ಚಿರಂಜೀವಿ ಸರ್ಜಾ ಬಗ್ಗೆ ಮೇಘನಾ ಕನಸು ಏನಿತ್ತು ಗೊತ್ತಾ…?! ಮೇಘನಾ ರಾಜ್ ಬಿಚ್ಚಿಟ್ರು ಇಂಟ್ರಸ್ಟಿಂಗ್ ಸಂಗತಿ…!!

ಚಿರು ಹಾಗೂ ಮೇಘನಾ ಸ್ಯಾಂಡಲವುಡ್ ನ ಲವ್ಲಿ ಫೇರ್. ಆದರೇ ಪ್ರೀತಿಸಿ ಮದುವೆಯಾದ ಈ ಜೋಡಿ ಬಹುಕಾಲ ಒಟ್ಟಿಗೆ ಹೆಜ್ಜೆ ಹಾಕಲು ಆ ವಿಧಿ ಬಿಡಲಿಲ್ಲ. ಆದರೇ ನೆನಪುಗಳು ಸದಾ ಹಸಿರಾಗಿವೆ. ಚಿರು ಬಗ್ಗೆ ನೊರೆಂಟು ಕನಸು ಕಂಡಿದ್ದ ಮೇಘನಾ ತಮ್ಮ ಇಂಟರವ್ಯೂನಲ್ಲಿ ಈ ವಿಚಾರ ಹಂಚಿಕೊಂಡಿದ್ರು.

ಚಿರಂಜೀವಿ ಸರ್ಜಾ ಕನ್ನಡದ ಪ್ರತಿಭಾನ್ವಿತ ಹೀರೋ ಒಂದಕ್ಕಿಂತ ಒಂದು ವಿಭಿನ್ನ ಕಥಾಹಂದರದ ಸಿನಿಮಾಗಳ ಜೊತೆ ತೆರೆಗೆ ಬಂದ ಚಿರು, ಪಕ್ಕದ ಮನೆಯ ಹುಡುಗನಂತ ಸರಳತೆಯಿಂದ ಗಮನ ಸೆಳೆಯುತ್ತಿದ್ದರು.

ಸಿನಿಮಾರಂಗದ ಜೊತೆಗೆ ನಂಟು ಹೊಂದಿರುವ ಕುಟುಂಬದೊಂದಿಗೆ ಬಂದಿದ್ದ ಚಿರು ಸರ್ಜಾ ಹಾಗೂ ನಟನೆಯನ್ನೇ ನೋಡುತ್ತಾ ಬೆಳೆದ, ಮೇಘನಾ ರಾಜ್ ಪರಸ್ಪರ ಮೆಚ್ಚಿ ಮದುವೆಯಾಗಿದ್ದರು. ಮದುವೆಗೂ ಮುನ್ನ ಚಿರು ಹಾಗೂ ಮೇಘನಾ ಒಳ್ಳೆಯ ಸ್ನೇಹಿತರು ಮಾತ್ರವಲ್ಲ ಒಬ್ಬರ ಸಿನಿಮಾಗೆ ಮತ್ತೊಬ್ಬರು ಒಳ್ಳೆಯ ವಿಮರ್ಶಕರು. ಈ ವಿಚಾರವನ್ನು ಹಲವು ಇಂಟರವ್ಯೂನಲ್ಲಿ ಚಿರು ಹೇಳಿಕೊಂಡಿದ್ದರು.

ಚಿರು ನಿಧನಕ್ಕೂ ಮುನ್ನ ಅವರ ಬಹುನೀರಿಕ್ಷಿತ ಚಿತ್ರ ಶಿವಾರ್ಜುನ ರಿಲೀಸ್ ಆಗಿತ್ತು. ಆದರೇ ಯಶಸ್ವಿ ಪ್ರದರ್ಶನಕ್ಕೆ ಲಾಕ್ ಡೌನ್ ಅಡ್ಡಿ ಯಾಗಿತ್ತು. ಈ ನೋವು ಕೂಡ ಅವರ ಹೃದಯಾಘಾತಕ್ಕೆ ಕಾರಣವಾಯ್ತು ಅನ್ನೋ ಮಾತು ಕೇಳಿಬಂದಿದೆ. ಆದರೆ ಇವೆಲ್ಲದಕ್ಕಿಂತ ಮುಖ್ಯವಾಗಿ ಮೇಘನಾ ಚಿರು ಬಗ್ಗೆ ಕಂಡಿದ್ದ ನೂರಾರು ಕನಸುಗಳು ಕನಸಾಗಿಯೇ ಉಳಿದಿದ್ದು ಮಾತ್ರದುರಂತ.

ಬಹುನೀರಿಕ್ಷಿತ ಶಿವಾರ್ಜುನ ಟೀಸರ್ 2019 ರ ಚಿರು ಬರ್ತಡೇ ದಿನ ರಿಲೀಸ್ ಆಗಿತ್ತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ್ದ ಮೇಘನಾ ರಾಜ್, ತಾವು ಚಿರುವನ್ನು ಯಾವಾಗಲೂ ಆಕ್ಷ್ಯನ್ ಪಾತ್ರದಲ್ಲಿ ನೋಡಲು ಬಳಸುವುದಾಗಿ ಹೇಳಿಕೊಂಡಿದ್ದರು.

ಚಿತ್ರ ಯಾವುದೇ ಇರಲಿ ಚಿರು ಆಕ್ಷ್ಯನ್ ಸೀನ್ ನಲ್ಲಿ ನೋಡೋದಿಕ್ಕೆ ನನಗೆ ತುಂಬಾ ಖುಷಿಯಾಗುತ್ತೆ. ಅದರಲ್ಲೂ ಶಿವಾರ್ಜುನ ಚಿತ್ರದಲ್ಲಿ ನನ್ನ ಈ ಖುಷಿ ಡಬ್ಬಲ್ ಆಗಿದೆ ಎಂದೆಲ್ಲ ಖುಷಿ ಖುಷಿಯಾಗಿ ಹೇಳಿಕೊಂಡಿದ್ದರು.

ಅಷ್ಟೇ ಅಲ್ಲ ಶಿವಾರ್ಜುನ ಚಿತ್ರಕ್ಕೆ ಚಿರಂಜೀವಿ ಸರ್ಜಾ ಡಬ್ಬಲ್ ಇಂಟ್ರೆಸ್ಟ್ ಹಾಕಿ ದುಡಿದಿದ್ದು ಈ ಚಿತ್ರ ಸಖತ್ ಹಿಟ್ ಆಗುತ್ತೆ ಅನ್ನೋ ವಿಶ್ವಾಸ ವನ್ನು ಮೇಘನಾ ರಾಜ್ ಸರ್ಜಾ ಹಂಚಿಕೊಂಡಿದ್ದರು.

ಆದರೆ ಚಿತ್ರದ ರಿಲೀಸ್ ಬೆನ್ನಲ್ಲೇ ಜಾರಿಯಾದ ಲಾಕ್ ಡೌನ್ ಚಿತ್ರದ ಪ್ರದರ್ಶನ ನಿಲ್ಲಿಸಿತು. ಇನ್ನು ಶಿವಾರ್ಜುನ್ ಬಳಿಕ ಇನ್ನಷ್ಟು ಆಕ್ಷ್ಯನ್ ಚಿತ್ರಗಳಲ್ಲಿ ಚಿರುರನ್ನು ನಾಯಕನನ್ನಾಗಿ ನೋಡುವ ಮೇಘನಾ ಕನಸು ಕನಸಾಗಿಯೇ ಉಳಿದಿದ್ದು ದುರಂತ.

Comments are closed.