ನವದೆಹಲಿ : 7 ವರ್ಷಗಳ ಕಾಲ ನಡೆದ ಹಗ್ಗಜಗ್ಗಾಟದ ಬಳಿಕ ನಿರ್ಭಯಾ ಹಂತಕರನ್ನು ಗಲ್ಲುಗೇರಿಸಲಾಯಿತು. ಆಪರಾಧಿಗಳಾಗಿರೋ ಮುಖೇಶ್ ಸಿಂಗ್, ಅಕ್ಷಯ್ ಠಾಕೂರ್, ಪವನ್ ಗುಪ್ತಾ ಮತ್ತು ವಿನಯ್ ಶರ್ಮಾ ತಿಹಾರ್ ಜೈಲಿನಲ್ಲಿ ಸೂರ್ಯೋದಯಕ್ಕೂ ಮುನ್ನವೇ ಕಣ್ಮುಚ್ಚಿದ್ದಾರೆ.
2012 ರಂದು ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಮಾಯಕ ಯುವತಿ ಮೇಲೆ ರಾಕ್ಷಸರಂತೆ ಎರಗಿದ ಕಾಮುಕರ ಕೊರಳಿಗೆ ಕಡೆಗೂ ನ್ಯಾಯದೇವತೆಯ ಸಾವಿನ ಕಿಣಿಕೆಗೆ ಕೊರಳೊಡ್ಡಿದ್ದಾರೆ.
ಉತ್ತರ ಪ್ರದೇಶದ ಪವನ್ ಜಲ್ಲದ್ ಎಂಬಾತ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಿದ್ದಾರೆ. ನಿರ್ಭಯಾ ಹಂತಕರನ್ನು ಗಲ್ಲಿಗೇರಿಸೋ ಸಲುವಾಗಿ ಕಾರಾಗೃಹದ ಸಿಬ್ಬಂಧಿ ಬುಧವಾರ ಬೆಳಗ್ಗೆ ಅವರನ್ನು ಗಲ್ಲಿಗೇರಿಸುವ ಸ್ಥಳಕ್ಕೆ ಕರೆದೊಯ್ದು ಸ್ಥಳವನ್ನು ಪರಿಶೀಲಿಸಿದ್ದಾರೆ. ಅಲ್ಲದೆ, ಗುರುವಾರ ಬೆಳಗ್ಗೆಯೂ ಅದೇ ಜಾಗಕ್ಕೆ ಕರೆದೊಯ್ಯಲಾಗಿತ್ತು. ಗಲ್ಲಿಗೇರಿಸಲು ಹತ್ತು ಹಗ್ಗಗಳನ್ನು ಬಕ್ಸರ್ ಮತ್ತು ಬಿಹಾರದಿಂದ ತರಿಸಲಾಗಿದೆ. ಅವುಗಳಲ್ಲಿ ಒಂದನ್ನು ಪರಿಶೀಲಿಸಲಾಗಿತ್ತು. ನೇಣಿಗೆ ಹಾಕುವ ಮುನ್ನ ಆಪಾದಿತರಷ್ಟೇ ತೂಕದ ಮೂಟೆಗಳನ್ನು ಗಲ್ಲು ಕಂಬಕ್ಕೆ ಹಾಕಿ ತಾಲೀಮು ಸಹ ನಡೆಸಲಾಗಿತ್ತು. ಅದರಂತೆ ಇಂದು ಮುಂಜಾನೆ 5.30ಕ್ಕೆ ನಾಲ್ವರು ಅಪರಾಧಿಗಳನ್ನು ಗಲ್ಲಿಗೆ ಹಾಕಲಾಯಿತು. ಈ ಮೂಲಕ ಸುದೀರ್ಘ ಎಂಟು ವರ್ಷಗಳ ಕಾಲ ನಡೆದುಕೊಂಡು ಬಂದಿದ್ದ ಹಗ್ಗ ಜಗ್ಗಾಟ ಕೊನೆಗೂ ನೇಣು ಶಿಕ್ಷೆಯೊಂದಿಗೆ ಕೊನೆಗೊಂಡಿತು. ಯುವತಿ ಮೇಲೆ ಅಟ್ಟಹಾಸ ಮೆರೆದಿದ್ದ ಕಾಮುಕರು ಸೂರ್ಯೋದಯಕ್ಕೂ ಮುನ್ನ ಶಾಶ್ವತವಾಗಿ ಕಣ್ಮುಚ್ಚಿದರು.
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
Prev Post
ಕುಂದಾಪುರ ಸರಕಾರಿ ವೈದ್ಯರ ನಿರ್ಲಕ್ಷ್ಯ : ಕೊರೊನಾ ಐಸೋಲೇಶನ್ ಗೆ ಬಂದವ ನಾಪತ್ತೆ, ಹುಡುಕಿಕೊಡುವಂತೆ ಪೊಲೀಸರಿಗೆ ದೂರು
Next Post