ಚಿತ್ರೀಕರಣ ಮುಗಿಸಿದ “ಕರಿ ಹೈದ ಕರಿ ಅಜ್ಜ” ಸಿನಿತಂಡ : ಸ್ಯಾಂಡಲ್‌ವುಡ್‌ಗೆ ಬರಲಿದೆ ಮತ್ತೊಂದು ದೈವದ ಸಿನಿಮಾ

ನಟ ಮತ್ತು ನಿರ್ದೇಶಕ ರಿಷಬ್‌ ಶೆಟ್ಟಿ ಅವರ “ಕಾಂತಾರ” ಸಿನಿಮಾ ಕರಾವಳಿ ಸಂಸ್ಕೃತಿ ಹಾಗೂ ದೈವಕೋಲ ಕಥೆಯನ್ನು ಒಳಗೊಂಡಿದ್ದು, ಪ್ರಪಂಚದಾದ್ಯಂತ ಮೆಚ್ಚುಗೆಯನ್ನು ಪಡೆದಿದೆ. ಇದೀಗ ನಿರ್ಮಾಪಕ ತ್ರಿವಿಕ್ರಮ ಸಪಲ್ಯ ನಿರ್ಮಾಣದ “ಕರಿ ಹೈದ ಕರಿ ಅಜ್ಜ” (Kari Haida Kari Ajja) ಸಿನಿಮಾದ ಚಿತ್ರೀಕರಣ ಮುಗಿದಿದೆ. ತುಳುನಾಡಿನ ಪವಾಡ ಪುರುಷ ಕೊರಗಜ್ಜ ಜೀವನಾಧಾರಿತ ಸಿನಿಮಾವಾಗಿದೆ. ಈ ಸಿನಿಮಾಕ್ಕೆ ಸುಧೀರ್‌ ಅತ್ತಾವರ್‌ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಬರುವ ಮುಖ್ಯ ಪಾತ್ರದಲ್ಲಿ ಹಾಲಿವುಡ್‌, ಬಾಲಿವುಡ್‌ ಹಾಗೂ ಫ್ರೆಂಚ್‌ ಸಿನಿಮಾಗಳ ನಿರ್ದೇಶಕ, ಡ್ಯಾನ್ಸರ್‌, ನಟ ಸಂದೀಪ್‌ ಸೋಪರ್ಕರ್‌ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಇವರು ಕೊರಗಜ್ಜನ ಜೊತೆ ಬರುವ ಗುಳಿಗನ ಪಾತ್ರದಲ್ಲಿ ನಟಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಈ ಕಲಾವಿದ ಇದೇ ಮೊದಲಬಾರಿಗೆ ಕನ್ನಡ ಸಿನಿಮಾವೊಂದರಲ್ಲಿ ನಟಿಸಿರುವುದು ವಿಶೇಷ. ಇನ್ನು ಈ ಸಿನಿಮಾದ ಬಗ್ಗೆ ನಿರ್ದೇಶಕ ಸುಧೀರ್‌ ಅತ್ತಾವರ್‌,” ಇನ್ನೆಯಷ್ಟೇ ಕೊರಗಜ್ಜ ಕೋಲು ಕೊಡುವ ಮೂಲಕ “ಕರಿ ಹೈದ ಕರಿ ಅಜ್ಜ” ಸಿನಿಮಾದ ಶೂಟಿಂಗ್‌ ಮುಗಿಸಲಾಯಿತು. ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಪವಾಡಗಳು ನಡೆದಿದ್ದು, ಎಲ್ಲರ ಅನುಭವಕ್ಕೆ ಬಂದಿದೆ. ಹಾಗೆ ಈ ಹಿಂದೆ ಕೊರಗಜ್ಜ ಬಗ್ಗೆ ಸಿನಿಮಾವನ್ನು ಮಾಡಲು ಕೆಲವು ನಿರ್ದೇಶಕರು ಪ್ರಯತ್ನ ಮಾಡಿದ್ದರೂ ಆಗಲಿಲ್ಲ. ನಮಗೆ ದೇವರ ಅನುಗ್ರಹ ಸಿಕ್ಕಿದ್ದರಿಂದ ಸಾಧ್ಯವಾಯಿತು. ಈ ಸಿನಿಮಾದಲ್ಲಿ ಕೊರಗಜ್ಜನ ನೈಜ ಕಥೇ ಹೇಳಲಾಗಿದ್ದು, ಕಥೆಯನ್ನು ಕೊರಗ ಜನಾಂಗದಿಂದ ಕಲೆ ಹಾಕಲಾಗಿದೆ” ಎಂದು ಹೇಳಿದರು.

