ಕರುನಾಡ ಕನಸುಗಾರನಿಗೆ ಸ್ಪೆಶಲ್ ಗಿಫ್ಟ್…!! ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆಯಾಯ್ತು ಕನ್ನಡಿಗ ಟೀಸರ್…!!

ಇದೇ ಮೊದಲ ಬಾರಿಗೆ ಇತಿಹಾಸದ ಕತೆಯೊಂದಕ್ಕೆ ಪಾತ್ರವಾಗಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್. ಕನ್ನಡದ ಕನಸುಗಾರ ಕನ್ನಡಿಗನಾಗಿ‌ ಮಿಂಚಿರುವ ಈ ಚಿತ್ರದ ಟೀಸರ್ ರವಿಮಾಮನ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಆಗಿದೆ.

https://kannada.newsnext.live/second-puc-exam-canceled-decision-on-supreme-court-examination/

ಬಿ.ಎಂ.ಗಿರಿರಾಜ್ ಆಕ್ಷ್ಯನ್ ಕಟ್ ಹೇಳ್ತಿರುವ‌ ಕನ್ನಡಿಗ ಸಿನಿಮಾ ಇತಿಹಾಸದ ಎಳೆಯೊಂದನ್ನು ಕತೆಯಾಗಿ ಹೇಳಲು ಹೊರಟಿದೆ. ಎನ್.ಎಸ್.ರಾಜಕುಮಾರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕ್ರೇಜಿಸ್ಟಾರ್ ಗೆ ಪಾವನಿ ನಾಯಕಿಯಾಗಿದ್ದಾರೆ.

https://kannada.newsnext.live/smokers-more-attack-corona-virus-who-warning/

ಕೊರೋನಾದಿಂದ ಸತತ ಎರಡು ವರ್ಷಗಳಿಂದ ಕ್ರೇಜಿಸ್ಟಾರ್ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗುತ್ತಿಲ್ಲ.‌ಹೀಗಾಗಿ ಕನ್ನಡಿಗ ಚಿತ್ರತಂಡ ರವಿಚಂದ್ರನ್ ಗಾಗಿ ಸ್ಪೆಶಲ್ ಟೀಸರ್ ವೊಂದನ್ನು ರಿಲೀಸ್ ಮಾಡಿ ಗೌರವ ಸಲ್ಲಿಸಿದೆ.

ಕಾವೇರಿಯಿಂದ ಗೋದಾವರಿಯವರೆಗೂ ಕರುನಾಡ ಹಿರಿಮೆಯನ್ನು ಬೆಳಗಿಸಿದ ಕನ್ನಡಿಗರು ಹಲವರು.ಅವರೆಲ್ಲರ ಅವಿರತ ಹೋರಾಟ ಶ್ರಮ,ತ್ಯಾಗ,ಬಲಿದಾನವನ್ನು ನಾವು ಮರೆತಿದ್ದೇವೆ. ಇದು ಅಂತಹುದೇ ಲಿಪಿಕಾರನೊಬ್ಬನ‌ ಕತೆ ಎಂದಿರುವ ಚಿತ್ರತಂಡ ಕನಸುಗಾರನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

ಇನ್ನು ರವಿಚಂದ್ರನ್ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿರೋ ಕನ್ನಡಿಗಾ ಸಿನಿಮಾದ ಟೀಸರ್ ರಿಲೀಸ್ ಆಗುತ್ತಿದ್ದಂತೆ ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ್ದು, ಕೆಲವೇ ಗಂಟೆಗಳಲ್ಲಿ 25 ಕೆ ವಿವ್ಸ್ ಪಡೆದುಕೊಂಡಿದೆ.

Comments are closed.