ಹೃದಯಸ್ಪರ್ಶಿ ಡೈಲಾಗ್ಸ್ ಜೊತೆ ಮನಸೆಳೆದ ರಾಜಾಮಾರ್ತಾಂಡ್…! ಯೂಟ್ಯೂಬ್ ನಲ್ಲಿ ಹೊಸ ದಾಖಲೆಯತ್ತ ಟ್ರೇಲರ್ …!!

ನಿಮ್ಮ ಪ್ರೀತಿ ಅಭಿಮಾನಕ್ಕೆ ಕೊನೆ ತನಕ ಋಣಿಯಾಗಿರ್ತೀನಿ. ಜೈ ಶ್ರೀರಾಮ ಎನ್ನುವ  ಹೃದಯಸ್ಪರ್ಶಿ ಡೈಲಾಗ್ ನ ಜೊತೆ  ತೆರೆಗೆ ಬಂದಿರೋ ಯುವಸಾಮ್ರಾಟ್ ದಿ.ಚಿರಂಜೀವಿ ಸರ್ಜಾ ಅಭಿನಯದ ರಾಜಾ ಮಾರ್ತಾಂಡ್ ಚಿತ್ರದ ಟ್ರೇಲರ್ ಸುಂದರವಾಗಿ ಮೂಡಿಬಂದಿದ್ದು, ಚಿತ್ರದ ಬಗ್ಗೆ ನೀರಿಕ್ಷೆ ಹೆಚ್ಚಿಸುವ ಮೂಲಕ ಯೂ ಟ್ಯೂಬ್ಸ್ ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆಯುವತ್ತ ಸಾಗಿದೆ.

ಎಮೋಶನಲ್ ಕತೆ ಹಾಗೂ ಮಾಸ್ ಎಂಟರೈನಮೆಂಟ್ ಫೈಟಿಂಗ್, ಕಚಗುಳಿ ಇಡುವ ಡ್ಯುಯೆಟ್ ಸಾಂಗ್  ಒಳಗೊಂಡ ರಾಜಾಮಾರ್ತಾಂಡ್ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ತಂದೆಯ ಕೊನೆಯ ಚಿತ್ರದ ಟ್ರೇಲರ್ ನ್ನು ಜ್ಯೂನಿಯರ್ ಚಿರು ಲಾಂಚ್ ಮಾಡಿದ್ದು, ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.


ಒಂದು ಮನೋಜ್ಞ ಚಿತ್ರಕ್ಕೆ ಅಗತ್ಯವಾದ ನವರಸಗಳನ್ನು ತುಂಬಿಕೊಂಡಂತೆ ಬಿಂಬಿತವಾಗಿರೋ ರಾಜಾ ಮಾರ್ತಾಂಡ್ ಚಿತ್ರದ ಟ್ರೇಲರ್ ರಿಲೀಸ್ ಆದ 24 ಗಂಟೆಯಲ್ಲಿ 10 ಲಕ್ಷ ವೀವ್ಸ್ ಪಡೆದುಕೊಂಡಿದ್ದು, ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ.

https://www.youtube.com/results?search_query=rajamartanda+trailer

ರಥಸಪ್ತಮಿ ಹಬ್ಬದ ಶುಭ ಸಂದರ್ಭದಲ್ಲಿ ಈ ಸಿನಿಮಾದ ಟ್ರೇಲರ್ ರನ್ನು ಜ್ಯೂನಿಯರ್ ಚಿರು ಲಾಂಚ್ ಮಾಡಿದ್ದು, ಸಖತ್ ವೈರಲ್ ಆಗಿದೆ. ರಾಜಾಮಾರ್ತಾಂಡ್ ಟ್ರೇಲರ್ ರಿಲೀಸ್ ಆದ ಕೆಲವೇ ಗಂಟೆಯಲ್ಲಿ 4.5 ಲಕ್ಷ ವೀವ್ಸ್ ಪಡೆದುಕೊಂಡಿತ್ತು. ಈಗಲೂ ವೀವ್ಸ್ ಸಂಖ್ಯೆ ಏರುತ್ತಲೇ ಇದೆ.

ಚಿತ್ರತಂಡದ ಆಸೆಯಂತೆ ಜ್ಯೂನಿಯರ್ ಚಿರು ತನ್ನ ಪುಟಾಣಿ ಬೆರಳಿನಿಂದ ತಂದೆಯ ಚಿತ್ರದ ಟ್ರೇಲರ್ ಲಾಂಚ್ ಮಾಡಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಶೀರ್ವಾದದೊಂದಿಗೆ ಎಂಬ ಸಾಲುಗಳ ಜೊತೆ ಟ್ರೇಲರ್ ಆರಂಭವಾಗಿದೆ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಚಿರು ನಿಧನರಾಗಿದ್ದರಿಂದ ಧ್ರುವ್ ಸರ್ಜಾ ಅಣ್ಣ ಡೈಲಾಗ್ ಗಳಿಗೆ ಧ್ವನಿಯಾಗಿ ಚಿತ್ರ ಮುಗಿಸಿಕೊಟ್ಟಿದ್ದರು.

ಇನ್ನು ಸಿನಿಮಾಗೆ ದರ್ಶನ್  ಕೂಡ ಅಗತ್ಯ ಸಹಾಯ ನೀಡಿದ್ದರು ಎನ್ನಲಾಗಿದೆ. ಧ್ರುವ್ ಸರ್ಜಾ ಎಲ್ಲೂ ಅಣ್ಣನ ಖದರ್ ಗೆ ಕುಂದುಂಟಾಗದಂಥೆ ಭರ್ಜರಿ ಡೈಲಾಗ್ ಡೆಲಿವರಿ ಮಾಡಿದ್ದಾರೆ. ಕೊನೆಯಲ್ಲಿ ನಿಮ್ಮ ಪ್ರೀತಿಗೆ ಕೊನೆವರೆಗೂ ಚಿರ ಋಣಿ ಎನ್ನೋ ಚಿರು ಡೈಲಾಗ್ ಹಾಗೂ ಕೈಮುಗಿದು ನಿಲ್ಲುವ ದೃಶ್ಯ ಅಭಿಮಾನಿಗಳು ಕಣ್ತುಂಬಿಕೊಳ್ಳುವಂತೆ ಮಾಡುತ್ತಿದೆ.

ಕೆ.ರಾಮನಾರಾಯಣ್ ನಿರ್ದೇಶನದ  ಈ ಸಿನಿಮಾ ಸಧ್ಯದಲ್ಲೇ ತೆರೆಗೆ ಬರಲಿದ್ದು, ಚಿರು ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ.

Comments are closed.