆದುಕೊಂಡರು. ಬೆಂಗಳೂರಿಗೆ ಬಂದ ಮೇಲೆ ಫ್ಲ್ಯಾಟ್ ಗೂ ಕರೆಸಿಕೊಂಡು ದೈಹಿಕವಾಗಿ ಬಳಸಿಕೊಂಡರು. ಆದರೆ ಕೆಲಸ ಕೊಡಿಸಲಿಲ್ಲ. ಕೇಳಿದರೆ ಹಣ ಕೊಡುತ್ತೇನೆ. ಕೆಲಸದ ವಿಚಾರ ಆಮೇಲೆ ನೋಡೋಣ ಎನ್ನುತ್ತಿದ್ದರು.

ಬಳಿಕ ನಮ್ಮ ಅಶ್ಲೀಲ ವಿಡಿಯೋ ಮಾಧ್ಯಮದಲ್ಲಿ ಪ್ರಸಾರವಾಯಿತು.  ನನ್ನ ತೇಜೋವಧೆ ಮಾಡಲು ಹಾಗೂ ಹೆದರಿಸಲು ರಮೇಶ್ ಜಾರಕಿಹೊಳಿ ಈ ತಂತ್ರ ಅನುಸರಿಸಿದ್ದಾರೆ. ಹಣವಂತರೂ ಹಾಗೂ ಅತ್ಯಂತ ಬಲಶಾಲಿಗಳು ಆಗಿರುವ ರಮೇಶ್ ಜಾರಕಿಹೊಳಿ ಕುಟುಂಬದಿಂದ ನನಗೆ ಜೀವಬೆದರಿಕೆ ಇದೆ. ನಾನು ಸಿಕ್ಕರೆ ಅವರು ಕೊಂದೇ ಬಿಡುತ್ತಾರೆ. ನನಗೆ ರಕ್ಷಣೆ ಬೇಕು ಎಂದು ಯುವತಿ ಮನವಿ ಮಾಡಿದ್ದಾರೆ.

ಪೊಲೀಸರನ್ನು ತಮ್ಮ ಪ್ರಭಾವದಿಂದ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿ ಜೀವಭಯದಿಂದ ನಾನು ನನಗೆ ಪರಿಚಯಸ್ಥರಾದ ಜಗದೀಶ್ ಅವರ ಬಳಿ ದೂರು ಬರೆದು ಕಳುಹಿಸುತ್ತಿದ್ದೇನೆ. ನನಗೂ ನನ್ನ ಕುಟುಂಬಕ್ಕೂ ರಕ್ಷಣೆ ನೀಡಿ ಎಂದು ಯುವತಿ ಮನವಿ ಮಾಡಿದ್ದಾರೆ. ಸಂತ್ರಸ್ಥ ಯುವತಿಯ ಮನವಿಯಂತೆ ವಕೀಲರು ದೂರನ್ನು ಆಯುಕ್ತರಿಗೆ ನೀಡಿದ್ದಾರೆ.

Comments are closed.