ಬಾಹುಬಲಿಯಲ್ಲ.. ಇದು ಕನ್ನಡದ ಬಿಚ್ಚುಗತ್ತಿ

0

ಸ್ಯಾಂಡಲ್ ವುಡ್ ನಲ್ಲಿ ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತಿವೆ. ಕುರುಕ್ಷೇತ್ರ ಸಿನಿಮಾದ ನಂತರ ಕನ್ನಡದಲ್ಲಿ ಇನ್ನೊಂದು ಐತಿಹಾಸಿಕ ಸಿನಿಮಾ ಸದ್ದು ಮಾಡ್ತಿದೆ. ಟ್ರೈಲರ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿಸಿರೊ ಈ ಸಿನಿಮಾ ತೆಲುಗಿನ ಬಾಹುಬಲಿಗೆ ಹೋಲಿಕೆ ಮಾಡ್ತಿದ್ದಾರೆ. ಆದರೆ ಚಂದನವನದ ಮಂದಿ ಇದು ಬಾಹುಬಲಿ ತರ ಅಲ್ಲಾ, ಇದು ಕನ್ನಡದ ಹೆಮ್ಮೆಯ ಬಿಚ್ಚುಗತ್ತಿ ಅಂತಿದ್ದಾರೆ.

ರಾಜವರ್ಧನ್ ಮತ್ತು ಹರಿಪ್ರಿಯ ಮುಖ್ಯಭೂಮಿಯಲ್ಲಿ ಕಾಣಿಸಿಕೊಂಡಿರೋ ಬಿಚ್ಚುಗತ್ತಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಕಾಲೇಜ್ ಕುಮಾರ್, ವಿಕ್ಟರಿ -2, ಅಲೆಮಾರಿಯಂತಹ ಸೂಪರ್ ಹಿಟ್ ಸಿನಿಮಾಗಳನ್ನು ಸ್ಯಾಂಡಲ್ ವುಡ್ ಗೆ ಕೊಟ್ಟ ಸಂತು ಐತಿಹಾಸಿಕ ಸಿನಿಮಾ ಮಾಡಿದ್ದಾರೆ.

ಈಗಾಗಲೇ ಸಿನಿಮಾ ಮೇಕಿಂಗ್ ಚಿತ್ರಪ್ರೇಮಿಗಳನ್ನು ತುದಿಗಾಲಲ್ಲಿ ನಿಲ್ಲಿಸುತ್ತಿದ್ದು, ಎಲ್ಲರ ಮೆಟ್ಟುಗೆಗೆ ಪಾತ್ರವಾಗಿದೆ. ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಹರಿಪ್ರಿಯ ಹಾಡುಗಳಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದಾರೆ. ಚಿತ್ರದಲ್ಲಿ ಹರಿಪ್ರಿಯ ಗ್ಲಾಮರ್ ಲುಕ್ ಪಡ್ಡೆ ಹೈಕಳ ನಿದ್ದೆಗೆಡಿಸಿದೆ.

ಖ್ಯಾತ ಹಾಸ್ಯನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಬಿಚ್ಚುಗತ್ತಿ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಾರೆ.

ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ ಸಿನಿಮಾವಾಗಿರೋ ಬಿಚ್ಚುಗತ್ತಿಯಲ್ಲಿ ದಳವಾಯಿ ದಂಗೆಯಲ್ಲಿ ಬರೋ ವೀರ ಭರಮಣ್ಣನ ಕಥೆಯೊಂದನ್ನು ಇಟ್ಟುಕೊಂಡು ಸಿನಿಮಾ ತಯಾರಿಸಲಾಗಿದೆ.

ನಿಶಾಂತ್ ತೇಜಸ್ವಿ ಬಹುನಿರೀಕ್ಷಿತ ಬಿಚ್ಚುಗತ್ತಿಗೆ ಬಂಡವಾಳ ಹೂಡಿದ್ದಾರೆ. ಫೆಬ್ರವರಿ 28ಕ್ಕೆ ಬಿಚ್ಚುಗತ್ತಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಸಂಗೊಳ್ಳಿ ರಾಯಣ್ಣ, ಅಲ್ಲಮ, ಗಂಡುಗಲಿ ಕುಮಾರರಾಮ, ಕುರುಕ್ಷೇತ್ರ ಹೀಗೆ ಐತಿಹಾಸಿಕ ಸಿನಿಮಾಗಳು ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಆಗಿತ್ತು.

ಹೀಗಾಗಿ ಬಿಚ್ಚುಗತ್ತಿಯ ಮೇಲೂ ಚಿತ್ರತಂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಚಿತ್ರರಸಿಕರು ಸಿನಿಮಾ ನೋಡುವುದಕ್ಕೆ ಕಾತರರಾಗಿದ್ದಾರೆ.

Leave A Reply

Your email address will not be published.