ನಟ ದರ್ಶನ್‌, ಪುನೀತ್‌ ರಾಜ್‌ಕುಮಾರ್‌ ನಡುವೆ ಫ್ಯಾನ್ಸ್‌ ವಾರ್‌ : ಸಿಸಿಟಿವಿ ವಿಡಿಯೋ ಆಯ್ತು ವೈರಲ್‌

ಸಿನಿರಂಗದಲ್ಲಿ ಫ್ಯಾನ್ಸ್‌ ವಾರ್‌ ಎನ್ನುವುದು ಸಾಮಾನ್ಯವಾಗಿದೆ. ಅದರಲ್ಲೂ ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಾಗಿ ನಟ ದರ್ಶನ್‌ ಹಾಗೂ ನಟ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳ ಘರ್ಷಣೆ (Actor Darshan – Puneeth fans war) ನಡೆಯುತ್ತಾ ಇರುತ್ತದೆ. ಕಳೆದ ವಾರ ಮೈಸೂರಿನ ಸೋಶಿಯಲ್‌ ರೆಸಾರ್ಟ್‌ನಲ್ಲಿ ದರ್ಶನ್‌ ಅಭಿಮಾನಿಯೊಬ್ಬರು ಪುನೀತ್‌ ಅಭಿಮಾನಿ ಯಶ್ವಂತ್‌ ಕುಮಾರ್‌ ಮೇಲೆ ಹಲ್ಲೆ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಯಶ್ವಂತ್‌ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ದರ್ಶನ್‌ ಅಭಿಮಾನಿಗಳು ಸಿಸಿಟಿವಿ ದೃಶ್ಯವಾಳಿಗಳ ಮೂಲಕ ಸ್ಪಷ್ಟನೆಯನ್ನು ನೀಡಿದ್ದು, ಈ ಕುರಿತಂತೆ ದರ್ಶನ್‌ ಆಪ್ತ ನಾಗರಾಜ್‌ ಆ ದಿನದ ಘಟನೆ ಬಗ್ಗೆ ವಿವರಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಯಶ್ವಂತ್, ಡಿಜೆ ಆಪರೇಟರ್‌ ಬಳಿ ಅಪ್ಪು ಹಾಡು ಹಾಕಲು ಕೇಳಿದ್ದು, ನಂತರ ಹಾಕುತ್ತೇನೆ ಎಂದು ಆತ ಹೇಳಿದ್ದಾರೆ. ಅಪ್ಪು ಹಾಡು ಕೇಳಿದ್ದಕ್ಕೆ ಸ್ಥಳದಲ್ಲೇ ಇದ್ದ ದರ್ಶನ್ ಅಭಿಮಾನಿ ಏಕಾಏಕಿ ಹಲ್ಲೆಗೆ ಮುಂದಾಗಿದ್ದ ಎಂದು ಯಶ್ವಂತ್ ಆರೋಪಿಸಿದ್ದರು. ಅಪ್ಪು ಮತ್ತು ಅಣ್ಣಾವ್ರ ಹಾಡನ್ನು ಕೇಳಿದ್ದಕ್ಕೆ ಥಳಿಸಿದರು ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದ ವೇಳೆ ದರ್ಶನ್ ಕೂಡ ಇದ್ದರು. ಆದರೂ ಗಲಾಟೆ ಬಿಡಿಸುವ ಗೋಜಿಗೆ ಹೋಗಲಿಲ್ಲ ಎಂದು ದೂರಿದ್ದಾರೆ.

