ರಿಷಬ್‌ ಪಂತ್‌ ಭೇಟಿಯಾದ ಅನುಪಮ್ ಖೇರ್-ಅನಿಲ್ ಕಪೂರ್

ಡೆಡ್ಲಿ ಕಾರು ಆಕ್ಸಿಡೆಂಟ್’ನಲ್ಲಿ ಗಂಭೀರವಾಗಿ ಗಾಯಗೊಂಡಿರುವ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಡೆಹ್ರಾಡೂನ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 25 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಾರಿಗೆ ಬೆಂಕಿ ಹಚ್ಚಿದ ನಂತರ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅನುಪಮ್ ಖೇರ್ ಮತ್ತು ಅನಿಲ್ ಕಪೂರ್ ದಂಪತಿ (Anupam Kher-Anil Kapoor ) ಡಿಸೆಂಬರ್ 31, 2022 ರಂದು ಆಸ್ಪತ್ರೆಯಲ್ಲಿ ಪಂತ್ ಅವರನ್ನು ಭೇಟಿ ಮಾಡಿ ಯೋಗಕ್ಷೇಮವನ್ನು ವಿಚಾರಿಸಿದ್ದರು.

ರಿಷಬ್‌ ಪಂತ್‌ ತನ್ನ ಕುಟುಂಬವನ್ನು ಭೇಟಿ ಮಾಡಲು ಉತ್ತರಾಖಂಡದ ತನ್ನ ತವರು ಊರಿಗೆ ಹೋಗುತ್ತಿದ್ದಾಗ, ಕಾರು ಅಪಘಾತದಲ್ಲಿ ಗಾಯಗೊಂಡ ಅವರು ಪ್ರಸ್ತುತ ಉತ್ತರಾಖಂಡದ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅನಿಲ್ ಕಪೂರ್‌ ಮತ್ತು ಅನುಪಮ್ ಖೇರ್ ಅವರು ತಮ್ಮ ಅಭಿಮಾನಿಗಳಾಗಿ ರಿಷಬ್‌ ಪಂತ್‌ನ್ನು ಭೇಟಿಯಾಗಿದ್ದೇವೆ ಮತ್ತು ಅವರನ್ನು ನಾವು ತುಂಬಾ ನಗಿಸಿದ್ದೇವೆ” ಎಂದು ಹೇಳಿದರು.

ಈಗಾಗಲೇ ರಿಷಬ್ ಪಂತ್ ಅವರ ಶೀಘ್ರ ಚೇತರಿಕೆಗೆ ಇಡೀ ಕ್ರಿಕೆಟ್ ಜಗತ್ತೇ ಹಾರೈಸುತ್ತಿದೆ. ಹಾಲಿ ಕ್ರಿಕೆಟಿಗರು ಮಾಜಿ ಕ್ರಿಕೆಟಿಗರೆಲ್ಲಾ ರಿಷಬ್ ಪಂತ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮಾಡಿದ್ದಾರೆ. ಭಾರತವಷ್ಟೇ ಅಲ್ಲದೇ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್..ಅಷ್ಟೇ ಅಲ್ಲ ಪಾಕಿಸ್ತಾನದ ಕ್ರಿಕೆಟಿಗರೂ ಪಂತ್ ಚೇತರಿಕೆಗೆ ಹಾರೈಸಿದ್ದಾರೆ. ಇದೀಗ ಬಾಲಿವುಡ್‌ ಖ್ಯಾತ ದಂಪತಿಗಳು ರಿಷಬ್‌ ಪಂತ್‌ ಯೋಗಕ್ಷೇಮ ವಿಚಾರಿಸಲು ಖುದ್ದಾಗಿ ಆಸ್ಪತ್ರೆಗೆ ಧಾವಿಸಿದ್ದಾರೆ.

