ನಿಮ್ಮ ಕಣ್ಣೀರು ಒರೆಸಲು ಸಾಧ್ಯವಾಗದ ಸ್ಥಿತಿಗೆ ಧಿಕ್ಕಾರವಿರಲಿ…!! ನಟಿ ಮಾಲಾಶ್ರೀಗೆ ಸ್ನೇಹಿತೆ ಶೃತಿ ಭಾವುಕ ಪತ್ರ…!!

ಕೊರೋನಾ ಎರಡನೇ ಅಲೆಗೆ ಸ್ಯಾಂಡಲ್ ವುಡ್ ತಲ್ಲಣಿಸಿಹೋಗಿದ್ದು, ಕೋಟಿ ನಿರ್ಮಾಪಕ ಖ್ಯಾತಿಯ ರಾಮು ಕೊರೋನಾದಿಂದ ನಿಧನರಾಗಿದ್ದಾರೆ. ಈ ದುಃಖದ ಗಳಿಗೆಯಲ್ಲಿ ಮನೆಯೊಡೆಯನನ್ನು ಕಳೆದುಕೊಂಡು ಕಂಗಾಲಾಗಿರುವ ನಟಿ ಮಾಲಾಶ್ರೀ ಹಾಗೂ ಕುಟುಂಬಕ್ಕೆ ಮಾಲಾಶ್ರೀ ಸಮಕಾಲಿನ ನಟಿ ಹಾಗೂ ಸ್ನೇಹಿತೆ ಶೃತಿ ಭಾವುಕ ಪತ್ರ ಬರೆದಿದ್ದು, ಆ ಮೂಲಕ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.

ಪ್ರೀತಿಯ ಗೆಳತಿ ಮಾಲಾಶ್ರೀ ಮೊದಲಿಗೆ ಭಾರವಾದ ಹೃದಯದಿಂದ ರಾಮು ಅವರಿಗೆ ಶೃದ್ಧಾಂಜಲಿ. ನಿಮ್ಮ ಅಭಿಮಾನಿಯಾಗಿ, ನಿಮ್ಮ ಸಹೋದ್ಯೋಗಿಯಾಗಿ ಒಬ್ಬ ಗೆಳತಿಯಾಗಿ ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಿಮ್ಮನ್ನು ಭೇಟಿ ಮಾಡಿ  ಸಾಂತ್ವನ ಹೇಳಲು, ಸಮಾಧಾನ ಹೇಳಲು ಸಾಧ್ಯವಾಗದ ಸ್ಥಿತಿಗೆ ನನ್ನದೊಂದು ಧಿಕ್ಕಾರವಿದೆ ಎಂದಿದ್ದಾರೆ.

ಅಷ್ಟೇ ಅಲ್ಲ ಪತ್ರದಲ್ಲೇ ಮಾಲಾಶ್ರೀಗೆ ಧೈರ್ಯ ತುಂಬಿರುವ ನಟಿ ಶೃತಿ, ನಿಮಗಾದ ನಷ್ಟವನ್ನು ತುಂಬಿಕೊಡುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳನ್ನು ಧೈರ್ಯವಾಗಿ ಎದುರಿಸುವ ಅನಿವಾರ್ಯತೆ ಇದೆ. ನಿಮಗಾಗಿ ನಿಮ್ಮನ್ನು ಆರಾಧಿಸುವ ಅಭಿಮಾನಿಗಳಿಗಾಗಿ ಮುದ್ದು ಮಕ್ಕಳಿಗಾಗಿ. ನೀವು ಹುಟ್ಟು ಹೋರಾಟಗಾರ್ತಿ ಅದು ನನಗೆ ಗೊತ್ತಿದೆ ಎಂದು ಶೃತಿ ಮಾಲಾಶ್ರೀಗೆ ಸಾಂತ್ವನ ಹೇಳಿದ್ದಾರೆ.

ಉದ್ಯಮಿ ಭಾಸ್ಕರ ಶೆಟ್ಟಿ ಅವರನ್ನು ಹೋಮಕುಂಡ ದಲ್ಲಿ ಸುಟ್ಟ ಪ್ರಕರಣ : ಇಂದು ಮಹತ್ವದ ತೀರ್ಪು ಪ್ರಕಟ

ಅಷ್ಟೇ ಅಲ್ಲ ಸ್ಯಾಂಡಲ್ ವುಡ್ ನಲ್ಲಿ ನೀವು ಸೂಪರ್ ಸ್ಟಾರ್ ಆಗಿ ಮಿಂಚಿದ್ದು ಕೇವಲ ಅದೃಷ್ಟದಿಂದಲ್ಲ. ನಿಮ್ಮ ಪರಿಶ್ರಮದಿಂದ.ಕೇವಲ ನಟಿ ಮಾತ್ರವಲ್ಲ ಗೃಹಿಣಿಯಾಗಿಯೂ ನಿಮ್ಮ ಶ್ರಮ ಅಪಾರ. ಈಗ ರಾಮು ಅವರ ಅನುಪಸ್ಥಿತಿಯಲ್ಲೂ ಎಲ್ಲವನ್ನು ನೀವು ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೀರಿ ಎಂಬ ವಿಶ್ವಾಸ ನನಗಿದೆ.

https://www.instagram.com/p/COM8LTAgjoF/?igshid=gm6ruzhoz88i

ಈ ಕಷ್ಟದ ಹಾದಿಯಲ್ಲಿ ನಿಮಗೇನಾದರೂ ಈ ಗೆಳತಿಯ ಅಗತ್ಯವಿದ್ದರೇ i’m just one phone call away..’ ಎಂದು ಶೃತಿ ಪತ್ರದಲ್ಲಿ ಬರೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪತ್ರ ಹಂಚಿಕೊಂಡಿದ್ದಾರೆ.

ಅಷ್ಟೇ ಅಲ್ಲಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುವವರಿಗೂ ತಿಳುವಳಿಕೆ ಹೇಳಿರುವ ಶೃತಿ ಸೆಲೆಬ್ರೆಟಿಗಳ ಬದುಕಿನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವ ಅಥವಾ ಟೀಕಿಸುವ ಮುನ್ನ ಅವರ ಕಷ್ಟ ಅರಿತುಕೊಳ್ಳಿ ಎಂದಿದ್ದಾರೆ. 

Comments are closed.