ಚಿತ್ರರಂಗಕ್ಕೆ ಬರ್ತಾರಂತೆ ಜ್ಯೂನಿಯರ್ ಚಿರು….! ನಾನೇ ಲಾಂಚ್ ಮಾಡ್ತಿನಿ ಎಂದಿದ್ದ್ಯಾರು ಗೊತ್ತಾ…?!

ನಾಲ್ಕು ತಿಂಗಳಿನಿಂದ ನೊಂದು-ಬೆಂದು ಹೋಗಿದ್ದ ಸರ್ಜಾ ಕುಟುಂಬದಲ್ಲಿ ಕಳೆದ ಎರಡು ದಿನಗಳಿಂದ ಹೊಸ ಕನಸು,ಉತ್ಸಾಹ  ಮನೆ ಮಾಡಿದೆ. ಚಿರು ಕಳೆದುಕೊಂಡು ಕಣ್ಣೀರಾಗಿದ್ದ ಕುಟುಂಬಕ್ಕೆ ಜ್ಯೂನಿಯರ್ ಚಿರು ಭರವಸೆ ಕಂದನಾಗಿ ಮನೆ-ಮನ ತುಂಬಿದ್ದಾನೆ.  ಈ ಮಧ್ಯೆ ಜ್ಯೂನಿಯರ್ ಚಿರವನ್ನು ಸ್ಯಾಂಡಲ್ ವುಡ್ ಗೆ ತರೋದಾಗಿ ಅರ್ಜುನ್ ಸರ್ಜಾ ಈಗಲೇ ತೀರ್ಮಾನಿಸಿದ್ದಾರೆ.

ಅರ್ಜುನ್ ಸರ್ಜಾ, ಸರ್ಜಾ ಕುಟುಂಬದ ಬೆನ್ನೆಲುಬು. ಚಿರು ಅಗಲಿಕೆಯಿಂದ ಅಪಾರವಾಗಿ ನೊಂದಿದ್ದ ಅರ್ಜುನ್ ಸರ್ಜಾ, ಜ್ಯೂನಿಯರ್ ಚಿರು ಆಗಮನದಿಂದ ಫುಲ್ ಖುಷಿಯಾಗಿದ್ದಾರೆ. ಚೈನೈನಿಂದ ಮೇಘನಾ- ಚಿರು ಪುತ್ರನನ್ನು ನೋಡೋಕೆ ಫ್ಯಾಮಿಲಿ ಸಮೇತ ಓಡೋಡಿ ಬಂದ ಅರ್ಜುನ್ ಸರ್ಜಾ, ಚಿರು ಕಂದನನ್ನು ನೋಡ್ತಿದ್ದಂತೆ ಹೊಸ ಕನಸುಗಳ ಬುತ್ತಿ ಬಿಚ್ಚಿಟ್ಟಿದ್ದಾರೆ.

ಚಿರು ಪುತ್ರನನ್ನು ನೋಡಿ ಆಸ್ಪತ್ರೆಯಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ಅರ್ಜುನ್ ಸರ್ಜಾ, ನನಗೆ ತಂಗಿ ಮಕ್ಕಳು, ನನ್ನ ಮಕ್ಕಳು, ಅಕ್ಕನ ಮಕ್ಕಳು ಎಂಬೆಲ್ಲ ಬೇಧವಿಲ್ಲ. ಎಲ್ಲರೂ ನನ್ನ ಮಕ್ಕಳಿದ್ದಂತೆ. ಹೀಗಾಗಿ ಚಿರುವನ್ನು ಕಳೆದುಕೊಂಡು ದೇವರ ಮೇಲಿನ ವಿಶ್ವಾಸವೇ ಹೋಗಿತ್ತು. ಈಗ ಜ್ಯೂನಿಯರ್ ಚಿರು ನೋಡಿದ ಮತ್ತೆ ಬದುಕಿನ ವಿಶ್ವಾಸ ಮೂಡುತ್ತಿದೆ. ನಾಲ್ಕು ತಿಂಗಳ ಬಳಿಕ ನಮ್ಮ ಕುಟುಂಬದಲ್ಲಿ ನಗು ಮೂಡಿದೆ ಎಂದಿದ್ದಾರೆ.

36 ವರ್ಷಗಳ ಹಿಂದೆ ಶೂಟಿಂಗ್ ನಲ್ಲಿದ್ದಾಗ ಅಮ್ಮ ಪೋನ್ ಮಾಡಿ ತಂಗಿಗೆ ಗಂಡುಮಗುವಾಗಿದೆ ಅಂತ, ಚಿರು ಹುಟ್ಟಿದ ಸುದ್ದಿ ತಿಳಿಸಿದ್ರು. ಹೀಗೆ ಓಡೋಡಿ ಬಂದಿದ್ದೆ. ಚಿರುವನ್ನು ನಾನೇ ಸ್ಯಾಂಡಲ್ ವುಡ್ ನಲ್ಲಿ ಲಾಂಚ್ ಮಾಡಿದೆ.

ಈಗ 36 ವರ್ಷಗಳ ನಂತರ ಶೂಟಿಂಗ್ ನಲ್ಲಿದ್ದಾಗ ಮತ್ತೆ ಚಿರುವಿಗೆ ಮಗ ಹುಟ್ಟಿದ ಸುದ್ದಿ ಕೇಳಿ ಬಂದಿದ್ದೇನೆ. ಇನ್ನು 20 ವರ್ಷಗಳ ನಂತರ ಜ್ಯೂನಿಯರ್ ಚಿರುವನ್ನು ನಾನೇ ಲಾಂಚ್ ಮಾಡುತ್ತೇನೆ ಅನ್ಸುತ್ತೆ ಎಂದಿದ್ದಾರೆ.

ಆ ಮೂಲಕ ಜ್ಯೂನಿಯರ್ ಚಿರುವನ್ನು ಚಿತ್ರರಂಗಕ್ಕೆ ತರೋ ನಿರ್ಧಾರವನ್ನು ಅರ್ಜುನ್ ಸರ್ಜಾ ಪ್ರಕಟಿಸಿದ್ದಾರೆ. ಇಷ್ಟಕ್ಕೂ ಅರ್ಜುನ್ ಸರ್ಜಾ ಕುಟುಂಬ ಹಾಗೂ ಮೇಘನಾ ಸರ್ಜಾ ಕುಟುಂಬದ ಎಲ್ಲರೂ ಚಿತ್ರರಂಗದಲ್ಲೇ ಇರೋದರಿಂದ ಜ್ಯೂನಿಯರ್ ಚಿರು ಕೂಡ ಚಂದನವನಕ್ಕೆ ಕಾಲಿಟ್ಟರೇ ಅದರಲ್ಲಿ ಅಚ್ಚರಿ ಏನಿಲ್ಲ ಬಿಡಿ.

Comments are closed.