ವಿಷ್ಣು ಸ್ಮಾರಕ ಉದ್ಘಾಟನೆ : ಕಟ್ಟಾ ಅಭಿಮಾನಿ ಕಿಚ್ಚ ಸುದೀಪ್‌ನಿಂದ ವಿಶೇಷ ಟ್ವೀಟ್‌

ಸ್ಯಾಂಡಲ್‌ವುಡ್‌ನ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಸಂಖ್ಯಾತ ಅಭಿಮಾನಿಗಳ ಆಸೆ ಈಡೇರುವ ಸಮಯ ಬಂದೇ ಬಿಟ್ಟಿದೆ. ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ನಿರ್ಮಾಣವಾಗಿರುವ ಡಾ. ವಿಷ್ಣುವರ್ಧನ್ ಭವ್ಯ ಸ್ಮಾರಕ (Inauguration of Vishnuvardhan Memorial) ಇಂದು ( ಜನವರಿ 29 ) ಲೋಕಾರ್ಪಣೆಯಾಗುತ್ತಿದೆ. ಬರೋಬ್ಬರಿ 11 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ನಿರ್ಮಾಣಗೊಂಡಿದೆ.

ಈ ಶುಭದಿನವನ್ನು ಅಭಿಮಾನಿಗಳು ಹಬ್ಬದ ರೀತಿ ಆಚರಿಸಲು ನಿರ್ಧರಿಸಿದ್ದು, ಬೆಂಗಳೂರಿನಿಂದ ಮೈಸೂರಿಗೆ ಹೋಗುವ ರಸ್ತೆ ಸಮೀಪ ನೆಚ್ಚಿನ ನಟ ವಿಷ್ಣುವರ್ಧನ್ ಅವರ ಸಾಲು ಸಾಲು ಕಟ್ ಔಟ್ ಗಳನ್ನು ನಿಲ್ಲಿಸಿ, ಬ್ಯಾನರ್ ಕಟ್ಟಿ, ಹಾರ ಹಾಕಿದ್ದಾರೆ‌. ಇನ್ನು ಈ ಕಾರ್ಯಕ್ರಮಕ್ಕೆ ಚಂದನವನದ ಹಲವಾರು ನಟ – ನಟಿಯರು ಹಾಗೂ ಕಲಾವಿದರು ಆಗಮಿಸುವ ಸಾಧ್ಯತೆ ಇದ್ದು, ಸಹಸ್ರಾರು ಅಭಿಮಾನಿಗಳು ಜಮಾಯಿಸಲಿದ್ದಾರೆ.ಹಲವು ವರ್ಷಗಳ ಕನಸು ನನಸಾದ ದಿನವನ್ನು ಕೇವಲ ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಸಹ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ : Mandeep Roy death: ಕನ್ನಡ ಚಿತ್ರರಂಗದ ಹಿರಿಯ ನಟ ಮನ್‌ ದೀಪ್‌ ರಾಯ್‌ ನಿಧನ

ಇದನ್ನೂ ಓದಿ : ಸ್ಯಾಂಡಲ್‌ವುಡ್‌ನ ಊರ್ಫಿಯಾದ ನಿವೇದಿತಾ : ಬಾರ್ಬಿ ಸುಂದರಿಯ ವೀಡಿಯೋ ವೈರಲ್

ಇದನ್ನೂ ಓದಿ : “ಕ್ರಾಂತಿ” ಬೆನ್ನಲ್ಲೇ ಸೆಟ್ಟೇರುತ್ತಾ ನಟ ದರ್ಶನ್‌ “ವೀರ ಮದಕರಿ ನಾಯಕ” ಸಿನಿಮಾ ?

ಇದನ್ನೂ ಓದಿ : Saptami Gowda : ವಾರಿಯರ್ ಲುಕ್ ನಲ್ಲಿ ಮಿಂಚಿದ ಲೀಲಾ : ಸಪ್ತಮಿ ಗೌಡ ಹೊಸ ಪೋಟೋಸ್ ವೈರಲ್

Inauguration of Vishnuvardhan Memorial : ಕಿಚ್ಚ ಸುದೀಪ್‌ನಿಂದ ವಿಶೇಷ ಟ್ವೀಟ್‌

ವಿಷ್ಣುವರ್ಧನ್ ಅವರ ಕಟ್ಟಾ ಅಭಿಮಾನಿಯಾದ ನಟ ಕಿಚ್ಚ ಸುದೀಪ್ ಸಹ ಈ ಸಾಲಿನಲ್ಲಿದ್ದಾರೆ. ವಿಷ್ಣುವರ್ಧನ್ ಅವರನ್ನು ಹಿಂದಿನಿಂದಲೂ ಮನಸಾರೆ ಆರಾಧಿಸುತ್ತಾ ಬಂದಿರುವ ಕಿಚ್ಚ ಸುದೀಪ್ ಸ್ಮಾರಕ ಉದ್ಘಾಟನೆಯಾಗುತ್ತಿರುವ ಕುರಿತು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಅವರ ಫೊಟೊವೊಂದನ್ನು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ “ಕಾಯುತ್ತಿದ್ದರು ಕರುನಾಡ ಜನತೆ ಇಂತಹದ್ದೊಂದು ಅದ್ಭುತ ಕ್ಷಣಕ್ಕೆ. ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ, ಒಳ್ಳೆಯದೇ ಆಗುತ್ತಿದೆ. ಯಜಮಾನರ ಸ್ಮಾರಕ ಲೋಕಾರ್ಪಣೆ ಸಮಾರಂಭಕ್ಕೆ ಶುಭಕೋರುತ್ತೇನೆ ಕಿಚ್ಚ ಸುದೀಪ್” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ನ ಬಾಕ್ಸ್‌ ಆಫೀಸ್‌ನಲ್ಲಿ ಸುಂಟರಗಾಳಿ ಎಬ್ಬಿಸಿದ “ಕ್ರಾಂತಿ” ಸಿನಿಮಾ

ಇದನ್ನೂ ಓದಿ : ವಿಷ್ಣು ಸ್ಮಾರಕ ವಿಚಾರಕ್ಕೆ ಆಕ್ರೋಶ : ಫಿಲ್ಮ್ ಚೇಂಬರ್ ವಿರುದ್ಧ ಸಿಡಿದೆದ್ದ ವೀರಕಪುತ್ರ ಶ್ರೀನಿವಾಸ್

Inauguration of Vishnuvardhan Memorial : Special tweet from avid fan Kichcha Sudeep

Comments are closed.