BikeAccident:ಬೈಕ್ ಟೆಸ್ಟ್ ಡ್ರೈವ್ ಗೆ ಹೋದ ನಟ ಸುರ್ಯೋದಯ ಪೆರಂಪಲ್ಲಿ ಪುತ್ರ ಅಪಘಾತಕ್ಕೆ ಬಲಿ…!!

ಬೆಂಗಳೂರು: ಬೈಕ್ ಟೆಸ್ಟ್ ಡ್ರೈವ್ ಗೆ ಹೋದ ನಟ ಹಾಗೂ ನಿರ್ದೇಶಕ ಸುರ್ಯೋದಯ ಪೆರಂಪಲ್ಲಿ ಪುತ್ರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾನೆ.

ಶುಕ್ರವಾರ ರಾತ್ರಿ ಬೆಂಗಳೂರಿನ ಬ್ಯಾಡರಹಳ್ಳಿ ನ್ಯೂಲಿಂಕ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಬೈಕ್ ಹಾಗೂ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ, 20 ವರ್ಷದ ಮಯೂರ್ ಸಾವನ್ನಪ್ಪಿದ್ದಾನೆ.

ಬೈಕ್ ಖರೀದಿಸುವ ಉದ್ದೇಶದಲ್ಲಿದ್ದ ಮಯೂರ್ ಸ್ನೇಹಿತನ ಕೆಟಿಎಂ ಬೈಕ್ ಪಡೆದು ಟೆಸ್ಟ್ ಡ್ರೈವ್ ಮಾಡಲು ಹೋಗಿದ್ದ ಎನ್ನಲಾಗಿದೆ. ಈ ವೇಳೆ ಅತಿ ವೇಗವಾಗಿ ಚಾಲನೆ ಮಾಡಿ ಟ್ಯಾಂಕರ್ ಗೆ ಗುದ್ದಿದ್ದಾನೆ ಎನ್ನಲಾಗುತ್ತಿದೆ.

ಅಪಘಾತದ ತೀವ್ರತೆಗೆ ಮಯೂರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್ ಚೂರಾಗಿದೆ. ಮಯೂರ್ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ ಪೊಲೀಸರು ಟ್ಯಾಂಕರ್ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಸೂರ್ಯೋದಯ ಪೆರಂಪಲ್ಲಿ ಸಾಲ್ಟ್ ಎಂಬ ಕನ್ನಡ ಚಿತ್ರ ಹಾಗೂ ದೇಯಿ ಬೈದೆತಿ ಎಂಬ ತುಳು ಚಿತ್ರದಲ್ಲಿ ನಟಿಸಿದ್ದಾರೆ. ಮೃತ ಮಯೂರ್ ಅವರ ಒಬ್ಬನೇ ಮಗನಾಗಿದ್ದ ಎನ್ನಲಾಗಿದೆ.

Comments are closed.