ನಟ ದರ್ಶನ್‌ ಆಪ್ತರು ನಾಗರಾಜ್ ಮಾತನಾಡಿ “ಅಂದು ರಾತ್ರಿ ನಾವು ಊಟ ಮಾಡುತ್ತಾ ಕೂತಿದ್ದೆವು. ಆಗ ಒಬ್ಬರು ಲೇಡಿ ಬಂದರು. ಇಂದು ನನ್ನ ಹುಟ್ಟುಹಬ್ಬ ಎಂದು ತಾವೇ ದರ್ಶನ್ ಬಳಿ ಪರಿಚಯ ಮಾಡಿಕೊಂಡಿದ್ದಾರೆ. ನಟ ದರ್ಶನ್ ಅವರು ಆಕೆಗೆ ಶುಭ ಕೋರಿ ಫೋಟೊ ಕೂಡ ಕೊಟ್ಟಿದ್ದರಂತೆ. ಅದೇ ಖುಷಿ ಆ ಮಹಿಳೆ ಹೋಗಿ ತಮ್ಮ ಟೇಬಲ್‌ನಲ್ಲಿ ಕೂತಿದ್ದ ಅವರ ಪತಿಯನ್ನು ಕರೆದುಕೊಂಡು ಬಂದರು. ಅವರು ಡ್ರಿಂಕ್ಸ್ ಮಾಡಿದ್ದರು. ನನ್ನ ಗಂಡ ಆಕೆ ಎಂದು ಪರಿಚಯಿಸಿದರು. ದರ್ಶನ್‌ ಅವರೊಟ್ಟಿಗೆ ಫೋಟೊ ಕೂಡ ತೆಗೆಸಿಕೊಂಡಿದ್ದರಂತೆ.” “ಆ ಮಹಿಳೆ ನಂತರ ತಮ್ಮ ಕುಟುಂಬದ ಸದಸ್ಯರನ್ನೆಲ್ಲಾ ಕರೆದುಕೊಂಡು ಬಂದು ದರ್ಶನ್ ಅವರ ಜೊತೆ ಫೋಟೊ ತೆಗೆಸಿಕೊಂಡರು. ದರ್ಶನ್ ಅವರು ಕೂಡ ಖುಷಿಯಿಂದಲೇ ಎಲ್ಲರನ್ನು ಮಾತನಾಡಿಸಿ ಫೋಟೊ ಕೊಟ್ಟಿದ್ದರು. ಅದೆಲ್ಲಾ ಆದಮೇಲೆ ಅವರು ಡಿಜೆ ಬಳಿ ಹೋಗಿದ್ದಾರೆ. ಡಿಜೆ ನಮ್ಮ ಟೇಬಲ್‌ ಇಂದ ದೂರ ಇದ್ದರು. ಡಿಜೆ ಬಳಿ ಏನೋ ಮಾತುಕತೆ ನಡೆದಿದೆ.

“ಡಿಜೆ ಬಳಿ ಪುನೀತ್ ಹಾಡು ಬೇಕು ಎಂದು ಮಾತನಾಡಿರುವುದು. ಅದು ದೂರದಲ್ಲಿ ಇದ್ದ ನಮಗಾಗಲಿ, ದರ್ಶನ್ ಅವರಿಗಾಗಲಿ ಹೇಗೆ ಗೊತ್ತಾಗುತ್ತದೆ. ಪಬ್ ಡಿಜೆ ಸೌಂಡ್‌ನಲ್ಲಿ ಯಾರು ಯಾರೊಟ್ಟಿಗೆ ಏನು ಮಾತನಾಡಿದರು ಎನ್ನುವುದು ನಮಗೆ ಹೇಗೆ ಗೊತ್ತಾಗಬೇಕು. ಮಾಲೀಕರು ಗಲಾಟೆ ನಿಲ್ಲಿಸಲಿಲ್ಲ ಎಂದು ಯಶ್ವಂತ್ ಹೇಳಿದ್ದಾರೆ. ಆದರೆ ಗಲಾಟೆಯೇ ಆಗದೇ ಇದ್ದಾಗ ನಾವು ಹೇಗೆ ಬಿಡಿಸುವುದು. ನಾವು ಹಾಗೂ ಹರ್ಷ ಎಲ್ಲರೂ ಒಟ್ಟಿಗೆ ಇದ್ದೆವು. ನಾವೇ ಅವರ ಫೋಟೊ ಹಿಡಿದು ಕೊಟ್ಟಿದ್ದೆವು” “ಮಾಲೀಕರಾದವರು ಗಲಾಟೆ ಆಗಿದ್ದರೆ ಬಿಡಿಸುತ್ತಿದ್ದರು ಅಲ್ಲವೇ? ಶನಿವಾರ ಎಲ್ಲವೂ ಫೋಟೊ ತೆಗೆಸಿಕೊಂಡು ಹೋಗಿದ್ದೀರಾ? ಒಂದು ವೇಳೆ ಗಲಾಟೆ ಆಗಿದ್ದರೆ ಅಂದೇ ಏಕೆ ದೂರು ನೀಡಲಿಲ್ಲ. ಭಾನುವಾರದ ರಾತ್ರಿವರೆಗೂ ಕಾದಿದ್ದು ಯಾಕೆ? ಮೊದಲೇ ದೂರು ಯಾಕೆ ಕೊಡಲಿಲ್ಲ. ನಿಮಗೆ ಭಯ ಇದ್ದಿದ್ದರೆ ನೇರವಾಗಿ ಪೊಲೀಸ್ ಠಾಣೆಗೆ ಹೋಗಬೇಕಿತ್ತು ಅಲ್ಲವೇ? ಭಾನುವಾರ ದೂರಿನಲ್ಲಿ ದರ್ಶನ್ ಸರ್, ಅವರ ಸಂಗಡಿಗರ ಹೆಸರು ಸೇರಿಸುತ್ತೀರಾ? 24 ಗಂಟೆಯಲ್ಲಿ ನಿಮಗೆ ಯಾರು ಏನು ಹೇಳಿಕೊಟ್ಟರು? ಎಂದು ನಾಗರಾಜ್ ಕೇಳಿದ್ದಾರೆ.

ಇದನ್ನೂ ಓದಿ : ದೊಡ್ಮನೆ ಯುವರಾಜ್‌ಕುಮಾರ್ ನಟನೆಯ ಚೊಚ್ಚಲ ಸಿನಿಮಾದ ಟೈಟಲ್‌ ಫಿಕ್ಸ್‌

ಇದನ್ನೂ ಓದಿ : ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು

ಇದನ್ನೂ ಓದಿ : Mandala: ಹೊಸ ಲೋಕ ಅನಾವರಣಗೊಳಿಸಿದ ʼಮಂಡಲʼ

ಇದೆಲ್ಲಾ ಬೇಕು ಅಂತ ಮಾಡುತ್ತಿರುವ ಪಿತೂರಿ. ದರ್ಶನ್ ಅವರ ಹೆಸರಿಗೆ ಕಳಂಕ ತರಲು ಮಾಡುತ್ತಿರುವ ಷಡ್ಯಂತ್ರ. ದರ್ಶನ್ ಅವರ ಹೆಸರು ತಂದರೆ ನಿಮಗೆ ಮೈಲೇಜ್ ಸಿಗುತ್ತೆ ಅಂತನಾ? ಅವ್ರು ಸೈಲೆಂಟ್ ಆಗಿ ಇರುವೇ ತಪ್ಪಾ? ನಿಮ್ಮ ಉದ್ದೇಶ ಏನು ಎನ್ನುವುದು ಗೊತ್ತಾಗಬೇಕು. ನಾವೆಲ್ಲಾ ಸುಮ್ಮನಿದ್ದೇವೆ ಎಂದುಕೊಂಡಿದ್ದರೆ ನಿಮ್ಮ ಭ್ರಮೆ. ಇದು ಹೀಗೆ ಮುಂದುವರಿದರೆ ಅದರ ಪರಿಣಾಮ ಏನಾಗುತ್ತದೆ ಎಂದು ತೋರಿಸುತ್ತೇವೆ. ಹೆಸರು ಬೇಕಿದ್ದರೆ ಒಳ್ಳೆ ಕೆಲಸ ಮಾಡಿ. ಅಪ್ಪು ಸರ್ ಹೆಸರಲ್ಲೂ ಮಾಡಿ, ದರ್ಶನ್ ಸರ್ ಹೆಸರಲ್ಲೂ ಮಾಡಿ. ಸುಮಾರು ದಿನಗಳಿಂದ ಹೀಗೆ ಆಗುತ್ತಿದೆ. ನಿಮ್ಮ ಬೇಳೆ ಬೇಯಿಸಿಕೊಳ್ಳಲು ಇಬ್ಬರು ನಟರ ಅಭಿಮಾನಿಗಳನ್ನು ಪ್ರಚೋದಿಸುತ್ತಿದ್ದೀರಾ, ಇದು ಬೇಡ” ಎಂದಿದ್ದಾರೆ.

Actor Darshan – Puneeth fans war: Fan war between actor Darshan and Puneeth Rajkumar: CCTV video went viral

Comments are closed.