ನಾನು ಕನ್ನಡಿಗ ಎಂದ ಕ್ರೇಜಿಸ್ಟಾರ್….! ನ್ಯೂ ಲುಕ್ ನಲ್ಲಿ ಸ್ಯಾಂಡಲ್ ವುಡ್ ಕನಸುಗಾರ..!!

ಸ್ಯಾಂಡಲ್ ವುಡ್ ನ ಶೋ ಮ್ಯಾನ್ ಖ್ಯಾತಿಯ ಕ್ರೇಜಿಸ್ಟಾರ್ ರವಿಚಂದ್ರನ್  ನಾನು ಕನ್ನಡಿಗ ಅಂತಿದ್ದಾರೆ. ಇಷ್ಟಕ್ಕೂ ರವಿಚಂದ್ರನ್ ಈಗ್ಯಾಕೆ ಈ ಮಾತು ಹೇಳ್ತಿದ್ದಾರೆ ಅಂದ್ರಾ….? ರವಿಚಂದ್ರನ್ ನಾನು ಕನ್ನಡಿಗ  ಅಂತಿರೋದು ತಮ್ಮ ಹೊಸ ಚಿತ್ರಕ್ಕಾಗಿ.

ಹೌದು ಕ್ರೇಜಿಸ್ಟಾರ್ ರವಿಚಂದ್ರನ್ ಬಹುದಿನಗಳ ನಂತರ ಹೊಸಬಗೆಯ ಚಿತ್ರಕತೆಯೊಂದಕ್ಕಾಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಹೆಸರು ಕನ್ನಡಿಗ. ಚಿತ್ರದ ಫರ್ಸ್ಟ್ ಲುಕ್ ರಿಲೀಸ್ ಆಗಿದ್ದು, ಭರ್ಜರಿ ಪೇಟಾ,ಬಿಳಿಪಂಚೆ,ಶರ್ಟ್,ಹುರಿಮೀಸೆಯಲ್ಲಿ ರವಿಚಂದ್ರನ್ ಪಾಳೆಗಾರನಂತೆ ಪೋಸು ನೀಡಿದ್ದಾರೆ.

ಐತಿಹಾಸಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಕನ್ನಡ-ಇಂಗ್ಲೀಷ್ ಶಬ್ದಕೋಶವನ್ನು ತಂದ ಕಿಟೆಲ್ ಗೆ ಸಂಬಂಧಿಸಿದ ಕತೆ ತೆರೆಗೆ ಬರಲಿದೆ. ಫರ್ನಿನಾಂಡ್ ಕಿಟೆಲ್ ಪಾತ್ರದಲ್ಲಿ ಖ್ಯಾತ ನಟ ಟಾಮ್ ಅಲ್ಟರ್ ಪುತ್ರ ಜೆಮಿ ಅಲ್ಟರ್ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭಗೊಂಡಿದ್ದು, ಚಿಕ್ಕಮಗಳೂರಿನ ಸುತ್ತ-ಮುತ್ತ ಚಿತ್ರಕ್ಕಾಗಿ ಸೆಟ್ ಹಾಕಲಾಗಿದೆ. ಪಾವನಾ ರವಿಚಂದ್ರನ್ ಗೆ ನಾಯಕಿಯಾಗಿದ್ದಾರೆ. ಈ ಚಿತ್ರದಲ್ಲೇ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಕೂಡ ನಟಿಸಲಿದ್ದಾರೆ ಎನ್ನಲಾಗುತ್ತಿದ್ದು, ಆದರೆ ಯಾವ ಪಾತ್ರದಲ್ಲಿ ಬಣ್ಣಹಚ್ಚಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

ನಾನು ಹಿಂದೆಂದೂ ನಟಿಸದ ಪಾತ್ರದಲ್ಲಿ ಈ ಭಾರಿ ನಟಿಸಲಿದ್ದೇನೆ ಎಂದು ರವಿಚಂದ್ರನ್ ತಮ್ಮ ಸಂದರ್ಶನದಲ್ಲಿ ಹೇಳಿದ್ದರು. ಚಿತ್ರಕ್ಕೆ ರವಿ ಬಸ್ರೂರ್ ಸಂಗೀತವಿದ್ದು, ಅದ್ದೂರಿ ತಾರಾಗಣವಿದೆ.

Comments are closed.