6.5 ಕೋಟಿ ವಂಚನೆ ಪ್ರಕರಣ….! ಸೂಪರ್ ಸ್ಟಾರ್ ಪತ್ನಿಗೆ ಕೋರ್ಟ್ ಸಮನ್ಸ್….!!

ಬೆಂಗಳೂರು: ಇತ್ತೀಚಿಗೆ ತಮ್ಮ ಒಡೆತನದ ಕಲ್ಯಾಣಮಂಟಪದ ತೆರಿಗೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸೂಪರ್ ಸ್ಟಾರ್ ರಜನಿಕಾಂತ ಛೀಮಾರಿ ಹಾಕಿಸಿಕೊಂಡ ಬೆನ್ನಲ್ಲೇ ವಂಚನೆ ಅರೋಪ ಎದುರಿಸುತ್ತಿರುವ ಸೂಪರ್ ಸ್ಟಾರ್ ಪತ್ನಿಗೂ ಮತ್ತೆ ಸಂಕಷ್ಟ ಎದುರಾಗಿದೆ.

ಸೂಪರ್ ಸ್ಟಾರ್ ಖ್ಯಾತಿಯ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ವಿರುದ್ಧ ಸಮನ್ಸ ಜಾರಿ ಮಾಡುವಂತೆ ಕೋರಿ ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ವಕೀಲರು ಅರ್ಜಿ ಸಲ್ಲಿಸಿದ್ದಾರೆ.

೨೦೧೪ ರಲ್ಲಿ ಲತಾ ರಜನಿಕಾಂತ್ ಮೇಲೆ ೬.೫ ಕೋಟಿ ರೂಪಾಯಿ ವಂಚನೆ ಪ್ರಕರಣ ಕೇಳಿಬಂದಿತ್ತು. ಕೊಚ್ಚಾಡಿಯನ್ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಗೆ ಹಣಹೂಡಿಕೆ ಮಾಡಿದ್ದ ಆ್ಯಡ್ ಬ್ಯುರೋ ಜಾಹೀರಾತು ಕಂಪನಿಗೆ ಹಣ ವಾಪಸ ನೀಡದೇ ಲತಾ ರಜನಿಕಾಂತ್ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಕಂಪನಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿತ್ತು.

ಈ ದೂರು ಪ್ರಶ್ನಿಸಿದ ಲತಾ ರಜನಿಕಾಂತ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.

ಬಳಿಕ ಅವರ ವಿರುದ್ಧದ ಎಫ್.ಆಯ್.ಆರ್ ರದ್ದಾಗಿತ್ತು. ಆದರೆ ಎಫ್.ಆಯ್.ಆರ್ ರದ್ದು ಮಾಡಲು ಅವರು ನಕಲಿ ದಾಖಲಾತಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದ ಆ್ಯಡ್ ಬ್ಯುರೋ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಲತಾ ರಜನಿಕಾಂತ್ ಅವರಿಗೆ ವಿಚಾರಣೆ ಎದುರಿಸುವಂತೆ ಆದೇಶ ನೀಡಿದೆ.

ಈ ಹಿನ್ನೆಲೆಯಲ್ಲಿ ಆ್ಯಡ್ ಬ್ಯುರೋ ಕಂಪನಿ ವಿಚಾರಣೆಗೆ ಹಾಜರಾಗಲು ಲತಾ ಅವರಿಗೆ ಸಮನ್ಸ್ ನೀಡುವಂತೆ ೧ ನೇ ಎಸಿಎಂಎಂ ನ್ಯಾಯಾಲಯದ ಮೊರೆ ಹೋಗಿದ್ದು, ಸಧ್ಯದಲ್ಲೇ ಲತಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲೇ ಬೇಕಾದ ಸ್ಥಿತಿ ಎದುರಾಗಲಿದೆ.

Comments are closed.