Divinestar Rishabh Shetty‌ : ತುಳುವಿನಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಮಹತ್ವದ ಸಂದೇಶ ಕೊಟ್ಟ ರಿಷಬ್ ಶೆಟ್ಟಿ

ಡಿವೈನ್‌ಸ್ಟಾರ್‌ ರಿಷಬ್ ಶೆಟ್ಟಿ (Divinestar Rishabh Shetty‌) ಅಭಿನಯದ ಕಾಂತಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಮಹತ್ವದ ಮೈಲುಗಲನ್ನು ಸೃಷ್ಟಿಸಿದೆ. ಕನ್ನಡ, ಮಲಯಾಳಂ, ತೆಲುಗು, ಹಿಂದಿ ಸೇರಿದಂತೆ ಹೆಚ್ಚಿನ ಭಾಷೆಯಲ್ಲಿ ಬಿಡುಗಡೆಯಾಗಿ ಅಪಾರ ಸಂಖ್ಯೆಯ ಸಿನಿಪ್ರೇಕ್ಷಕರ ಮನ ಗೆದ್ದಿದೆ. ಹಾಗೆ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಅದ್ಭುತ ದಾಖಲೆಯನ್ನು ಕೂಡ ಬರೆದಿದೆ. ಇದೀಗ ಕನ್ನಡ ಕಾಂತಾರ ಸಿನಿಮಾ ತುಳು ಭಾಷೆಯಲ್ಲೂ ಕಮಾಲ್‌ ಮಾಡೋಕೆ ತಯಾರಾಗಿದೆ. ನಟ ನಿರ್ದೇಶಕ ರಿಷಬ್ ಶೆಟ್ಟಿ ಮೊಟ್ಟ ಮೊದಲ ಬಾರಿಗೆ ಈ ಮೂಲಕ ತುಳು ಭಾಷೆಯಲ್ಲೂ ಸಿನಿಮಾ ಮಾಡಿದಂತೆ ಆಗಿದೆ. ತುಳು ಭಾಷೆಯಲ್ಲಿ ಬಿಡುಗಡೆಯಾಗುವ ಖುಷಿಯನ್ನು ರಿಷಬ್ ಶೆಟ್ಟಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಕಾಂತಾರ ಸಿನಿಮಾ ದೇಶ ವಿದೇಶಗಳಲ್ಲಿ ಸಂಚನವನ್ನು ಮೂಡಿಸಿದೆ. ಪರ ಭಾಷೆಯಲ್ಲಿ ತನ್ನದೇ ಮೋಡಿ ಮಾಡಿದೆ. ಈ ಸಿನಿಮಾ ತುಳು ನಾಡಿನ ದೈವಾರಾಧನೆಯನ್ನು ಒಳಗೊಂಡಿದೆ. ಈ ಸಿನಿಮಾ ಇಂದು ಶುಕ್ರವಾರ ತುಳು ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವುದು ಕರಾವಳಿ ಜನರಿಗೆ ಸಂತಸದ ಸುದ್ದಿ ಆಗಿದೆ. ಕಾಂತಾರ ತುಳುವಿನಲ್ಲಿ ಬಿಡುಗಡೆ ಮಾಡುವ ಬಗ್ಗೆ ಮಹತ್ವದ ಸಂದೇಶವನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.

“ನನ್ನ ಮೊದಲ ಸಿನಿಮಾ ಕಾಂತಾರ ತುಳುವಿನಲ್ಲಿ ಡಿಸೆಂಬರ್‌ 2 ಶುಕ್ರವಾರ ಕರ್ನಾಟಕ ಸೇರಿದಂತೆ ದೇಶ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಖುಷಿಯಾಗಿರುವ ವಿಚಾರವೆಂದರೆ ನೀವು ಎಲ್ಲರೂ ಕಾಂತಾರ ಸಿನಿಮಾದ ಅದ್ಭುತ ಸಕ್ಸಸ್‌ಗೆ ಕಾರಣರಾಗಿದ್ದೀರಿ ಹಾಗಾಗಿ ನಾವು ಋಣಿಯಾಗಿರುತ್ತೇವೆ. ಎಲ್ಲರೂ ಬಂದು ಸಿನಿಮಂದಿರಗಳಲ್ಲಿ ತುಳುವಿನಲ್ಲಿ ನೋಡಿ. ಕಾಂತಾರ ಬಿಡುಗಡೆ ಆದಾಗ ತುಳುನಾಡಿ ಹಾಗೂ ದಕ್ಷಿಣಕನ್ನಡದಲ್ಲಿ ತುಳುನಾಡಿನ ಸಂಸ್ಕೃತಿ ದೈವರಾಧನೆ ಆಧಾರಿತ ಸಿನಿಮವಾದ ಕಾಂತಾರ ತುಳುವಿನಲ್ಲಿ ಬಿಡುಗಡೆಯಾಗಬೇಕೆಂದು ಸಾಕಷ್ಟು ಜನ ಕೇಳಿಕೊಂಡಿದ್ದಾರೆ. ಅದರಂತೆ ಇಂದು ಶುಕ್ರವಾರ ತುಳುವಿನಲ್ಲಿ ಬಿಡುಗಡೆಯಾಗುತ್ತಿದೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ” ಎಂದಿದ್ದಾರೆ.

