ಬಾಲಿವುಡ್‌ಗೆ ಲಗ್ಗೆ ಇಟ್ಟ ಅಲ್ಲು ಅರ್ಜುನ್‌ ಯಾವ ಸಿನಿಮಾ ಗೊತ್ತಾ ?

ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಹಾಗೂ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬೇಡಿಕೆ ಹೊಂದಿರುವ ನಟರು ಎಂದ ಕೂಡಲೇ ಕೇಳಿ ಬರುವ ಕೆಲವು ಹೆಸರುಗಳಲ್ಲಿ ಒಬ್ಬರು ಅಲ್ಲು ಅರ್ಜುನ್. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ದೊಡ್ಡ ಮಟ್ಟದಲ್ಲಿ ಕ್ಲಿಕ್ ಆಗುವ ಮುನ್ನವೇ ದೇಶದಾದ್ಯಂತ ತನ್ನ ಅದ್ಭುತ ಡಾನ್ಸ್, ಉತ್ತಮ ನಟನೆ ಹಾಗೂ ಹಿಟ್ ಸಿನಿಮಾಗಳಿಂದ ಹೆಸರು ಮಾಡಿದ್ದ ನಟ. ವಿಜೇತ ಹಾಗೂ ಸ್ವಾತಿ ಮುತ್ಯಂ ಸಿನಿಮಾಗಳಲ್ಲಿ ಬಾಲ ನಟನಾಗಿ ನಟಿಸಿದ್ದ ಅಲ್ಲು ಅರ್ಜುನ್ 2003ರಲ್ಲಿ ಬಿಡುಗಡೆಗೊಂಡ ಗಂಗೋತ್ರಿ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಹೀರೊ ಆಗಿ ಬಡ್ತಿ ಪಡೆದರು. ಇನ್ನು ಮೆಗಾ ಫ್ಯಾಮಿಲಿಯ ನಟ ಹಾಗೂ ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರ ಪುತ್ರನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಅಲ್ಲು ಅರ್ಜುನ್ ತನ್ನ ಪ್ರತಿಭೆಯಿಂದ ಸಿನಿ ರಸಿಕರ ಮನಗೆದ್ದು ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿ ತೆಲುಗು ಸಿನಿರಂಗದ ಸ್ಟೈಲಿಷ್ ಸ್ಟಾರ್ ಆಗಿ ನೆಲೆಯೂರಿದ್ದಾರೆ. ಇದೀಗ ನಟ ಅಲ್ಲು ಅರ್ಜುನ್‌ ಬಾಲಿವುಡ್‌ಗೆ (Allu Arjun – Shah Rukh Khan)ಲಗ್ಗೆ ಇಟ್ಟಿದ್ದಾರೆ.

ಹೀಗೆ ತನ್ನ ಸ್ವಂತ ಶ್ರಮದಿಂದ ಎತ್ತರಕ್ಕೆ ಬೆಳೆದಿರುವ ಅಲ್ಲು ಅರ್ಜುನ್ ತೆಲುಗು ಹೊರತುಪಡಿಸಿ ಬೇರೆ ಯಾವುದೇ ಭಾಷೆಯ ಸಿನಿಮಾಗಳಲ್ಲಿಯೂ ನಟಿಸಿಲ್ಲ. ಪುಷ್ಪ ಸಿನಿಮಾದ ಮೂಲಕ ದೇಶದ ಎಲ್ಲಾ ಭಾಷೆಯ ಸಿನಿ ರಸಿಕರಿಗೂ ದೊಡ್ಡ ಮಟ್ಟದಲ್ಲಿ ರೀಚ್ ಆಗಿರುವ ಅಲ್ಲು ಅರ್ಜುನ್‌ಗೆ ಇದೀಗ ಬಾಲಿವುಡ್ ಸಿನಿಮಾವೊಂದರಲ್ಲಿ ನಟಿಸಲು ಆಹ್ವಾನ ಬಂದಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಶಾರುಖ್ ಖಾನ್ ಹಾಗೂ ಸೌತ್ ನಿರ್ದೇಶಕ ಅಟ್ಲಿ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ಜವಾನ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ವಿಶೇಷ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಿರ್ದೇಶಕ ಅಟ್ಲಿ ಪಾತ್ರದ ಬಗ್ಗೆ ಈಗಾಗಲೇ ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗುತ್ತಿದ್ದು, ಅಲ್ಲು ಅರ್ಜುನ್ ತಮ್ಮ ನಿರ್ಣಯವನ್ನು ತಿಳಿಸವುದು ಬಾಕಿ ಇದೆ. ಒಂದುವೇಳೆ ಅಲ್ಲು ಅರ್ಜುನ್ ಈ ವಿಶೇಷ ಪಾತ್ರ ಮಾಡಲು ಒಪ್ಪಿಗೆ ನೀಡಿದರೆ ಬಾಲಿವುಡ್ ಎಂಟ್ರಿ ಪಕ್ಕಾ ಆಗಲಿದೆ.

