diganth : ಕಣ್ಣಿಗೆ ಏಟು… ಕತ್ತಿಗೆ ಪೆಟ್ಟು..ದಿಗಂತ್​​ ಲೈಫಲ್ಲಿ ಸಾಲು ಸಾಲು ಸಂಕಷ್ಟ..!

diganth : ಸ್ಯಾಂಡಲ್​ವುಡ್​ ನಟ ದಿಗಂತ್​​ ದೂದ್​ಪೇಡ ಅಂತಲೇ ಹೆಸರುವಾಸಿಯಾಗಿರುವ ನಟ. ಮಲೆನಾಡಿನ ಸಾಗರದವರಾದ ದಿಗಂತ್​​ ಚಿತ್ರರಂಗದಲ್ಲಿ ಸಾಲು ಸಾಲು ಹಿಟ್​ ಸಿನಿಮಾಗಳ ಮೂಲಕ ಖ್ಯಾತಿಯನ್ನು ಗಳಿಸಿರುವ ನಟ. ಗೋವಾದಲ್ಲಿ ಕುಟುಂಬಸ್ಥರ ಜೊತೆಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಈ ನಟ ಸಮ್ಮರ್​ ಶಾಟ್​ ಮಾಡುವ ಸಂದರ್ಭದಲ್ಲಿ ಕುತ್ತಿಗೆಗೆ ಬಲವಾದ ಪೆಟ್ಟನ್ನು ಮಾಡಿಕೊಂಡಿದ್ದಾರೆ.


ದಿಗಂತ್​ ಈ ರೀತಿ ಏಟು ಮಾಡಿಕೊಂಡು ಸುದ್ದಿಯಾಗುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಸಿನಿಮಾ ಶೂಟಿಂಗ್​ನಲ್ಲಿ ನನ್ನ ಕಣ್ಣಿಗೆ ಏಟಾಗಿತ್ತು ಎಂದು ಸ್ವತಃ ನಟ ದಿಗಂತ್​ ಹೇಳಿಕೊಂಡಿದ್ದರು. ತುಳು ಭಾಷೆಯ ಕಡಲ ಮಗೆ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ದಿಗಂತ್​ ಬಳಿಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಮಿಸ್​ ಕ್ಯಾಲಿಫೋರ್ನಿಯಾ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟಿದ್ದಾರೆ. ಇದಾದ ಬಳಿಕ ಮುಂಗಾರು ಮಳೆ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಹಿಟ್​ ಸಿನಿಮಾಗಳನ್ನು ನಟ ದಿಗಂತ್​ ನೀಡಿದ್ದಾರೆ. ಮೀರಾ ಮಾಧವ ರಾಘವ, ಗಾಳಿಪಟ, ಮಸ್ತ್​ ಮಜಾ ಮಾಡಿ, ಹೌಸ್​ಫುಲ್​, ಮನಸಾರೆ, ಬಿಸಿಲೆ, ಸ್ವಯಂವರ, ಪಂಚರಂಗಿ, ಜಾಲಿ ಬಾಯ್ಸ್​, ಮಿ.ಡುಪ್ಲಿಕೇಟ್​, ಲೈಫು ಇಷ್ಟೇನೆ, ಕಾಂಚಾಣ, ಪುತ್ರ, ಫಾರ್ಚುನರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಹೀಗೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟ ದಿಗಂತ್​ ನಟಿಸಿದ್ದಾರೆ. ಸಧ್ಯ ನಟ ದಿಗಂತ್​ ಮುಂಗಾರು ಮಳೆ 2 ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು.


ನಟ ದಿಗಂತ್​ ಸ್ಯಾಂಡಲ್​ವುಡ್​ನಲ್ಲಿ ಎಷ್ಟರ ಮಟ್ಟಿಗೆ ಹೆಸರು ಮಾಡಿದ್ದರು ಎಂದರೆ ಬಾಲಿವುಡ್​ ಚಿತ್ರರಂಗ ಕೂಡ ಇವರನ್ನು ಕೈ ಬೀಸಿ ಕರೆದಿತ್ತು. ಇನ್ನು ಬಾಲಿವುಡ್​ನಲ್ಲಿ ದಿಗಂತ್​ ಹೊಸ ಅಧ್ಯಾಯ ಬರೆಯುತ್ತಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುವಷ್ಟರಲ್ಲಿ ನಟ ದಿಗಂತ್​ ಸಿನಿಮಾ ಶೂಟಿಂಗ್​ಗೆಂದು ವಿದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ಕಣ್ಣಿಗೆ ಏಟು ಮಾಡಿಕೊಂಡು ಸುದ್ದಿಯಾಗಿದ್ದರು.

ವೆಡ್ಡಿಂಗ್​ ಪುಲಾವ್​ ಎಂಬ ಹಿಂದಿ ಸಿನಿಮಾದ ಶೂಟಿಂಗ್​ ಪೂರೈಸಿ ದಿಗಂತ್​ ಟಿಕೆಟ್​ ಟು ಬಾಲಿವುಡ್​ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಈ ಸಿನಿಮಾ ಶೂಟಿಂಗ್​ ಸಂದರ್ಭದಲ್ಲಿಯೇ ಈ ಅವಘಡ ಸಂಭವಿಸಿತ್ತು. ನಾಯಕ ನಟಿ ದಿಗಂತ್​ಗೆ ಚೂರಿ ಎಸೆದ ಪರಿಣಾಮ ದಿಗಂತ್​ ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆದರೆ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದ ನಟ ದಿಗಂತ್​​ ನಾಯಕ ನಟಿ ನನಗೆ ಚೂರಿ ಎಸೆದಿರಲಿಲ್ಲ. ಅವರ ಹೀಲ್ಸ್​ ಚಪ್ಪಲಿ ಎಸೆದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ. ನಾನು ಶೀಘ್ರ ಗುಣಮುಖನಾಗುತ್ತೇನೆ ಎಂದು ದಿಗಂತ್​ ಸ್ಪಷ್ಟನೆ ನೀಡಿದ್ದರು. ಅದರಂತೆ ನಟ ದಿಗಂತ್​​ ಗುಣಮುಖರಾಗಿದ್ದರು.


ಇದೀಗ ಕತ್ತಿಗೆ ಬಲವಾದ ಏಟು ಮಾಡಿಕೊಂಡಿರುವ ನಟ ದಿಗಂತ್​ ಮಣಿಪಾಲ್​ ಆಸ್ಪತ್ರೆಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ದಾಖಲಾಗಲಿದ್ದಾರೆ. ನಟ ದಿಗಂತ್​ ಈ ಸಂಕಷ್ಟವನ್ನೂ ಅತ್ಯಂತ ಸುಲಭವಾಗಿ ಎದುರಿಸಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ .

ಇದನ್ನು ಓದಿ : Exclusive : KSCA ಆಯ್ಕೆ ಸಮಿತಿಯೊಂದಿಗೆ ಮನಸ್ತಾಪ ; ಕರ್ನಾಟಕ ತೊರೆಯಲು ಕೆ.ಗೌತಮ್ ನಿರ್ಧಾರ ?

ಇದನ್ನೂ ಓದಿ : ನಟ ದಿಗಂತ್​ ಕತ್ತಿಗೆ ಏಟು ಬೀಳಲು ಕಾರಣವಾಯ್ತು ಸಮ್ಮರ್​ ಶಾಟ್​ : ಇಲ್ಲಿದೆ ಘಟನೆ ಬಗೆಗಿನ ಪಿನ್​ ಟು ಪಿನ್​ ಡಿಟೇಲ್ಸ್​​

diganth eye damaged in while bollywood movie shooting

Comments are closed.