ಬಸವನ ಚಿಕಿತ್ಸೆಗೆ ಸ್ಪಂದಿಸಿ ಮಾನವೀಯತೆ ಮೆರೆದ ಚಾಲೆಂಜಿಂಗ್ ಸ್ಟಾರ್

0

ಮೈಸೂರು : ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಸವನ ಚಿಕಿತ್ಸೆಗೆ ಸ್ಪಂದಿಸುವ ಮೂಲಕ ಮತ್ತೊಮ್ಮೆ ತಮ್ಮ ಪ್ರಾಣಿ ಪ್ರಿಯತೆಯನ್ನು ಮೆರೆದಿದ್ದಾರೆ.ಕೆ.ಆರ್.ನಗರ ತಾಲೂಕು ಕಾಳಮ್ಮನ ಕೊಪ್ಪಲು ಗ್ರಾಮಕ್ಕೆ ಪಶು ವೈದ್ಯರನ್ನು ಕಳುಹಿಸಿಕೊಟ್ಟು, ಬಸವನ ಚಿಕಿತ್ಸೆಗೆ ನೆರವಾಗಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ನಟ ದರ್ಶನ್ ಪ್ರಚಾರ ಮಾಡಿದ್ದರು. ಆ ಸಂದರ್ಭದಲ್ಲಿ ಕೆ.ಆರ್.ನಗರ ತಾಲೂಕಿನ ಕಾಳಮ್ಮನಕೊಪ್ಪಲು ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸುವ ವೇಳೆ ಬಸವವೊಂದು ಅಡ್ಡಲಾಗಿ ನಿಂತು ಪ್ರಚಾರ ನಡೆಸಲು ಅವಕಾಶ ಮಾಡಿಕೊಟ್ಟಿರಲಿಲ್ಲ.

ಆ ವೇಳೆ ಖುದ್ದು ದರ್ಶನ್ ಪ್ರಚಾರದ ರಥದಿಂದ ಕೆಳಗಿಳಿದು ಬಸವನ ಬಳಿಗೆ ಬಂದು ಬಸವನ ಮೈ ಸವರಿದ್ದಾರೆ. ಚಾಲೆಜಿಂಗ್ ಸ್ಟಾರ್ ದರ್ಶನ್ ಪ್ರೀತಿಯಿಂದ ಮೈ ಸವರುತ್ತಿದ್ದಂತೆಯೇ ಬಸವ ದಾರಿಯನ್ನು ಬಿಟ್ಟುಕೊಟ್ಟಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿತ್ತು. ಮಾತ್ರವಲ್ಲ ದರ್ಶನ್ ಅವರಿಗೆ ಪ್ರಾಣಿಗಳ ಮೇಲಿರುವ ಪ್ರೀತಿಯ ಕುರಿತು ಮೆಚ್ಚುಗೆಯೂ ವ್ಯಕ್ತವಾಗಿತ್ತು.

ಆದ್ರೆ ದರ್ಶನ್ ನೆಚ್ಚಿನ ಬಸವ ಕಳೆದ ಹಲವು ದಿನಗಳಿಂದಲೂ ಅನಾರೋಗ್ಯಕ್ಕೆ ತುತ್ತಾಗಿತ್ತು. ಈ‌ ವಿಷಯವನ್ನು ಗ್ರಾಮಸ್ಥರು‌ ಹಾಗೂ ಸ್ನೇಹಿತರು ದರ್ಶನ್ ಅವರಿಗೆ ತಿಳಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ನಟ ದರ್ಶನ್ ಸದ್ಯ ಸ್ನೇಹಿತರೊಂದಿಗೆ ಮೈಸೂರಿನಿಂದ ಪಶು ವೈದ್ಯರನ್ನು ಕಲಿಸಿಕೊಟ್ಟು ಚಿಕಿತ್ಸೆ ನೀಡಿಸಿದ್ದಾರೆ.

ಹೀಗಾಗಿ ಬಸವ ಚೇತರಿಸಿಕೊಳ್ಳುತ್ತಿದ್ದೆ, ಪ್ರಾಣಿಗಳ ಮೇಲೆ ಅಪಾರವಾದ ಪ್ರೀತಿಯನ್ನು ಹೊಂದಿರುವ ದರ್ಶನ್ ಅವರಿಗೆ ಗ್ರಾಮಸ್ಥರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.

Leave A Reply

Your email address will not be published.