ಅರೆಬೆತ್ತಲೆ ದೇಹದ ಜೊತೆ ಗಣೇಶ್ ನ ಲಾಕೆಟ್….! ಮತ್ತೊಮ್ಮೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾದ ರಿಯಾನಾ…!!

ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡುವ ಮೂಲಕ ದೇಶದಾದ್ಯಂತ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ಪಾಪ್ ಗಾಯಕಿ ರಿಯಾನಾ ಮತ್ತೊಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟಾಪ್ ಲೆಸ್ ಪೋಟೋದಲ್ಲಿ ರಿಯಾನಾ ಗಣೇಶ್ ವಿಗ್ರಹವಿರುವ ಲಾಕೆಟ್ ಧರಿಸಿದ್ದು ಧಾರ್ಮಿಕ ಭಾವನೆಗೆ ಧಕ್ಕೆ ಎಂಬ ಕೂಗು ಕೇಳಿಬಂದಿದೆ.

ತಮ್ಮ ಟಾಪ್ ಲೆಸ್ ಪೋಟೋವೊಂದನ್ನು ಹಂಚಿಕೊಂಡಿರುವ ರಿಯಾನಾ ಅದರಲ್ಲಿ ಗಣೇಶ್ ನ ಪೆಂಡೆಂಟ್ ವೊಂದನ್ನು ಧರಿಸಿದ್ದಾರೆ. ಈ ಪೋಟೋಕ್ಕೆ ಭಾರತದಾದ್ಯಂತ ವಿರೋಧ ವ್ಯಕ್ತವಾಗಿದ್ದು, ವಿಶ್ವಹಿಂದೂಪರಿಷತ್, ಭಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ರಿಯಾನಾ ವಿರುದ್ಧ ತಿರುಗಿ ಬಿದ್ದಿವೆ. ‘

ಈಗಾಗಲೇ ದೆಹಲಿ ಹಾಗೂ ಮುಂಬೈಯಲ್ಲಿ ರಿಯಾನಾ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಪೊಲೀಸ್ ದೂರು ದಾಖಲಾಗಿದೆ. ಅಷ್ಟೇ ಅಲ್ಲ ರಿಯಾನಾ ಟ್ವೀಟ್ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂಬ ಒತ್ತಡವೂ ಕೇಳಿಬಂದಿದೆ.

ಆದರೆ ರಿಯಾನಾ ಈ ಟಾಪ್ ಲೆಸ್ ಪೋಟೋ ಹಾಗೂ ಗಣೇಶ್  ನ ಪೆಂಡೆಂಟ್ ಧರಿಸಿರುವ ಪೋಟೋವನ್ನು ಆಕೆಯ ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ. ಆದರೆ ನಮ್ಮ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರಲೆಂದೇ ರಿಯಾನಾ ಈ ರೀತಿಯ ಪದಕ ಧರಿಸಿದ್ದಾರೆ ಎಂದು ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ ಕದಮ್ ಟೀಕಿಸಿದ್ದಾರೆ.

ಇನ್ನು ಸಾಮಾಜಿಕ ಸ್ವಾಸ್ಥ್ಯ ಕದಡುವ ರಿಯಾನಾ ಖಾತೆಯನ್ನು ಶಾಶ್ವತವಾಗಿ ರದ್ದುಗೊಳಿಸಬೇಕೆಂದು ವಿಎಚ್ ಪಿ ಒತ್ತಾಯಿಸಿದ್ದು, ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಗೆ ಟ್ವೀಟ್ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಅಲ್ಲದೇ ಹಿಂದೂಗಳ ಜೊತೆ ಸೇರಿ ರಿಯಾನಾ ಅಕೌಂಟ್ ಬಗ್ಗೆ ರಿಪೋರ್ಟ್ ಮಾಡಿರುವುದಾಗಿಯೂ ವಿಎಚ್ಪಿ ಹೇಳಿಕೊಂಡಿದೆ.

ಒಟ್ಟಿನಲ್ಲಿ ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡುವ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿ ಭಾರತದಲ್ಲಿ ಚರ್ಚೆಗೀಡಾಗಿದ್ದ ರಿಯಾನಾ ಮತ್ತೊಮ್ಮೆ ಭಾರತೀಯರ ಅಟೆನ್ಸನ್ ಪಡೆದುಕೊಂಡಿದ್ದು ಆಕ್ರೋಶಕ್ಕೆ ಕಾರಣವಾಗಿದ್ದಾರೆ.

Comments are closed.