ಜೊತೆ ಜೊತೆಯಲಿ ಬಿಟ್ಟು ಅನಿರುದ್ಧ ಹೊರಟಿದ್ದೆಲ್ಲಿಗೆ…? ವಿಡಿಯೋ ದಲ್ಲಿದೆ ಉತ್ತರ…!!

ಕನ್ನಡ ಕಿರುತೆರೆ ಲೋಕದಲ್ಲಿ ಜೊತೆ ಜೊತೆಯಲಿ ಧಾರಾವಾಹಿ ಹೊಸ ಬಗೆಯ ವೀಕ್ಷಕ ವರ್ಗವನ್ನೇ ಹುಟ್ಟುಹಾಕಿದೆ. ಪುರುಷರು ಇಷ್ಟ ಪಟ್ಟು ನೋಡ್ತಿರೋ ಈ ಸೀರಿಯಲ್ ನ ಪ್ರಮುಖ ಆಕರ್ಷಣೆ ಅನಿರುದ್ಧ.

ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಈ ಜೊತೆ ಜೊತೆಯಲಿ ಸೀರಿಯಲ್ ನಿಂದ ಪ್ರಮುಖ ಪಾತ್ರಧಾರಿ ಅನಿರುದ್ಧ ಹೊರ ನಡೆಯಲಿದ್ದಾರೆ ಅನ್ನೋ ಮಾತು ಜೋರಾಗಿಯೇ ಕೇಳ್ತಿ ಬರ್ತಿದೆ.

ಇನ್ನೇನು ಆರ್ಯವರ್ಧನ್ ಅನು ಮನೆಲಿ ಮದುವೆ ಪ್ರಸ್ತಾಪ ಮಾಡಬೇಕು. ಅಂತ ಪ್ರಮುಖ ಘಟ್ಟದಲ್ಲೇ ಅನಿರುದ್ಧ ಧಾರಾವಾಹಿ ತೊರೆದರೇ ಕಥೆ ಹೇಗೆ ಮುಂದುವರೆಯುತ್ತೇ? ಅರ್ಯವರ್ಧನ್ ಪಾತ್ರಕ್ಕೆ ಬರೋದ್ಯಾರು ಅಂತೆಲ್ಲ ಜೊತೆ ಜೊತೆಯಲಿ ಸೀರಿಯಲ್ ಅಭಿಮಾನಿ ಪ್ರೇಕ್ಷಕರು ತಲೆ ಕೆಡಿಸಿಕೊಂಡಿದ್ದಾರೆ.

ಅನಿರುದ್ಧ ಪ್ರಸಿದ್ಧಿಯ ಉತ್ತುಂಗದಲ್ಲಿರೋ ಈ ಸೀರಿಯಲ್ ಬಿಟ್ಟು ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಮನೆ ಸೇರ್ತಾರೆ ಎನ್ನುವ ಸುದ್ದಿ ಕೆಲದಿನಗಳಿಂದ ಜೋರಾಗಿದೆ.

ಆದರೇ ಈ ಎಲ್ಲ ಗಾಸಿಪ್, ಊಹಾಪೋಹಗಳಿಗೆ ಜೊತೆ ಜೊತೆಯಲಿ ಆರ್ಯವರ್ಧನ್ ಖ್ಯಾತಿಯ ನಟ ಅನಿರುದ್ಧ ಇತಿಶ್ರೀ ಹಾಡಿದ್ದು ವಿಡಿಯೋ ಮೂಲಕ ಸತ್ಯ ಏನೆಂಬುದನ್ನು ಹೇಳಿಕೊಂಡಿದ್ದಾರೆ.

ನಾನು ಜೊತೆ ಜೊತೆಯಲಿ ಸೀರಿಯಲ್ ಬಿಟ್ಟು ಬೇರೆ ಕಿರುತೆರೆ ಶೋಗೆ ತೆರಳುತ್ತಿದ್ದೇನೆ ಎಂಬ ವದಂತಿ ಎಲ್ಲೆಡೆ ಹರಡುತ್ತಿದೆ. ಆದರೆ ಇದು ಸಂಪೂರ್ಣ ಸುಳ್ಳು. ನಾನು ಜೊತೆ ಜೊತೆಯಲಿ ಬಿಟ್ಟು ಎಲ್ಲೂ ಹೋಗೋದಿಲ್ಲ. ಇಂಥ ಮಾತುಗಳಿಗೆ ಕಿವಿಗೂಡಬೇಡಿ. ಧಾರಾವಾಹಿ ನೋಡ್ತಾ ಇರಿ. ನಮ್ಮ ಮೇಲಿನ ನಿಮ್ಮ ಪ್ರೀತಿ ವಿಶ್ವಾಸ ಎಂದೂ ಹೀಗೆ ಇರಲಿ ಎಂದು ಅನಿರುದ್ಧ ಮನವಿಮಾಡಿದ್ದಾರೆ.

Comments are closed.