ರೀಲ್ ನಲ್ಲಿ ಮಗು ಎತ್ತಿ ಮುದ್ದಾಡಿದ ಚಿರುಗೆ ರಿಯಲ್ ನಲ್ಲಿ ತಪ್ಪಿತು ಆ ಭಾಗ್ಯ…!! ಕಣ್ಣೀರು ತರಿಸುತ್ತೆ ವಿಡಿಯೋ

ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಕೊನೆ ಚಿತ್ರ ಕ್ಷತ್ರಿಯ. ಚಿರು ಹುಟ್ಟುಹಬ್ಬದಂದು ಚಿತ್ರತಂಡ ಟೀಸರ್ ರಿಲೀಸ್ ಮಾಡಿದ್ದು ಚಿರು ಮಗುವೊಂದನ್ನು ಎತ್ತಿಮುದ್ದಾಡುವ ದೃಶ್ಯ ಕಂಡು ಎಲ್ಲರೂ ಅಕ್ಷರಶಃ ಕಣ್ಣೀರಿಟ್ಟಿದ್ದಾರೆ.

ಹೌದು, ಶೇಕಡಾ 80 ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದ್ದ ಕ್ಷತ್ರಿಯ ಸಿನಿಮಾ ಕೊರೋನಾ ಸಂಕಷ್ಟ ಇಲ್ಲದಿದ್ದರೇ ಇಷ್ಟೊತ್ತಿಗೆ ಥಿಯೇಟರ್ ನಲ್ಲಿ ಇರಬೇಕಿತ್ತು.

ಯಾರಿಗೆ ಗೊತ್ತು ಚಿತ್ರದಲ್ಲಿ ಮಗುವನ್ನು ಮುದ್ದಾಡುವ ದೃಶ್ಯದಲ್ಲಿ ಅಭಿನಯಿಸಿದ್ದ ಚಿರು ಆ ಚಿತ್ರದ ಬಿಡುಗಡೆಯ ಮೂಲಕವೇ ತಾವು ತಂದೆಯಾಗುತ್ತಿರುವ ಸಂದೇಶವನ್ನು ನೀಡಲು ಹೊರಟಿದ್ದರೋ ಏನೋ.

ಅದರೆ ಎಲ್ಲವೂ ವಿಧಿವಿಲಾಸದಿಂದ ಬದಲಾಗಿದೆ. ಕ್ಷತ್ರಿಯ ಸಿನಿಮಾದಲ್ಲಿ ಮಗುವೊಂದನ್ನು ಮುದ್ದಾಡುತ್ತಿರುವ ಚಿರು ರಿಯಲ್ ಲೈಫ್ ನಲ್ಲಿ ತಮ್ಮ ಕರುಳಿನ ಕುಡಿಯನ್ನು ಕೈಯಲ್ಲಿ ಎತ್ತಿ ಮುದ್ದಿಡುವ ಮುನ್ನವೇ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.

ಕ್ಷತ್ರಿಯ ಚಿತ್ರತಂಡ ಚಿರು ಕೈಯಲ್ಲಿ ಮಗು ಇರುವ ಪೋಟೋದ ಜೊತೆ ಟೀಸರ್ ಕೂಡ ರಿಲೀಸ್ ಮಾಡಿದ್ದು ಟೀಸರ್ ನಲ್ಲೂ ಚಿರು ಹುಟ್ಟುಹಬ್ಬ ಆಚರಿಸಿಕೊಳ್ಳುವ ದೃಶ್ಯವಿದೆ.

ಚಿರು ಇಲ್ಲದೇ ಅವರ ನೆನಪಿನಲ್ಲಿ ಹುಟ್ಟುಹಬ್ಬ ಆಚರಿಸುತ್ತಿರುವ ಅಭಿಮಾನಿಗಳು ಈ ಟೀಸರ್ ಕಂಡು ಅಕ್ಷರಷಃ ಕಣ್ಣಿರಾಗಿದ್ದಾರೆ.
ಅನಿಲ್ ಮಂಡ್ಯ ನಿರ್ದೇಶನದ ಈ ಚಿತ್ರ ಎ.ವೆಂಕಟೇಶ್ ನಿರ್ಮಾಣದಲ್ಲಿ ಮೂಡಿ ಬರ್ತಿದೆ. ಇನ್ನು ಅದ್ದೂರಿ ತಾರಾಗಣವಿರುವ ಈ ಚಿತ್ರದಲ್ಲಿ ಶ್ರೀನಾಥ, ಶಾಲಿನಿ ಸೇರಿದಂತೆ ಹಲವು ಹಿರಿಯ ನಟ-ನಟಿಯರಿದ್ದಾರೆ.

ಅಣ್ಣನ ನಿಧನದ ನಂತರ ಚಿತ್ರದ ಡಬ್ಬಿಂಗ್ ನ್ನು ಧ್ರುವ ಮುಗಿಸಿಕೊಟ್ಟಿದ್ದು ಕ್ಷತ್ರಿಯ ಚಿರು ಕೊನೆಯ ಚಿತ್ರವಾಗಿರೋದರಿಂದ ಅಭಿಮಾನಿಗಳು ಚಿತ್ರ ನೋಡಿ ಚಿರು ಆಸೆಯನ್ನು ಈಡೇರಿಸಬೇಕೆಂದು ಧ್ರುವ ಸರ್ಜಾ ಮನವಿ ಮಾಡಿದ್ದಾರೆ.

ಇನ್ನು ಈ ಚಿತ್ರದ ಪೋಸ್ಟರ್ ನಲ್ಲಿ ಚಿರು ಮಗುವನ್ನೆತ್ತಿಕೊಂಡ ಪೋಟೋ ಹೈಲೈಟ್ ಆಗಿದ್ದು ರೀಲ್ ನಲ್ಲಿ ಕಂಡ ಈ ದೃಶ್ಯ ನಿಜ ಬದುಕಿನಲ್ಲಿ ಮಾತ್ರ ಕನಸಾಗಿಯೇ ಉಳಿದಿದ್ದು ಮಾತ್ರ ವಿಪರ್ಯಾಸ ಅಂತ ಅಭಿಮಾನಿಗಳು ದುಃಖಿಸುತ್ತಿದ್ದಾರೆ.

Comments are closed.