ಮಡಿಕೇರಿಯಲ್ಲಿ ಗಲ್ಲಿ ಕ್ರಿಕೆಟ್‌ ಆಡಿದ ನಟ ದರ್ಶನ್‌ : ವೈರಲ್‌ ಆಯ್ತು ವಿಡಿಯೋ

ಸ್ಯಾಂಡಲ್‌ವುಡ್‌ ಸಿನಿತಾರೆಯರೆಲ್ಲಾ ಒಂದೆಡೆ ಸೇರಿ ಕಳೆದೆರಡು ದಿನಗಳಿಂದ ಕೆಸಿಸಿ ಕ್ರಿಕೆಟ್‌ ಟೂರ್ನಿಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನೊಂದೆಡೆ ವಿವಿಧ ಸಿನಿರಂಗದವರು ಸಿಸಿಎಲ್‌ ಕ್ರಿಕೆಟ್‌ಗೆ ತಯಾರಿ ನಡೆಸುತ್ತಿದ್ದರೆ, ಇತ್ತಕಡೆ ನಟ ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ ಮಾತ್ರ ಗಲ್ಲಿ ಕ್ರಿಕೆಟ್‌ನಲ್ಲಿ (Darshan played Gully cricket) ತಮ್ಮನ್ನು ತೊಡಗಿಸಿಕೊಂಡು ಆಟದಲ್ಲಿ ಮಗ್ನನಾಗಿದ್ದಾರೆ. ಸದಾ ಸ್ನೇಹಿತರ ಜೊತೆ ಸಮಯ ಕಳೆಯುವ ದರ್ಶನ್‌, ಈ ಬಾರಿ ಕೂಡ ತಮ್ಮ ಒಂದಷ್ಟು ಸ್ನೇಹಿತರೊಂದಿಗೆ ಮಡಿಕೇರಿಯಲ್ಲಿ ಗಲ್ಲಿ ಕ್ರಿಕೆಟ್‌ ಆಡುತ್ತಾ ಸಮಯ ಕಳೆದಿದ್ದಾರೆ. ಸದ್ಯ ದರ್ಶನ್‌ ತಮ್ಮ ಸ್ನೇಹಿತರೊಂದಿಗೆ ಗಲ್ಲಿ ಕ್ರಿಕೆಟ್‌ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ಇತ್ತೀಚೆಗಷ್ಟೇ ಕ್ರಾಂತಿ ಸಿನಿಮಾ ತೆರೆಕಂಡಿದ್ದು, ಸಿನಿಮಾದ ಪ್ರಚಾರ, ರಿಲೀಸ್‌ ಹುಟ್ಟುಹಬ್ಬ ಅಂತೆಲ್ಲಾ ಬ್ಯುಸಿಯಾಗಿದ್ದ ನಟ ದರ್ಶನ್‌ ಸದ್ಯ ಬಿಡುವು ಮಾಡಿಕೊಂಡು ಸ್ನೇಹಿತರೊಂದಿಗೆ ಮಡಿಕೇರಿಗೆ ತೆರಳಿ ಗಲ್ಲಿ ಕ್ರಿಕೆಟ್‌ ಆಡುವ ಮೂಲಕ ಜಾಲಿ ಮೂಡ್‌ನಲ್ಲಿ ಇದ್ದಾರೆ. ಇದರ ಮೊದಲು ಕೂಡ ಇದೇ ಜಾಗದಲ್ಲಿ ಕ್ರಿಕೆಟ್‌ ಆಡಿದ್ದ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಖತ್‌ ಸದ್ದು ಮಾಡಿತು. ಇದೀಗ ವಿಡಿಯೋದಲ್ಲಿ ದರ್ಶನ್‌ ಕ್ರಿಕೆಟ್‌ ಆಟ ನೋಡಿ ಅಭಿಮಾನಿಗಳು ಸಖತ್‌ ಖುಷಿಯಾಗಿದ್ದಾರೆ.