https://www.youtube.com/watch?v=atnfjLuy3tA

ಇದನ್ನೂ ಓದಿ : Aira Production house: ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾಗೆ ಮಗಳೇ ನಿರ್ಮಾಪಕಿ.. ಐರಾ ಹೆಸರಿನಲ್ಲಿ ಪ್ರೊಡಕ್ಷನ್ ಹೌಸ್..?

ಇದನ್ನೂ ಓದಿ : Anand Pandit Motion Pictures : ಬಾಲಿವುಡ್‌ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಪಾಲಾದ ” ಕಬ್ಜ” ಸಿನಿಮಾ ವಿತರಣಾ ಹಕ್ಕು

ಇದನ್ನೂ ಓದಿ : Aishwarya Upendra : ಉಪ್ಪಿ ಪುತ್ರಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ : ದೊಡ್ಮನೆ ಯುವರಾಜ್‌ಗೆ ಐಶ್ವರ್ಯಾ ನಾಯಕಿ

ರಿಷಬ್ ಶೆಟ್ಟಿ ಶೆಟ್ಟಿ ನಟಿಸಿ ನಿರ್ದೇಶಿಸಿದ ಸಿನಿಮಾ ಕಾಂತಾರ. ಸಪ್ತಮಿ ಗೌಡ, ಕಿಶೋರ್‌, ಪ್ರಮೋದ್‌ ಶೆಟ್ಟಿ, ಅಚ್ಯುತ ಕುಮಾರ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಮೂಡಿ ಬಂದಿದೆ. ಕಾಂತಾರ ಸಿನಿಮಾದಲ್ಲಿ ಕ್ಲೈಮ್ಯಾಕ್ಸ್‌ನಲ್ಲಿ ಬರುವ “ವರಾಹ ರೂಪಂ” ಹಾಡಿನ ವಿವಾದದ ನಡುವೆ ಕೂಡ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿ ಒಟ್ಟು 400 ಕೋಟಿಗೂ ಮೀರಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ್ನು ದಾಖಲಿಸಿದೆ. ಇನ್ನೂ ಈ ಸಿನಿಮಾ ಕನ್ನಡದಲ್ಲೇ 170ಕ್ಕೂ ಮೀರಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನ್ನು ಕಂಡಿದೆ. ಮಲಯಾಳಂ, ತೆಲುಗು, ಹಿಂದಿ ಸೇರಿದಂತೆ ಇತರ ಭಾಷೆಗಳಲ್ಲಿ ಅದ್ಭುತ ಕಲೆಕ್ಷನ್‌ನ್ನು ಮಾಡುವ ದಾಖಲೆಯನು ಸೃಷ್ಟಿಸಿದ ಕಾಂತಾರ ಸಿನಿಮಾ ಇತ್ತೀಚೆಗಷ್ಟೇ ಓಟಿಟಿಗೂ ಲಗ್ಗೆ ಇಟ್ಟಿದೆ. ಅದರ ಬೆನ್ನಲ್ಲೇ ಇಂದು ತುಳು ಭಾಷೆಯಲ್ಲಿ ಬಿಡುಗಡೆಯಾಗಿ ಹೊಸದೊಂದು ದಾಖಲೆಯನ್ನು ಸೃಷ್ಟಿಸಲು ಸಜ್ಜಾಗಿದೆ.

Divinestar Rishabh Shetty gave an important message about the movie Kantara released in Tulu.

Comments are closed.