ಇನ್ನು ಅಲ್ಲು ಅರ್ಜುನ್ ಜವಾನ್ ಸಿನಿಮಾದಲ್ಲಿ ವಿಶೇಷ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯಿಸುತ್ತಿರುವ ಅಲ್ಲು ಅರ್ಜುನ್ ಹಾಗೂ ಶಾರುಖ್ ಖಾನ್ ಅಭಿಮಾನಿಗಳು ಮತ್ತು ಸಿನಿ ರಸಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಜೋಡಿಯನ್ನು ಒಟ್ಟಿಗೆ ತೆರೆ ಮೇಲೆ ನೋಡುವುದೇ ಹಬ್ಬ ಎಂದು ಕಾಮೆಂಟ್ ಮಾಡುತ್ತಿರುವ ಸಿನಿ ರಸಿಕರು ಅಲ್ಲು ಅರ್ಜುನ್ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಲಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಸಿನಿಮಂದಿರದಲ್ಲಿ ಅಬ್ಬರಿಸುತ್ತಿರುವ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾದಲ್ಲಿ ಸಹ ಸಲ್ಮಾನ್ ಖಾನ್ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಸರ್‌ಪ್ರೈಸ್ ನೀಡಿದ್ದಾರೆ.

ಇದನ್ನೂ ಓದಿ : KCC Tournament Ticket : ಕೆಸಿಸಿ ಟೂರ್ನಮೆಂಟ್ ಟಿಕೆಟ್ ಬುಕಿಂಗ್ ಆರಂಭ : ಬುಕ್‌ ಮಾಡುವುದು ಹೇಗೆ ಗೊತ್ತಾ ?

ಇದನ್ನೂ ಓದಿ : Aero India  : ಪ್ರಧಾನಿ ಮೋದಿ ಔತಣಕೂಟದಲ್ಲಿ ಯಶ್, ರಿಷಬ್ ಶೆಟ್ಟಿ : ಆಯ್ತು ವೈರಲ್ ಫೋಟೊ

ಇದನ್ನೂ ಓದಿ : Jani Master : ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಜಾನಿ ಮಾಸ್ಟರ್‌ ಭೇಟಿ ವೈರಲ್‌ ಆಯ್ತು ಪೋಸ್ಟ್

ಕಳೆದೆರಡು ವರ್ಷಗಳಿಂದ ಬಾಲಿವುಡ್ ಸಿನಿಕರಂಗವನ್ನು ಕುಗ್ಗಿಸಿದ್ದ ಬಾಯ್‌ಕಾಟ್ ಟ್ರೆಂಡ್ ತಣ್ಣಗಾಗುವ ಸಮಯ ಬಂದಂತಿದೆ. ಸದ್ಯ ಸಿನಿಮಂದಿರದಲ್ಲಿ ಅಬ್ಬರಿಸುತ್ತಿರುವ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ಪಠಾಣ್ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುವ ಸನಿಹದಲ್ಲಿದ್ದು, ಈ ಸಿನಿಮಾ ಬಾಯ್‌ಕಾಟ್ ವಿರೋಧದ ನಡುವೆಯೂ ಗೆದ್ದು ಬೀಗಿದೆ. ಇನ್ನು ಜವಾನ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ಕೂಡ ನಟಿಸಿದರೆ ಆ ಸಿನಿಮಾಕ್ಕೂ ಸಹ ಬಾಯ್‌ಕಾಟ್ ಬಿಸಿ ತಟ್ಟುವುದಿಲ್ಲ ಎನ್ನಬಹುದು. ಸೌತ್ ನಿರ್ದೇಶಕ ಅಟ್ಲಿ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೆ ದಕ್ಷಿಣ ರಾಜ್ಯಗಳಲ್ಲಿ ಈ ಸಿನಿಮಾ ಯಾವುದೇ ವಿರೋಧವಿಲ್ಲದೇ ಒಳ್ಳೆಯ ಓಪನಿಂಗ್ ಪಡೆದುಕೊಳ್ಳಲಿದೆ ಎನ್ನಲಾಗುತ್ತಿತ್ತು. ಈಗ ಅಲ್ಲು ಅರ್ಜುನ್ ಸಹ ತಂಡ ಸೇರುವುದರಿಂದ ಬಾಯ್‌ಕಾಟ್ ಕಾಟ ಸಿನಿತಂಡಕ್ಕೆ ಬಹುತೇಕ ಇರುವುದಿಲ್ಲ ಎನ್ನಬಹುದು.

Allu Arjun – Shah Rukh Khan : Do you know which movie Allu Arjun made Bollywood debut?

Comments are closed.