ಶೂಟಿಂಗ್ ಮುಗಿಸಿ ಮನೆಗೆ ಹೋಗುವಾಗ ಎದುರಾಯ್ತು ಹಾರರ್ ಎಕ್ಸಪೀರಿಯನ್ಸ್…! ರಂಜಿನಿ ಹೇಳಿದ ಕತೆಯೇನು ಗೊತ್ತಾ?!

ಶೂಟಿಂಗ್ ಮುಗಿಸಿ ಬೇಗ ರೂಂ ಸೇರಿಕೊಳ್ಳೋ ಆಸೆಗೆ ಬಿದ್ದ ಕನ್ನಡತಿ ಸೀರಿಯಲ್ ನಟಿ ರಂಜನಿ ರಾಘವನ್ , ಯಾವುದೋ ಗಾಡಿ ಹತ್ತಿ ತಾವು ಎದುರಿಸಿದ ತಮ್ಮ ಹಾರರ್ ಎಕ್ಸಪೀರಿಯನ್ಸ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗಿದ್ದ ನಟ ಕಿರಣ ರಾಜ್ ಹಾಗೂ ತಾವು ಎದುರಿಸಿದ ದೆ ಝಲ್ಲೆನಿಸುವ ದೃಶ್ಯದ ವಿವರಣೆ ನೀಡಿದ್ದು, ಓದುಗರನ್ನು ಬೆಚ್ಚಿಬೀಳಿಸುವಂತಿದೆ.  

ಲಾಕ್ ಡೌನ್ ನಡುವಲ್ಲೂ ಸೀರಿಯಲ್ ಶೂಟಿಂಗ್ ಮುಂದುವರೆಸಲು ಕನ್ನಡತಿ ಸೀರಿಯಲ್ ತಂಡ ಹೈದ್ರಾಬಾದ್ ನಲ್ಲಿ ಬೀಡುಬಿಟ್ಟಿದೆ. ರಂಜಿನಿ ನಿನ್ನೆ ಶೂಟಿಂಗ್ ಮುಗಿಸಿ ಪ್ಯಾಕ್ ಅಪ್ ಗಾಗಿ ಕಾದಿದ್ದಾಗ ನಟ ಕಿರಣ್ ರಾಜ್ ಗೂಡ್ಸ್ ಗಾಡಿ ಹತ್ತಿ ಹೊಟೇಲ್ ಸೇರಿಕೊಳ್ಳೋ ಐಡಿಯಾ ಕೊಟ್ಟಿದ್ದಾರಂತೆ.

ಹಾಗೇ ಹೊಟೇಲ್ ಸೇರಿಕೊಳ್ಳೋಕೆ ಅಂತ ಗೂಡ್ಸ್ ಗಾಡಿ ಹತ್ತಿದ ರಂಜಿನಿ ಹಾಗೂ ಕಿರಣ ರಾಜ್ ಗೆ ಅಟೋ ಚಾಲಕ ಬೇರ್ಯಾವುದೋ ದಾರಿಯಲ್ಲಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಆ ವೇಳೆ ತಮ್ಮ ಪ್ರಯಾಣದ ವಿಡಿಯೋ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲ  ಈ ಜರ್ನಿ ಅನುಭವವನ್ನು ಸೋಷಿಯಲ್ ಮೀಡಿಯಾದಲ್ಲಿ ದಾಖಲಿಸಿದ್ದಾರೆ.

https://kannada.newsnext.live/sandalwood-actor-praneetha-subhas-marriage/

ಬೇಗ ರೂಮಿಗೆ ಹೋಗಿ ಸುತ್ತಮುತ್ತಲಿನ ಸ್ಥಳ ನೋಡೋಕೆ ಹೋಗಬಹುದು ಅಂತ ನಾನು ಕಿರಣ ಲಗೇಜ್ ಗಾಡಿ ಹತ್ತಿದ್ವಿ,  ಆ ಗಾಡಿ ಸೆಟ್ ನಿಂದ ಸ್ವಲ್ಪ ದೂರ ಬಂತು. ಅವಾಗ ಕಿರಣ ಗುಟ್ಟಾಗಿ ನನ್ನ ಬಳಿ ಇವರೆಲ್ಲಿ ಹೋಗ್ತಿದ್ದಾರೆ. ನನ್ನ ಬಳಿ 3 ಲಕ್ಷದ ಚಿನ್ನ ಇದೆ ಎಂದರು.

https://instagram.com/stories/ranjani.raghavan/2585124487248685540?utm_medium=share_sheet

https://kannada.newsnext.live/india-trend-arrest-billgates-hashtag-vaccine-problem-telangana/

ಆಗಲೇ ಗಮನಿಸಿದ್ವಿ ಗಾಡಿ ಬೇರೆ ರಸ್ತೆಯಲ್ಲಿ ಹೋಗುತ್ತಿತ್ತು. ಗಾಡಿಯಲ್ಲಿ ಕೂತಿದ್ದ ಕನ್ನಡದವನ ಜೊತೆ ಮಾತಾಡುತ್ತಿದ್ವಿ. ಆಮೇಲೆ ನೋಡಿದ್ರೆ ಆತ ಕುಡಿದಿದ್ದ ಅನ್ನೋದು ಗೊತ್ತಾಯಿತು. ಬೇರೆ ರಾಜ್ಯಕ್ಕೆ ಬಂದು ಬೇಕಿತ್ತಾ ಇಂಥ ಸಾಹಸ ಅಂತೆಲ್ಲ ಅನ್ನಿಸಿತು.  ಗಾಡಿ ಓಡಿಸುವವರು ಯಾರು ಅನ್ನೋದನ್ನು ನೋಡದೆ ಹೋಗ್ತಾ ಇದ್ವಿ. ಯಾಕೋ ಟೈಟಲ್ ಕಾರ್ಡ್ ನಲ್ಲಿರೋ ಹೆಸರು ಚೇಂಜ್ ಮಾಡೋ ದಿನ ಬಂತು ಅಂತ ಅನ್ನಿಸ್ತು ಎಂದು ರಂಜಿನಿ ಬರೆದುಕೊಂಡಿದ್ದಾರೆ.

https://kannada.newsnext.live/hollywood-tarzan-joelara-wife-died-plane-carsh-us-seven-passengers/

ಅಷ್ಟೇ ಅಲ್ಲ ಈ ಕುತೂಹಲಭರಿತ ಕತೆಯ ಮುಂದಿನ ಭಾಗವನ್ನು ನೀರಿಕ್ಷಿಸಿ ಎಂದು ಕುತೂಹಲದೊಂದಿಗೆ ತಮ್ಮ ವಿಡಿಯೋ ಹಾಗೂ ಕತೆಯನ್ನು ನಿಲ್ಲಿಸಿದ್ದಾರೆ ನಟಿ ರಂಜಿನಿ. ಇನ್ನು ನಟಿಯ  ಈ ಪೋಸ್ಟ್ ಗೆ ಸಖತ್ ರೆಸ್ಪಾನ್ಸ್ ಸಿಕ್ತಿದ್ದು, ಅಯ್ಯೋ ಮೇಡಂ ನೀವು ಚೆನ್ನಾಗಿದ್ದೀರಾ ತಾನೇ ಅಂತೆಲ್ಲ ಅಭಿಮಾನಿಗಳು ಕಮೆಂಟ್ ಮಾಡ್ತಿದ್ದಾರೆ.

Comments are closed.