ನಟ ದರ್ಶನ್‌ ಒಂದು ಎಸತವನ್ನು ಲಾಂಗ್‌ ಹಾಫ್‌ನತ್ತ ಬೀಸಿದ್ದಾರೆ. ಹಾಗಾಗಿ ಅಲ್ಲಿದ್ದ ಫೀಲ್ಡರ್‌ ಕೈಗೆ ಬಾಲ್‌ ತಾಗಿ ಪಕ್ಕಕ್ಕೆ ಹೋಗಿರುತ್ತದೆ. ವಿಡಿಯೋದಲ್ಲಿ ದರ್ಶನ್‌ ಓಡಿ ಹೋಗಿ ಅದು ಫೋರ್‌… ಫೋರ್‌ ಎಂದು ವಾದಿಸಿದ್ದಾರೆ. ಹಾಗೆಯೇ ಬೌಂಡರಿ ಲೈನ್‌ ಹೆರಗೆ ನಿಂತಿದ್ದೆ ನೀನು ಎಂದು ಹೇಳಿರುವುದನ್ನು ಕಾಣಬಹುದಾಗಿದೆ. ಆಮೇಲೆ ದರ್ಶನ್‌ ಸ್ನೇಹಿತರು ಕೂಡ ಅದನ್ನು ಒಪ್ಪಿಕೊಂಡಿದ್ದಾರೆ. ತುಂಬಾ ಹೊತ್ತು ಬ್ಯಾಟಿಂಗ್‌ ಮಾಡಿದ ನಟ ದರ್ಶನ್‌ ನಂತರ ಬೌಲಿಂಗ್‌ ಕೂಡ ಮಾಡಿದ್ದಾರೆ. ಒಟ್ಟಾರೆ ನಟ ದರ್ಶನ್‌ ಹಾಗೂ ಅವರ ಸ್ನೇಹಿತರು ಮಡಿಕೇರಿಯಲ್ಲಿ ಗಲ್ಲಿ ಕ್ರಿಕೆಟ್‌ ಆಡುವ ಮೂಲಕ ಬಿಡುವಿನ ವೇಳೆಯನ್ನು ಮಜಾ ಮಾಡಿದ್ದಾರೆ.

ಇದನ್ನೂ ಓದಿ : ಹಾಲಿವುಡ್‌ ಬಾಲನಟಿ ವೈಲೆಟ್ ಮೆಕ್ಗ್ರಾನೊಂದಿಗೆ ಸೆಲ್ಪಿಗೆ ಪೋಸ್‌ ನೀಡಿದ ಎಸ್‌ಎಸ್‌ ರಾಜಮೌಳಿ : ವೈರಲ್‌ ಆಯ್ತು ಪೋಸ್ಟ್‌

ಇದನ್ನೂ ಓದಿ : ಮೊದಲ ದಿನದ ಪ್ರದರ್ಶನದಲ್ಲೇ ಭರ್ಜರಿ ರೆಸ್ಪಾನ್ಸ್‌ ಪಡೆದ ಗೌಳಿ ಸಿನಿಮಾ

ಇದನ್ನೂ ಓದಿ : ಹೆಚ್‌ಸಿಎ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಗೆದ್ದ ಆರ್‌ಆರ್‌ಆರ್

ನಟ ದರ್ಶನ್ ‘ಕ್ರಾಂತಿ’ ನಂತರ ಮೂರು ನಾಲ್ಕು ಸಿನಿಮಾಗಳಿಗೆ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. ಸದ್ಯ ನಟ ದರ್ಶನ್‌ ಮುಂದಿನ ದಿನಗಳಲ್ಲಿ ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾದಲ್ಲಿ ನಟಸುತ್ತಿದ್ದಾರೆ. ಈ ಸಿನಿಮಾದಲ್ಲಿ 70ರ ದಶಕದ ನೈಜ ಘಟನೆಯನ್ನು ಹೇಳಲಾಗುತ್ತಿದೆ. ದರ್ಶನ್ ಲುಂಗಿ ಉಟ್ಟು ಕತ್ತಿ ಹಿಡಿದು ‘ಕಾಟೇರ’ ಆಗಿ ದರ್ಶನ ಕೊಟ್ಟಿದ್ದಾರೆ. ರಾಧನಾ ರಾಮ್ ನಾಯಕಿಯಾಗಿ ಸಿನಿಮಾದಲ್ಲಿ ನಟಿಸ್ತಿದ್ದು, ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಬೆಂಗಳೂರು, ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ಸಿನಿತಂಡ ಮಾಹಿತಿ ನೀಡಿದ್ದಾರೆ.

Darshan played Gully cricket : Actor Darshan who played gully cricket in Madikeri: The video went viral

Comments are closed.