ಸರ್ಜಾ ಕುಟುಂಬದ ಅಭಿಮಾನಿಗಳಿಗೆ ಕಹಿಸುದ್ದಿ…! ಧ್ರುವ್ ಸರ್ಜಾ ಕೈಗೊಂಡ್ರು ಶಾಕಿಂಗ್ ನಿರ್ಧಾರ….!!


ಸ್ಯಾಂಡಲ್ ವುಡ್ ನಲ್ಲಿ ಸರ್ಜಾ ಕುಟುಂಬಕ್ಕೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಯುವಸರ್ಜಾ ಚಿರಂಜೀವಿ ಸರ್ಜಾ ಅಗಲಿಕೆಯಿಂದ ನೊಂದ ಅಭಿಮಾನಿಗಳಿಗೆ ಸದ್ಯ ಧ್ರುವ್ ಸರ್ಜಾ ತಮ್ಮ ಸಿನಿಮಾಗಳ ಮೂಲಕ ಸಾಂತ್ವನ ಹೇಳುತ್ತಿದ್ದರು. ಆದರೆ ಈಗ ಧ್ರುವ್ ಸರ್ಜಾ ಸಿನಿಮಾತಂಡದಿಂದ ಹೊರಬಿದ್ದ ಶಾಕಿಂಗ್ ಸುದ್ದಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಇತ್ತೀಚಿಗಷ್ಟೇ ಸರ್ಜಾ ಕುಟುಂಬದ ಅಭಿಮಾನಿಗಳಿಗೆ ಪೊಗರು ಸಿನಿಮಾದ ಮೂಲಕ ಧ್ರುವ್ ಸರ್ಜಾ ಸಖತ್ ಖುಷಿ ಕೊಟ್ಟಿದ್ದರು. ಜೊತೆಗೆ ಚಿರು ಅಭಿನಯದ ರಾಜಾಮಾರ್ತಾಂಡ್  ಟ್ರೇಲರ್ ಕೂಡ ರಿಲೀಸ್ ಆಗಿತ್ತು. ಪೊಗರು ಸಿನಿಮಾದಲ್ಲಿ ಧ್ರುವ್ ಸರ್ಜಾ ಅಭಿನಯಕ್ಕೆ ಮರುಳಾದ ಅಭಿಮಾನಿಗಳು ಧ್ರುವ್ ನೆಕ್ಸ್ಟ್ ಮೂವಿ ದುಬಾರಿ ನೋಡೋಕೆ ಕಾತುರರಾಗಿದ್ದರು.

ಆದರೆ ಅಭಿಮಾನಿಗಳಿಗೆ ದುಬಾರಿ ಚಿತ್ರತಂಡ ಶಾಕ್ ನೀಡಿದೆ. ಸದ್ಯ ದುಬಾರಿ ಸಿನಿಮಾ ಚಿತ್ರೀಕರಣ ಆರಂಭಿಸದಿರಲು ಚಿತ್ರತಂಡ ನಿರ್ಧರಿಸಿದ್ದು, ಇದು ಧ್ರುವ್ ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ. ನಿರ್ದೇಶಕ  ನಂದಕಿಶೋರ್ ಧ್ರುವ್ ಸರ್ಜಾಗಾಗಿ ಪೊಗರು ನಿರ್ಮಿಸಿದ್ದರು.

ಇದೇ ಜೋಡಿ ದುಬಾರಿಯಲ್ಲೂ ಒಂದಾಗಿತ್ತು. ಪೊಗರು ಬಿಡುಗಡೆಗೂ ಮುನ್ನವೇ ದುಬಾರಿ ಚಿತ್ರದ ಮುಹೂರ್ತ ಕೂಡ ನೆರವೇರಿತ್ತು. ಆದರೆ ಯಾವುದೇ ಕಾರಣ ನೀಡದೆ ಈಗ ಚಿತ್ರತಂಡ ಚಿತ್ರೀಕರಣ ಮುಂದೂಡಿದೆ. ಮೂಲಗಳ ಮಾಹಿತಿ ಪ್ರಕಾರ ಸದ್ಯ ನಿರ್ದೇಶಕ ನಂದ್ ಕಿಶೋರ್ ಕೆ.ಮಂಜು ಪುತ್ರನಿಗಾಗಿ ಸಿನಿಮಾ ನಿರ್ಮಿಸುತ್ತಿದ್ದು, ಇದೇ ಕಾರಣಕ್ಕೆ ದುಬಾರಿಯಿಂದ ದೂರ ಉಳಿಯಲು ನಿರ್ಧರಿಸಿದ್ದಾರಂತೆ.ಆದರೆ ನಂದಕಿಶೋರ್ ನಿರ್ಧಾರಕ್ಕೆ ಧ್ರುವ್ ಕೂಡ ಒಪ್ಪಿದ್ದು ಸಿನಿಮಾ ಚಿತ್ರೀಕರಣ ಮುಂದೂಡಲು ಒಪ್ಪಿಕೊಂಡಿದ್ದಾರಂತೆ.

ಹೀಗಾಗಿ ಪೊಗರು ಬಳಿಕ ಮತ್ತೆ ಧ್ರುವ್ ಸರ್ಜಾರನ್ನು ತೆರೆಮೇಲೆ ನೋಡಲು ಕಾಯಲೇ ಬೇಕು ಅಂತಿದೆ ಸ್ಯಾಂಡಲ್ ವುಡ್ . ಇನ್ನೊಂದೆಡೆ ಧ್ರುವ್ ಸರ್ಜಾರಿಗಾಗಿ ಟಾಲಿವುಡ್ ನ ಫೇಮಸ್ ನಿರ್ದೇಶಕ ಪೂರಿ ಜಗನ್ನಾಥ್ ಆಕ್ಷ್ಯನ್ ಕಟ್ ಹೇಳಲು ಸಿದ್ಧವಾಗಿದ್ದಾರಂತೆ. ಈ ಮಾತು ನಿಜವಾದರೇ ಈ ಭಾರಿ ಧ್ರುವ್ ಸರ್ಜಾ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮಿಂಚೋದು ಖಚಿತ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಸದ್ಯ ದುಬಾರಿ ಚಿತ್ರದ ಶೂಟಿಂಗ್ ಆರಂಭವಾಗೋದು ಡೌಟ್ ಎನ್ನಲಾಗ್ತಿದ್ದು, ಧ್ರುವ್ ಸರ್ಜಾ ದುಬಾರಿಗೂ ಮುನ್ನ ಯಾವ ಸಿನಿಮಾಗೆ ಸೈ ಎನ್ನುತ್ತಾರೆ ಎಂಬುದನ್ನು ಅಭಿಮಾನಿಗಳು ಕಾಯ್ತಿದ್ದಾರೆ.

Comments are closed.