ಅಪ್ಪ-ಅಮ್ಮನ ಹೆಸರಿನ ಜೊತೆ ಬೆಸೆದುಕೊಂಡ ಜ್ಯೂನಿಯರ್ ಚಿರು…! ಮಗನಿಗೆ ಕುಟ್ಟಿಮಾ ಆಯ್ಕೆ ಮಾಡಿದ ಹೆಸರು ಯಾವುದು ಗೊತ್ತಾ..?!

ಕಳೆದ ಹಲವಾರು ತಿಂಗಳಿನಿಂದ ನೋವು, ಸಮಸ್ಯೆಯಲ್ಲೇ ಮುಳುಗಿದ್ದ ಸರ್ಜಾ ಮತ್ತು ಸುಂದರ ರಾಜ್ ಕುಟುಂಬದಲ್ಲಿ ಸಧ್ಯ ಸಂಭ್ರಮ ಮನೆಮಾಡಿದೆ. ಮೊಮ್ಮಗನ ನಾಮಕರಣಕ್ಕೆ ಸುಂದರ್ ರಾಜ್ ಭರದ ಸಿದ್ಧತೆ ನಡೆಸಿದ್ದು ಮೇಘನಾ ರಾಜ್ ಮಗನಿಗೆ ಮುದ್ದಾದ ಹೆಸರನ್ನು ಆಯ್ಕೆ ಮಾಡಿದ್ದಾರೆ‌.

10 ವರ್ಷಗಳ ಕಾಲ ಒಬ್ಬರನ್ನೊಬ್ಬರು ಪ್ರೀತಿಸಿ ಕಳೆದ ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಚಿರು ಹಾಗೂ ಮೇಘನಾ ವಿಧಿಯಾಟಕ್ಕೆ ತುತ್ತಾಗಿ ಒಬ್ಬರನ್ನೊಬ್ಬರು ಅಗಲುವಂತಾಗಿದೆ. ಆದರೆ ಮೇಘನಾ ಮಡಿಲಿಗೆ ಬಂದ ಜ್ಯೂನಿಯರ್ ಚಿರು ತಾಯಿಯ ದುಃಖ ಮರೆಸುತ್ತಿದ್ದಾನೆ.

ಈ ಮಧ್ಯೆ ಈಗ ಎಲ್ಲರೂ ಕಾತುರರಾಗಿ ಕಾಯುತ್ತಿರುವ ಗಳಿಗೆ ಸನ್ನಿಹಿತವಾಗಿದ್ದು ಸುಂದರ್ ರಾಜ್ ಕುಟುಂಬ ಹಾಗೂ ಸರ್ಜಾ ಫ್ಯಾಮಿಲಿ ಜ್ಯೂನಿಯರ್ ಚಿರು ನಾಮಕರಣ ಕ್ಕೆ ಸಿದ್ಧತೆ‌ನಡೆಸಿದೆ.

ಕೇವಲ ನಾಮಕರಣಕ್ಕೆ‌ ಸಿದ್ಧತೆ ಮಾತ್ರವಲ್ಲ ಮಗುವಿಗೆ ಎರಡು ಕುಟುಂಬ ಸೇರಿ ಸುಂದರವಾದ ಹೆಸರು ಕೂಡ ಆಯ್ಕೆಮಾಡಿದೆ‌.

ಮೇಘನಾ ಹಾಗೂ ಚಿರು ಪ್ರೀತಿಯ ಸಂಕೇತವಾಗಿ ಚಿರು ಹೆಸರಿನ ಮೊದಲ‌ ಚ ಹಾಗೂ ಮೇಘನಾ ಹೆಸರಿನ‌ ಕೊನೆಯ ನ ಹೆಸರು ಬಳಸಿ ಚಿಂತನ್ ಎಂದು ಹೆಸರಿಡಲು ಎರಡು ಕುಟುಂಬ ಸಮ್ಮತಿಸಿದೆ ಎನ್ನಲಾಗಿದೆ.

ಫೆಬ್ರವರಿ ಕೊನೆಯ ವಾರ ಅಥವಾ ಮಾರ್ಚ್ ಮೊದಲ ವಾರದಲ್ಲಿ ಒಳ್ಳೆಯ ಮುಹೂರ್ತ ದಲ್ಲಿ ಅದ್ದೂರಿಯಾಗಿ ಜ್ಯೂನಿಯರ್ ಚಿರು ನಾಮಕರಣ ನಡೆಯಲಿದೆ.

ಈಗಾಗಲೇ ಜ್ಯೂನಿಯರ್ ಚಿರು ಜೊತೆ ಎರಡೂ ಕುಟುಂಬ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದು‌ ಮಗುವಿನ‌ ಚಿಕ್ಕಪ್ಪ ಧ್ರುವ್ ಸರ್ಜಾ ಅಣ್ಣನ ಮಗನಿಗೆ ಬೆಳ್ಳಿಯ ತೊಟ್ಟಿಲು ಗಿಫ್ಟ್ ನೀಡಿದ್ದಾರೆ.

ಒಟ್ಟಿನಲ್ಲಿ ಸರ್ಜಾ ಹಾಗೂ ಸುಂದರ್ ರಾಜ್ ಮನೆಯ ನೋವಿನ‌ ಕತ್ತಲು ಓಡಿಸಲು ಜ್ಯೂನಿಯರ್ ಚಿರು ರೂಪದಲ್ಲಿ ಚಿರಂಜೀವಿ ಸರ್ಜಾ‌ ಮರಳಿದಂತಿದ್ದು, ಚಿಂತನ್ ಎಂಬ ಹೆಸರಿನೊಂದಿಗೆ ಮಿಂಚುವ ಸಾಧ್ಯತೆ ಇದೆ.

Comments are closed.