kannadathi : ಈ ದಿನದಂದು ಕೊನೆಗಾಣಲಿದೆ ಕನ್ನಡತಿ ಧಾರವಾಹಿ : ಅಭಿಮಾನಿಗಳಿಗೆ ಭಾರೀ ನಿರಾಶೆ

kannadathi : ಕಲರ್ಸ್​ ಕನ್ನಡದ ಟಾಪ್​ ಧಾರವಾಹಿಗಳು ಅಂದರೆ ಅಲ್ಲಿ ಕೇಳಿ ಬರುವ ಹೆಸರುಗಳಲ್ಲಿ ಕನ್ನಡತಿ ಕೂಡ ಒಂದು. ಕನ್ನಡತಿ ಧಾರವಾಹಿಯು ವಿಶೇಷ ಕಾರಣಕ್ಕಾಗಿ ಅಭಿಮಾನಿಗಳನ್ನು ತನ್ನತ್ತ ಸಂಪಾದಿಸಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ರಂಜನಿ ರಾಘವನ್​​ ಸ್ಫುಟವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದ್ದರೆ. ಈ ಧಾರವಾಹಿಯಲ್ಲಿ ಕೊನೆಯಲ್ಲಿ ಬರುವ ಸರಿಗನ್ನಡಂ ಗೆಲ್ಲೆಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಈ ಧಾರವಾಹಿಯಲ್ಲಿ ಮಲೆನಾಡಿನ ಹಸಿರುಪೇಟೆಯ ನಿವಾಸಿಯಾಗಿರುವ ಭುವಿ ಬೆಂಗಳೂರಿನಲ್ಲಿ ಕನ್ನಡ ಉಪನ್ಯಾಸಕಿಯಾಗಿರುತ್ತಾರೆ. ಇದೀಗ ಹರ್ಷ ಇರುವ ಕಂಪನಿಯಲ್ಲಿಯೇ ಭುವಿ ಕೆಲಸ ಮಾಡ್ತಿರ್ತಾರೆ.


ಸಧ್ಯ ಧಾರವಾಹಿಯಲ್ಲಿ ಹರ್ಷ ಹಾಗೂ ಭುವಿ ನಿಶ್ಚಿತಾರ್ಥವಾಗಿದ್ದು ಸದ್ಯದಲ್ಲೇ ಮದುವೆ ಕಾರ್ಯಕ್ರಮ ನಡೆಯಲಿದೆ. ಹರ್ಷ ಪಾತ್ರದಲ್ಲಿ ಕಿರಣ್​ ರಾಜ್​​ ಅತ್ಯಂತ ಅಮೋಘವಾಗಿ ನಟಿಸುತ್ತಿದ್ದು ಇಬ್ಬರ ಕಾಂಬಿನೇಷನ್​ ಪ್ರೇಕ್ಷಕರ ಪಾಲಿಗೆ ಫೇವರಿಟ್​ ಎನಿಸಿದೆ. ಆದರೆ ಈ ಧಾರವಾಹಿ ತಂಡವು ಅಭಿಮಾನಿಗಳಿಗೆ ಬೇಸರ ಎನಿಸುವ ಸುದ್ದಿಯನ್ನು ಹೊರ ಹಾಕಲಿದೆ. ಅದೇನೆಂದರೆ ಈ ಧಾರವಾಹಿಯು ಇನ್ನೇನು ಕೆಲವೇ ದಿನಗಳಲ್ಲಿ ಕೊನೆ ಕಾಣಲಿದೆ. ಈ ವಿಚಾರವಾಗಿ ಸೋಶಿಯಲ್​ ಮೀಡಿಯಾಗಳಲ್ಲಿ ಈಗಾಗಲೇ ಚರ್ಚೆ ಆರಂಭವಾಗಿದೆ.


ಕನ್ನಡತಿ ಧಾರವಾಹಿಯ ಒಂದು ವಿಶೇಷತೆ ಅಚ್ಛ ಕನ್ನಡವಾಗಿದ್ದರೆ ಮತ್ತೊಂದು ಈ ಧಾರವಾಹಿಯಲ್ಲಿ ಯಾವುದೇ ಕತೆಯನ್ನು ಎಳೆಯುವುದಿಲ್ಲ. ಇದೇ ಕಾರಣಕ್ಕೆ ಹರ್ಷ ಹಾಗೂ ಭುವಿಯ ಮದುವೆಯ ಮೂಲಕ ಈ ಸೀರಿಯಲ್​​ನ್ನು ಅಂತ್ಯಗೊಳಿಸಲು ಕನ್ನಡತಿ ತಂಡವು ನಿರ್ಧರಿಸಿದೆ ಎನ್ನಲಾಗಿದೆ. ಸಾನಿಯಾ ಬಣ್ಣವನ್ನು ಎಲ್ಲರಿಗೂ ಬಯಲು ಮಾಡಿ ಬಳಿಕ ಸುಂದರ ಎಪಿಸೋಡ್​ನೊಂದಿಗೆ ಸೀರಿಯಲ್​ನ್ನು ಎಂಡ್​ ಮಾಡಬೇಕೆಂದು ಧಾರವಾಹಿ ತಂಡವು ನಿರ್ಧರಿಸಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಜೂನ್​ ಅಂತ್ಯ ಅಥವಾ ಜುಲೈ ಆರಂಭದಲ್ಲಿ ಈ ಧಾರವಾಹಿಯಲ್ಲಿ ಕೊನೆಕಾಣಲಿದೆ ಎನ್ನಲಾಗಿದೆ .

ಇದನ್ನು ಓದಿ : Glucose Mixed With Red Medicine : ರಕ್ತದ ಬದಲು ರೋಗಿಯ ದೇಹಕ್ಕೆ ಗ್ಲುಕೋಸ್​ ಹಾಕಿದ ಆಸ್ಪತ್ರೆ ಸಿಬ್ಬಂದಿ

ಇದನ್ನೂ ಓದಿ : Kannadathi serial : ಕನ್ನಡತಿ ಧಾರವಾಹಿಯ ಬಿಂದು ಪಾತ್ರದಲ್ಲಿ ನಟಿಸುತ್ತಿರುವ ನಟಿಯ ರಿಯಲ್​ ಲೈಫ್​ ಕಹಾನಿ ಹೀಗಿದೆ

kannadathi serial new updates

Comments are closed.