ಹಾಲಿವುಡ್‌ ನಟ ಸಂದೀಪ್‌ ಸೋಪರ್ಕರ್‌ ಮಾತನಾಡಿ, ” ಈ ಸಿನಿಮಾ ನಂಗೆ ಒಳ್ಳೆ ಅನುಭವ ನೀಡಿದೆ. ಈ ತಂಡ ಹಾಗೂ ಸಿನಿಮಾದಲ್ಲಿ ಕೆಲಸ ಮಾಡಿದ್ದುತುಂಬಾ ಖುಷಿ ಕೊಟ್ಟಿದೆ. ಒಳ್ಳೆಯ ತಂಡ ಇದಾಗಿದ್ದು ಅದ್ಭುತವಾಗಿ ಕೆಲಸ ಮಾಡಿದೆ. ನಾನು ಮಾಡಿರುವ ಹೊಸ ಪಾತ್ರ ಅದ್ಭುತವಾಗಿದ್ದು ಹೊಸ ರೀತಿಯಲ್ಲಿ ಅನುಭವ ನೀಡಿತು” ಎಂದು ತಮ್ಮ ಪಾತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗೆ ಹಿರಿಯ ನಟಿ ಭವ್ಯ ಮಾತನಾಡಿ, ” ಈ ಸಿನಿಮಾದಲ್ಲಿ ನಾನು ವಿಶೇಷವಾದ ಪಾತ್ರ ಮಾಡಿದ್ದು, ಶೂಟಿಂಗ್‌ ಮಾಡುವಾಗ ಪವಾಡಗಳು ನಡೆಯುತ್ತಿತ್ತು. ಒಂದು ದೃಶ್ಯದಲ್ಲಿ ಗ್ಲಿಸರಿನ್‌ ಇಲ್ಲದೆ ಅತ್ತಿದ್ದೇನೆ ಕೂಡ” ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : Sunil Holkar passed away: ಚಿತ್ರನಟ ಹಾಗೂ ಖ್ಯಾತ ಕಥೆಗಾರ ಸುನೀಲ್ ಹೋಲ್ಕರ್ ವಿಧಿವಶ

ಇದನ್ನೂ ಓದಿ : ಜಗಮೆಚ್ಚಿದ “ಕಾಂತಾರ” ಸಿನಿಮಾ : ಶೀಘ್ರದಲ್ಲೇ ಕಿರುತೆರೆಗೆ

ಇದನ್ನೂ ಓದಿ : ಎರಡೇ ತಿಂಗಳಿಗೆ ಚಿತ್ರೀಕರಣ ಮುಗಿಸಿದ “ಧೂಮಂ”‌ ಸಿನಿತಂಡ : ಹೊಂಬಾಳೆಯ ಮತ್ತೊಂದು ಸಿನಿಮಾ ರೆಡಿ

ಈ ಸಿನಿಮಾದ ಶೂಟಿಂಗ್‌ನ್ನು ಸೋಮೇಶ್ವರ, ಉಲ್ಲಾಳ, ಮಡನ್‌ ತ್ಯಾರ್‌ ಮುಂತಾದ ಸ್ಥಳಗಳಲ್ಲಿ ಮಾಡಲಾಗಿದೆ. ಸಿನಿಮಾ ಪೋಸ್ಟ್‌ ಪ್ರೋಡಕ್ಷನ್‌ ಕೆಲಸ ಬಾಕಿ ಇರುವುದಿರಿಂದ ಮೇ ತಿಂಗಳನಲ್ಲಿ ತೆರೆ ಬರಲಿದೆ ಎಂದು ಸಿನಿತಂಡ ತಿಳಿಸಿದೆ. ಈ ಸಿನಿಮಾದಲ್ಲಿ ಶ್ರುತಿ, ಭವ್ಯ, ಸಂದೀಪ್‌ ಸೋಪರ್ಕರ್‌, ನಾಯಕನಾಗಿ ಭರತ್‌ ಸೂರ್ಯ, ನಾಯಕಿ ಪಾತ್ರದಲ್ಲಿ ವೃತಿಕಾ, ಪ್ರಮುಖ ಪಾತ್ರವೊಂದರಲ್ಲಿ ಬಾಲಿವುಡ್‌ ನಟ ಕಬೀರ್‌ ಬೇಡಿ ಕೂಡ ನಟಿಸಿದ್ದಾರೆ. ಈ ಸಿನಿಮಾ ಏಕಕಾಲದಲ್ಲಿ ಕನ್ನಡ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಿಸಲಾಗಿದ್ದು, ಧೃತಿ ಕ್ರಿಯೇಷನ್ಸ್‌ ಹಾಗೂ ಸಕ್ಸಸ್‌ ಫಿಲಂಸ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗಿದೆ.

Kari Haida Kari Ajja Film Team Completed Shooting: Another Divine Movie Coming to Sandalwood

Comments are closed.