ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಬೆಂಗಳೂರಲ್ಲಿಂದು ಕೂಡ ಕೊರೊನಾ ಸೋಂಕು ಸಾವಿರದ ಗಡಿದಾಟಿದ್ದರೆ, ಉಡುಪಿಯಲ್ಲಿ ಕೊರೊನಾ ಮಹಾಮಾರಿ ಆರ್ಭಟಿಸಿದ್ದು, ಸೋಂಕಿತರ ಸಂಖ್ಯೆ ದ್ವಿಶತಕದ ಗಡಿದಾಟಿದೆ. ಅಲ್ಲದೇ ತುಮಕೂರು, ಕಲಬುರಗಿಯಲ್ಲಿಯೂ ಕೊರೊನಾ ಮಹಾಮಾರಿ ಸ್ಪೋಟಗೊಂಡಿದೆ.
ರಾಜ್ಯದಲ್ಲಿಂದು ಒಟ್ಟು 2566 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬೆಂಗಳೂರಲ್ಲಿ 1,490, ಉಡುಪಿ 210, ಕಲಬುರಗಿ 109, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 72, ಮೈಸೂರು 67, ಬೀದರ್ ನಲ್ಲಿ 65, ಬೆಂಗಳೂರು ಗ್ರಾಮಾಂತರ 59, ಕೋಲಾರ 45, ವಿಜಯಪುರ 36, ಮಂಡ್ಯ 34, ಹಾಸನ 32, ಧಾರವಾಡ 31, ಬಳ್ಳಾರಿ 27, ಬೆಳಗಾವಿ 25, ಚಿತ್ರದುರ್ಗ 20, ಚಿಕ್ಕಬಳ್ಳಾಪುರ 15, ಗದಗ 14, ಶಿವಮೊಗ್ಗ 14, ಉತ್ತರ ಕನ್ನಡ 13, ರಾಯಚೂರು 12, ಯಾದಗಿರಿ 10, ಬಾಗಲಕೋಟೆ 9, ಚಿಕ್ಕಮಗಳೂರು 6, ದಾವಣಗೆರೆ 6, ಕೊಡಗು 6, ಕೊಪ್ಪಳ 6, ಹಾವೇರಿ 5, ಚಾಮರಾಜನಗರ 1 ಹಾಗೂ ರಾಮನಗರ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 9.81,044 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿಂದು ಒಟ್ಟು 13 ಮಂದಿ ಹೆಮ್ಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
Comments are closed.