ಚಿರು ಯಾವಾಗ ಭೂಮಿಗೆ ಬರಲು ಇಚ್ಚಿಸುತ್ತಾರೋ ಅವತ್ತು ಬರಲಿ….! ಮೇಘನಾ ಮನದಾಳ..!!

ಇವತ್ತು ಚಿರಂಜೀವಿ ಸರ್ಜಾ ಹುಟ್ಟುಹಬ್ಬ. ಚಿರಂಜೀವಿ ಸರ್ಜಾ ಇಲ್ಲದೇ ಇರೋದಿಂದ ಚಿರು ಹಾಗೂ ಮೇಘನಾ ಕುಟುಂಬಸ್ಥರು ಸಮಾಧಿಗೆ ಪೂಜೆ ಸಲ್ಲಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಪತಿ ಸಮಾಧಿಗೆ ಪೂಜೆ ಸಲ್ಲಿಸಲು ತೆರಳುವ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮೇಘನಾ ಸರ್ಜಾ, ಚಿರು ಇಲ್ಲ ಅನ್ನೋದು ಕೇವಲ ನನಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ,ಅಭಿಮಾನಿಗಳಿಗೆ ಎಲ್ಲರಿಗೂ ದುಃಖದ ವಿಚಾರವೇ ಎಂದಿದ್ದಾರೆ.

ತಮ್ಮ ಹೊಟ್ಟೆಯಲ್ಲಿ ಮತ್ತೆ ಚಿರು ಹುಟ್ಟಿ ಬರ್ತಾರೆ ಎಂಬರ್ಥದಲ್ಲಿ ಮಾತನಾಡಿದ ಮೇಘನಾ ಸರ್ಜಾ, ಮತ್ತೆ ಚಿರು ಯಾವಾಗ ಹುಟ್ಟಿಬರ್ತಾರೋ ಅವರೇ ಡಿಸೈಡ್ ಮಾಡಬೇಕು. ಅವರಿಗೆ ಬರಬೇಕು ಅನ್ನಿಸಿದಾಗ ಅವರು ಬರ್ತಾರೆ. ಅದು ಇಂದೇ ಆದರೂ ಆಗಬಹುದು ಎಂದಿದ್ದಾರೆ.

ಅಷ್ಟೇ ಅಲ್ಲ ತಮ್ಮ ಅದ್ದೂರಿ ಸೀಮಂತದ ಬಗ್ಗೆ ಮಾತನಾಡಿದ ಮೇಘನಾ, ನನ್ನ ಸೀಮಂತ ಚಿರು ಕನಸಾಗಿತ್ತು. ಅದನ್ನು ಧ್ರುವ, ನನ್ನ ತಂದೆ-ತಾಯಿ, ಕುಟುಂಬಸ್ಥರು ಎಲ್ಲರೂ ಸೇರಿ ಅದ್ದೂರಿಯಾಗಿ ನೆರವೇರಿಸಿದ್ದಾರೆ. ನನಗಂತೂ ತುಂಬಾ ಖುಷಿಯಾಗಿದೆ. ಚಿರು ಹಂಡ್ರೆಡ್ ಪರ್ಸೆಂಟ್ ಖುಷಿಯಾಗಿರುತ್ತೆ ಎಂದು ಭಾವುಕರಾಗಿದ್ದಾರೆ.

ಚಿರು ಸಮಾಧಿ ಇರುವ ಬೃಂದಾವನ ಫಾರ್ಂ ಹೌಸ್ ಗೆ ತೆರಳಿದ ಮೇಘನಾ ಅಲ್ಲಿ ಚಿರುಗೆ ಪೂಜೆ ಸಲ್ಲಿಸಿದ್ದಾರೆ. ಮೇಘನಾ ಜೊತೆ ಪ್ರಮೀಳಾ ಜೋಷಾಯ್ ಹಾಗೂ ಸುಂದರ್ ರಾಜ್ ಕೂಡ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಧ್ರುವ ಕೂಡ ಪೂಜೆ ಸಲ್ಲಿಸಿದ್ದು ಬಳಿಕ‌ ತಮ್ಮ ಹೊಸ ಚಿತ್ರದ ಮುಹೂರ್ತ ಕ್ಕೆ ತೆರಳಿದ್ದಾರೆ.

Comments are closed.