ಅನುವೋಮ್ ಖೇರ್ ಮತ್ತು ಅನಿಲ್ ಕಪೂರ್ ರಿಷಬ್ ಪಂತ್ ಭೇಟಿ ಆದ ಮೇಲೆ ಮಾಧ್ಯಮದವರೊಂದಿಗೆ, “ಅವರು ಚೆನ್ನಾಗಿಯೇ ಇದ್ದಾರೆ. ನಾವು ಅವರನ್ನು ಅಭಿಮಾನಿಗಳಾಗಿ ಭೇಟಿ ಆಗಿದ್ದೇವೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸೋಣ. ಅವರು ಮತ್ತೆ ಆಡುವುದನ್ನು ನಾವು ನೋಡುತ್ತೇವೆ” ಎಂದು ಬಾಲಿವುಡ್‌ ಹಿರಿಯ ನಟ ಅನಿಲ್‌ ಕಪೂರ್‌ ಹೇಳಿದ್ದಾರೆ.

ಇನ್ನೂ ನಂತರ ಮಾತನಾಡಿದ ಅನುಪಮ್ ಖೇರ್, “ಎಲ್ಲವೂ ಚೆನ್ನಾಗಿದೆ. ನಾವು ಪಂತ್, ಅವರ ತಾಯಿ ಮತ್ತು ಸಂಬಂಧಿಕರನ್ನು ಭೇಟಿ ಮಾಡಿದ್ದೇವೆ, ಅವರೆಲ್ಲರೂ ಚೆನ್ನಾಗಿದ್ದಾರೆ. ನಾವು ಅವನನ್ನು ತುಂಬಾ ನಗುವಂತೆ ಮಾಡಿದ್ದೇವು” ಎಂದು ಹೇಳಿದ್ದರು. ಮಾಧ್ಯಮಗಳ ವರದಿ ಪ್ರಕಾರ, ರಿಷಭ್ ಅವರ ಸ್ಥಿತಿ ಈಗ ಸ್ಥಿರವಾಗಿದ್ದು ಆದರೆ ಅವರ ಸ್ಥಿತಿಯನ್ನು ನಿರ್ಣಯಿಸಲು ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಆಸ್ಪತ್ರೆ ಹೇಳಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಅಪಘಾತದಲ್ಲಿ ಪಂತ್ ಅವರ ತಲೆ, ಬೆನ್ನು ಮತ್ತು ಪಾದಗಳಿಗೆ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Naresh Pavitra Lokesh : ಪರಸ್ಪರ ‌ಚುಂಬಿಸಿ ಮದುವೆ ಡೇಟ್ ಫಿಕ್ಸ್ ಎಂದ ನರೇಶ್ ಪವಿತ್ರಾ ಲೋಕೇಶ್ ಜೋಡಿ

ಇದನ್ನೂ ಓದಿ : Swati Muttina Male Haniye Movie : ಪ್ರಬುದ್ಧ ಪ್ರೇಮಕಥೆಯ ಭಾವನಾತ್ಮಕ ಜರ್ನಿ ‘ಸ್ವಾತಿ ಮುತ್ತಿನ ಮಳೆ ಹನಿ’

ಇದನ್ನೂ ಓದಿ : ಸಿನಿರಂಗದಲ್ಲಿ 6 ವರ್ಷ ಪೂರೈಸಿದ ರಶ್ಮಿಕಾ ಮಂದಣ್ಣ : ಸಂತಸದ ನಡುವೆ “ಕಿರಿಕ್‌ ಪಾರ್ಟಿ” ಸಿನಿಮಾ ಮರೆತ್ರಾ ?

ಅನಿಲ್ ಕೊನೆಯದಾಗಿ ವರುಣ್ ಧವನ್, ಕಿಯಾರಾ ಅಡ್ವಾಣಿ ಮತ್ತು ನೀತು ಕಪೂರ್ ಅಭಿನಯದ ಜಗ್ಗುಗ್ ಜೀಯೋದಲ್ಲಿ ನಟಿಸಿದ್ದಾರೆ. ಅನುಪಮ್ ಕೊನೆಯದಾಗಿ ಸೂರಜ್ ಬರ್ಜಾತ್ಯಾ ಅವರ ಉಂಚೈ ಮತ್ತು ಸಮಂತಾ ರೂತ್ ಪ್ರಭು ಅಭಿನಯದ ವೈಜ್ಞಾನಿಕ ಥ್ರಿಲ್ಲರ್ ಯಶೋದಾದಲ್ಲಿ ನಟಿಸಿದ್ದಾರೆ.

Anupam Kher-Anil Kapoor who met Rishabh Pant

Comments are closed.