ಎರಡನೇ ಮದುವೆಯಾಗಲು ಹಾವು ಕಚ್ಚಿಸಿ ಪತ್ನಿಯನ್ನೇ ಕೊಂದ ಪಾಪಿಪತಿ !

0

ಕೇರಳ : ಅವರಿಬ್ಬರಿಗೂ ಮದುವೆಯಾಗಿ ಹಲವು ವರ್ಷ ಕಳೆದಿತ್ತು. ಆದ್ರೆ ಚಪಲ ಚೆನ್ನಿಗರಾಯನಾಗಿದ್ದ ಪತಿಮತ್ತೊಂದು ಮದುವೆಯಾಗೋದಕ್ಕೆ ನಿರ್ಧಾರ ಮಾಡಿದ್ದ. ಮದುವೆಯಾಗೋದಕ್ಕೆ ಪತ್ನಿ ಅಡ್ಡಗಾಲಾಗಿದ್ದಳು. ಹೀಗಾಗಿ ಪಾಪಿ ಪತಿ ಹಾವಿನಿಂದ ಕಚ್ಚಿಸಿ ಪತ್ನಿಯನ್ನು ಅಮಾನುಷವಾಗಿ ಕೊಲೆಗೈದಿದ್ದಾನೆ.

ಅಷ್ಟಕ್ಕೂ ಈ ಘಟನೆ ನಡೆದಿರೋದು ಕೇರಳದ ಕೊಲ್ಲಂನಲ್ಲಿ. ಮೇ 7ರಂದು ಎರ್ರಂ ಮೂಲದ ಉತ್ರಾ ಎಂಬಾಕೆ ಮನೆಯ ಬೆಡ್ ರೂಮ್ ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಆಕೆಯ ಪತಿ ಸೂರಜ್ ನನ್ನು ಪೊಲೀಸರು ಬಂಧಿಸಿದ್ದರು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಕೇರಳದ ಕ್ರೈಂ ಬ್ರಾಂಚ್ ಪೊಲೀಸರು ಸೂರಜ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿ ತನ್ನ ಅಮಾನುಷ ಕೃತ್ಯವನ್ನು ಬಾಯ್ಬಿಟ್ಟಿದ್ದಾನೆ.

ಈಗಾಗಲೇ ಮದುವೆಯಾಗಿದ್ದರೂ ಕೂಡ ಸೂರಜ್ ಮತ್ತೊಂದು ಮದುವೆಯಾಗೋದಾಗಿ ಪತ್ನಿಯ ಬಳಿಯಲ್ಲಿ ಹೇಳಿಕೊಂಡಿದ್ದ. ಆದರೆ ಪತ್ನಿ ಉತ್ರಾ ವಿರೋಧ ವ್ಯಕ್ತಪಡಿಸಿದ್ದಾಳೆ. ಹೇಗಾದ್ರೂ ಪತ್ನಿಯನ್ನು ಕೊಲ್ಲಬೇಕೆಂದು ಪ್ಲ್ಯಾನ್ ಮಾಡಿಕೊಂಡ ಸೂರಜ್ ಹಾವು ಹಿಡಿಯುವ ಸುರೇಶ್ ಎಂಬಾತನಿಂದ 10,000 ರೂಪಾಯಿ ಕೊಟ್ಟು ಹಾವನ್ನು ಖರೀದಿಸಿದ್ದಾನೆ. ನಂತರದ ಪತ್ನಿ ಮನೆಯ ಬೆಡ್ ರೂಮ್ ನಲ್ಲಿ ಮಲಗಿದ್ದಾಗ ಹಾವಿನಿಂದ ಪತ್ನಿಗೆ ಕಚ್ಚಿಸಿ ಕೊಲೆಗೈದಿದ್ದಾನೆ. ನಂತರದ ಹಾವು ಕಚ್ಚಿ ಪತ್ನಿ ಸಾವನ್ನಪ್ಪಿದ್ದಾಳೆ ಅಂತಾ ಪೊಲೀಸರ ಮುಂದೆ ಬಿಂಬಿಸಿದ್ದ. ಎಲ್ಲರೂ ಆಕೆ ಹಾವು ಕಚ್ಚಿಯೇ ಸಾವನ್ನಪ್ಪಿದ್ದಾಳೆಂದು ನಂಬಿಕೊಂಡಿದ್ದರು.

ಆದರೆ ಹಾವು ಮಾರಾಟಗಾರ ಸುರೇಶ್ ಎಂಬಾತನ ಜೊತೆಗೆ ಸೂರಜ್ ನಡೆಸಿದ್ದ ಡೀಲ್ ಮೊಬೈಲ್ ನಲ್ಲಿ ರೆಕಾರ್ಡ್ ಆಗಿತ್ತು. ಈ ಹಿನ್ನೆಲೆಯಲ್ಲೀಗ ಆರೋಪಿಯ ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ.

Leave A Reply

Your email address will not be published.