ಪತ್ನಿಯನ್ನು ಬಿಟ್ಟು ಕೊಡಲು ಒಪ್ಪದ ಪತಿ : ಪ್ರಿಯಕರ ಜೊತೆ ಸೇರಿ ಪತಿಯನ್ನೇ ಕೊಂದ ಪಾಪಿ ಪತ್ನಿ !!!

ಚಿಕ್ಕಮಗಳೂರು : ಇಲ್ಲೊಬ್ಬ ಭೂಪ ಪತಿಯ ಬಳಿಯಲ್ಲಿಯೇ ನಿನ್ನ ಪತ್ನಿಯನ್ನು ನನಗೆ ಬಿಟ್ಟುಕೊಡು ಎಂದಿದ್ದಾನೆ. ಆದರೆ ಪತಿ ಪತ್ನಿಯನ್ನು ಬಿಟ್ಟು ಕೊಡೋದಕ್ಕೆ ನಿರಾಕರಿಸಿದ್ದಾನೆ. ಇಷ್ಟಕ್ಕೆ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಂಡು ಹಾಕಿದ್ದಾಳೆ.

ಅಷ್ಟಕ್ಕೂ ಈ ಘಟನೆ ನಡೆದಿರೋದು ಕಾಫಿನಾಡು ಚಿಕ್ಕಮಗಳೂರಲ್ಲಿ. ಹೌದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದ ದೊಡ್ಡಹಟ್ಟಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ದೊಡ್ಡಹಟ್ಟಿಯ ನಿವಾಸಿ ಪ್ರದೀಪ್ ಎಂಬಾತನೇ ಕೊಲೆಯಾದ ದುರ್ದೈವಿ. ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದ ಪ್ರದೀಪ್ ಹಾಗೂ ರಾಗಿಣಿ ದಂಪತಿಗಳ ನಡುವೆ ವಿರಸಕ್ಕೆ ಕಾರಣವಾಗಿತ್ತು.

ಗುಬ್ಬಿಹಳ್ಳಿಯ ಶ್ರೀನಿವಾಸ್. ಪ್ರದೀಪ್ ಜೊತೆಯಲ್ಲಿಯೇ ಗಾರೆ ಕೆಲಸ ಮಾಡ್ತಿದ್ದ ಶ್ರೀನಿವಾಸ ದಿನೇ ದಿನೇ ಪ್ರದೀಪ್ ಪತ್ನಿ ರಾಗಿಣಿಗೆ ಹತ್ತರವಾಗಿದ್ದ. ಇಬ್ಬರ ನಡುವಲ್ಲಿ ಅನೈತಿಕ ಸಂಬಂಧ ಹಲವು ಸಮಯಗಳ ವರೆಗೂ ಮುಂದುವರಿದುಕೊಂಡು ಬಂದಿತ್ತು. ಕೊನೆಗೆ ಶ್ರೀನಿವಾಸ್ ನಿನ್ನ ಪತ್ನಿಯನ್ನ ನನಗೆ ಬಿಟ್ಟು ಕೊಡು ಅಂತಾನೂ ಪ್ರದೀಪ್ ಬಳಿಯಲ್ಲಿ ಕೇಳಿದ್ದಾನೆ. ಆದರೆ ಪ್ರದೀಪ್ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ರಾಗಿಣಿ ಹಾಗೂ ಶ್ರೀನಿವಾಸ್ ಸೇರಿಕೊಂಡು ಪ್ರದೀಪ್ ಕುತ್ತಿಗೆಗೆ ವೇಲ್ ನಿಂದ ಬಿಗಿದು ಕೊಲೆ ಮಾಡಿದ್ದಾರೆ.

ಹಾಸನ ಜಿಲ್ಲೆ ಬೇಲೂರು ತಾಲೂಕಿನ ಹಳೇಬೇಡು ನಿವಾಸಿಯಾಗಿದ್ದ ರಾಗಿಣಿಯನ್ನು ಪ್ರದೀಪ್​ಗೆ ಮದುವೆಯಾಗಿದ್ದ. ಮದುವೆಯಾದ ನಂತರದಲ್ಲಿ ಹಲವರ ಜೊತೆಗೆ ರಾಗಿಣಿ ಅನೈತಿಕ ಸಂಬಂಧ ಇರಿಸಿಕೊಂಡಿದ್ದಳು. ಇದರಿಂದಾಗಿಯೇ ಪ್ರದೀಪ್ ಊರು ಬಿಟ್ಟು ದೊಡ್ಡಹಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದ. ಆದರೆ ರಾಗಿಣಿ ತನ್ನ ಬುದ್ದಿಯನ್ನು ಮಾತ್ರ ಬಿಡಲೇ ಇಲ್ಲಾ. ಪತ್ನಿ ಪರ ಪುರುಷರ ಜೊತೆಯಲ್ಲಿ ಸಂಬಂಧ ಹೊಂದಿರೋದು ಗೊತ್ತಿದ್ದರೂ ಕೂಡ ಪ್ರದೀಪ್ ಗೆ ಪತ್ನಿಯ ಮೇಲೆ ಪ್ರೀತಿ ಮಾತ್ರ ಒಂಚೂರು ಕಡಿಮೆಯಾಗಿರಲಿಲ್ಲ. ಪತ್ನಿಯ ನೋವಲ್ಲೇ ಪ್ರದೀಪ್ ಕುಡಿಯೋ ಚಟಕ್ಕೆ ಅಂಟಿಕೊಂಡಿದ್ದಾನೆ.

ಇದು ರಾಗಿಣಿ ಹಾಗೂ ಶ್ರೀನಿವಾಸನಿಗೆ ವರವಾಗಿ ಪರಿಣಮಿಸಿತ್ತು. ರಾತ್ರಿಯ ವೇಳೆಯಲ್ಲಿ ಪ್ರದೀಪನ ಮನೆಯಲ್ಲಿಯೇ ಇದ್ದ ಶ್ರೀನಿವಾಸ ರಾಗಿಣಿಯನ್ನು ತನಗೆ ಬಿಟ್ಟುಕೊಡು ಅಂತಾ ಹೇಳಿದ್ದಾನೆ. ಅಲ್ಲದೇ ರಾಗಿಣಿ ಕೂಡ ತನಗೆ ನಿನ್ನೊಂದಿಗೆ ಸಂಸಾರ ಮಾಡೋದಕ್ಕೆ ಸಾಧ್ಯವಿಲ್ಲ. ಒಂದೆ ಡೈವೋರ್ಸ್ ಕೊಡು, ಇಲ್ಲಾ ಅಂದ್ರೆ ಶ್ರೀನಿವಾಸ ಜೊತೆಗೆ ಇರೋದಕ್ಕೆ ಅವಕಾಶ ಕೊಡು ಅಂದಿದ್ದಾಳೆ. ಆದರೂ ಪ್ರದೀಪ್ ತನಗೆ ಪತ್ನಿ ಬೇಕು ಅಂತಾನೆ ಹೇಳಿದ್ದಾನೆ. ಕೊನೆಗೆ ಇಬ್ಬರೂ ಸೇರಿ ಪ್ರದೀಪನ ಕಥೆಯನ್ನ ಮುಗಿಸಿದ್ದಾರೆ.

ಕೊಲೆ ಪ್ರಕರಣಕ್ಕೆ ಕಥೆ ಕಟ್ಟೋದಕ್ಕೆ ಇಬ್ಬರೂ ರೆಡಿಯಾಗ್ತಿದ್ದಂತೆಯೇ ಸ್ಥಳೀಯರೇ ಹಿಡಿದು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಖರಾಯಪಟ್ಟಣ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

Comments are closed.