ಕೊರೋನಾ ಎಫೆಕ್ಟ್ ನಿಂದ ತಣ್ಣಗಿದ್ದ ಸ್ಯಾಂಡಲ್ ವುಡ್ ನಲ್ಲಿ ಮಂಗಳ ವಾದ್ಯ ಮೊಳಗಿದೆ. ನಟ ರಮೇಶ್ ಅರವಿಂದ್ ಪುತ್ರಿ ವಿವಾಹದ ಸಿದ್ಧತೆ ಸಂಭ್ರಮದಿಂದ ಸಾಗಿದೆ.
ನಟ ರಮೇಶ್ಅರವಿಂದ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದ್ದು ಅರಿಸಿನ ಹಾಗೂ ಮೆಹಂದಿ ಶಾಸ್ತ್ರಕ್ಕಾಗಿ ಮನೆಯನ್ನು ಶೃಂಗರಿಸಲಾಗಿದೆ.
ನಟ ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಯ ಪುತ್ರಿ ನಿಹಾರಿಕಾ ಮದುವೆ ಡಿ.28 ರಂದು ನಡೆಯಲಿದ್ದು ಅದಕ್ಕಾಗಿ ಸಿದ್ಧತೆ ನಡೆದಿದೆ.ನಿಹಾರಿಕಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ಸಹೋದ್ಯೋಗಿ ಅಕ್ಷಯ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ.
ಕೊರೋನಾ ಗೈಡ್ ಲೈನ್ಸ್ ಪ್ರಕಾರ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ಶಾಸ್ತ್ರಗಳು ನಡೆಯಲಿದ್ದು, ತೀರಾ ಆಪ್ತರಿಗೆ ಮಾತ್ರಆಹ್ವಾನ ನೀಡಲಾಗಿದೆ.
ಇನ್ನೂ ಜನವರಿ 2 ವಾರದಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ವಿವಾಹ ಸಿಂಪಲ್ ಆಗಿ ನಡೆಸಿ ಆರತಕ್ಷತೆ ಎಲ್ಲ ಸಿನಿಮಾ ರಂಗದ ಗಣ್ಯರನ್ನು ಆಹ್ವಾನಿಸುವ ಯೋಚನೆಯಲ್ಲಿದ್ದಾರೆ ನಟ ರಮೇಶ್ಅರವಿಂದ್.
ಒಟ್ಟಿನಲ್ಲಿ ಹೊಸ ವರ್ಷದ ಹೊಸ್ತಿಲಲ್ಲಿ ಸ್ಯಾಂಡಲ್ ವುಡ್ ನಲ್ಲಿ ಮಂಗಳವಾದ್ಯದ ಸದ್ದು ಕೇಳಿಬಂದಿದ್ದು ಸಂಭ್ರಮ ಕಳೆಗಟ್ಟಿದೆ.
Comments are closed.