ಬೆಂಗಳೂರು : ರಾಜ್ಯದಲ್ಲಿ ಸರಕಾರವನ್ನೇ ಬೀಳಿಸಿದ್ದೇನೆ. ಇದ್ಯಾವ ಲೆಕ್ಕ. ಇಂತಹ 10 ಸಿಡಿಗಳು ಬರಲಿ ಅದನ್ನು ಎದುರಿಸಲು ನಾನು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಇಂದು ತನ್ನ ವಕೀಲರ ಪರವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವತಿ ಸಂತ್ರಸ್ತೆ ಆಗಿದ್ದರೆ ಮೊದಲೇ ಏಕೆ ದೂರು ನೀಡಲಿಲ್ಲ. ಇದೀಗ ದೂರು ನೀಡಿರುವುದರ ಹಿಂದೆ ಷಡ್ಯಂತ್ರ್ಯ ಅಡಗಿದೆ ಎಂದು ಜಾರಕಿಹೊಳಿ ತಿಳಿಸಿದ್ದಾರೆ.
ನಾನು ಯಾವುದಕ್ಕೂ ಹೆದರುವುದಿಲ್ಲ. ನಾನು ಎಲ್ಲದಕ್ಕೂ ಸಿದ್ದವಾಗಿದ್ದೇನೆ. ಯುವತಿಗಿಂತಲೂ ಮೊದಲೇ ನಾನು ದೂರು ನೀಡಿದ್ದೇನೆ. ಪೊಲೀಸರು ತನಿಖೆ ನಡೆಸಲಿ. ನಾನೂ ಕೂಡ ವಕೀಲರನ್ನು ಭೇಟಿಯಾಗುತ್ತೇನೆ. ಯುವತಿ ದೂರು ನೀಡಿರುವುದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ. ಇಂತಹ 10 ಸಿಡಿಗಳು ಬಂದೂ ಕೂಡ ಎದುರಿಸಲು ನಾನು ಸಿದ್ದ ಎಂದಿದ್ದಾರೆ.
Comments are closed.