ವಿಶೇಷ ಪಿಂಚಣಿ ಯೋಜನೆ: ತಿಂಗಳಿಗೆ ₹3,000 ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

KBOCWWB Pension Scheme: ಕರ್ನಾಟಕದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ವಿಶೇಷ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ವಯಸ್ಸಾದ ಕಾಲದಲ್ಲಿ ಕಾರ್ಮಿಕರು ಯಾರಿಗೂ ಹೊರೆಯಾಗದೆ ಗೌರವಯುತವಾಗಿ ಬದುಕಲು ಈ ಯೋಜನೆ ನೆರವಾಗಲಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಗರಿಷ್ಠ ₹3,000 ವರೆಗೆ ಪಿಂಚಣಿ ಹಣ ಸಿಗಲಿದೆ.

ಅರ್ಹತೆಗಳು ಏನಿರಬೇಕು?

ಮಂಡಳಿಯಲ್ಲಿ ನೋಂದಣಿ ಪಡೆಯಲು:

  • ಅರ್ಜಿದಾರರು ಕಟ್ಟಡ ಅಥವಾ ಇತರ ನಿರ್ಮಾಣ ಕಾರ್ಮಿಕರಾಗಿರಬೇಕು.
  • ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
  • ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು.

ಪಿಂಚಣಿ ಪಡೆಯಲು:

  • ಕಾರ್ಮಿಕರು ಮಂಡಳಿಯ ನೋಂದಾಯಿತ ಫಲಾನುಭವಿಯಾಗಿರಬೇಕು.
  • ಅರ್ಜಿದಾರರಿಗೆ 60 ವರ್ಷ ವಯಸ್ಸು ಪೂರ್ಣಗೊಂಡಿರಬೇಕು.
  • 60 ವರ್ಷ ತುಂಬುವ ಮೊದಲು ಕನಿಷ್ಠ 3 ವರ್ಷಗಳ ಕಾಲ ನಿರಂತರವಾಗಿ ಮಂಡಳಿಯ ಸದಸ್ಯರಾಗಿರಬೇಕು.
  • ಸರ್ಕಾರದ ಇತರ ಯಾವುದೇ ರೀತಿಯ ಪಿಂಚಣಿ ಯೋಜನೆಗಳ ಲಾಭ ಪಡೆಯುತ್ತಿರಬಾರದು.

ಅರ್ಜಿ ಸಲ್ಲಿಸುವ ಆನ್‌ಲೈನ್ ವಿಧಾನ

  1. ನೋಂದಣಿ: ಮೊದಲು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆ ಮತ್ತು ಓಟಿಪಿ (OTP) ಮೂಲಕ ‘ಹೊಸ ಕಾರ್ಮಿಕ’ ಎಂದು ನೋಂದಾಯಿಸಿಕೊಳ್ಳಬೇಕು.
  2. ದಾಖಲೆ ಅಪ್‌ಲೋಡ್: ಅಗತ್ಯವಿರುವ ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
  3. ಯೋಜನೆ ಆಯ್ಕೆ: ನೋಂದಣಿ ಅನುಮೋದನೆಯಾದ ನಂತರ, ಲಾಗಿನ್ ಆಗಿ “Schemes” ವಿಭಾಗದಲ್ಲಿ ‘ಪಿಂಚಣಿ ಯೋಜನೆ’ಯನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು.
  4. ನವೀಕರಣ (Renewal): ಕಾರ್ಮಿಕರು ಪ್ರತಿ 3 ವರ್ಷಕ್ಕೊಮ್ಮೆ ತಮ್ಮ ನೋಂದಣಿಯನ್ನು ನವೀಕರಿಸಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ಸದಸ್ಯತ್ವ ರದ್ದಾಗುವ ಸಾಧ್ಯತೆ ಇರುತ್ತದೆ.

ಅಗತ್ಯವಿರುವ ದಾಖಲೆಗಳು

ಆಧಾರ್ ಕಾರ್ಡ್ (ಸ್ವಯಂ ದೃಢೀಕರಿಸಿದ ಪ್ರತಿ).

ಸಹಾಯವಾಣಿ ಮತ್ತು ವಿಳಾಸ

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕರು ಬೆಂಗಳೂರಿನ ಡೈರಿ ಸರ್ಕಲ್ ಬಳಿ ಇರುವ ‘ಕಾರ್ಮಿಕ ಭವನ’ ಅಥವಾ ಆಯಾ ಜಿಲ್ಲಾ/ತಾಲ್ಲೂಕು ಕಾರ್ಮಿಕ ಕಚೇರಿಗಳನ್ನು ಸಂಪರ್ಕಿಸಬಹುದು.

  • ದೂರವಾಣಿ: 080-29753078
  • ಇಮೇಲ್: labour.commissioner42@gmail.com

ಕಾರ್ಮಿಕರ ಮರಣ ಹೊಂದಿದ ಪಕ್ಷದಲ್ಲಿ, ಅವರ ವಾರಸುದಾರರು ಅಗತ್ಯ ದಾಖಲೆಗಳೊಂದಿಗೆ ಮಂಡಳಿಗೆ ಮಾಹಿತಿ ನೀಡುವ ಮೂಲಕ ಮುಂದಿನ ಸೌಲಭ್ಯಗಳನ್ನು ಪಡೆಯಬಹುದು.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories