ನಿರ್ಮಾಪಕ ರಾಮು ಸಾವಿಗೆ ಸಚಿವ ಸುಧಾಕರ್ ಕಾರಣ….! ಇಂದ್ರಜಿತ್ ಗಂಭೀರ ಆರೋಪ…!!

ಸ್ಯಾಂಡಲ್ ವುಡ್ ನ ಕೋಟಿ ನಿರ್ಮಾಪಕ ಖ್ಯಾತಿಯ ರಾಮು‌ ನಿಧನಕ್ಕೆ ‌ಚಿತ್ರರಂಗ ಕಣ್ಣೀರು ಮಿಡಿದಿದೆ. ಈ ‌ಮಧ್ಯೆ ಪತ್ರಕರ್ತ ಹಾಗೂ ನಟ ಇಂದ್ರಜಿತ್ ಲಂಕೇಶ್ ರಾಮು ಸಾವಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ಹೊಣೆ ಎಂದು ಆರೋಪಿಸಿದ್ದಾರೆ.

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ನಿನ್ನೇ ರಾತ್ರಿ 8 ಗಂಟೆ ವೇಳೆಗೆ ನಿಧನರಾಗಿ ದ್ದಾರೆ.ಬುಧವಾರ ರಾಮು ಅಂತ್ಯಕ್ರಿಯೆ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಅವರ ತುಮಕೂರಿನ ಫಾರ್ಮ್ ಹೌಸ್ ನಲ್ಲಿ ನಡೆದಿದೆ.

ಈ ಮಧ್ಯೆ ನಿರ್ಮಾಪಕ ರಾಮು ಸಾವಿನ ಬಗ್ಗೆ ಮಾತನಾಡಿದ ಸ್ಯಾಂಡಲ್ ವುಡ್ ನ ನಟ,ನಿರ್ದೇಶಕ ಹಾಗೂ ಪತ್ರಕರ್ತ ಇಂದ್ರಜಿತ್ ಲಂಕೇಶ್ ರಾಮು ಸೇರಿದಂತೆ ಎಲ್ಲ ಕೊರೋನಾ ಪೀಡಿತರ ಸಾವಿಗೆ ಆರೋಗ್ಯ ಸಚಿವರೇ ನೇರ ಹೊಣೆ ಎಂದು ಆರೋಪಿಸಿದ್ದಾರೆ‌.
ಆರೋಗ್ಯ ಸಚಿವ ಡಾ.ಸುಧಾಕರ್ ಮಾಸ್ಕ್ ಸ್ಯಾನಿಟೈಸರ್ ಸೇರಿದಂತೆ ಎಲ್ಲ ಕೊರೋನಾ ಅಗತ್ಯ ವಸ್ತುಗಳನ್ನಿಟ್ಟುಕೊಂಡು ಹಣ ಮಾಡಲು ಹೊರಟಿದ್ದಾರೆ. ಹೀಗಾಗಿ ಕೊರೋನಾ ಸೋಂಕಿತರು ಸೌಲಭ್ಯ ಕೊರತೆ ಎದುರಿಸುತ್ತಿದ್ದಾರೆ.

ಅ ಮೂಲಕ ರಾಮು ಸಾವಿಗೆ ಸುಧಾಕರ್ ನೇರ ಹೊಣೆ ಎಂದು ಇಂದ್ರಜಿತ್ ಹೇಳಿದ್ದಾರೆ. ಕಳೆದ ಒಂದು ವಾರದಿಂದ ಕೊರೋನಾ ಸೋಂಕಿನಿಂದ‌ ಬಳಲುತ್ತಿದ್ದ ರಾಮು ಅವರನ್ನು ಉಸಿರಾಟದ ತೊಂದರೆಯಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Comments are closed.