ಕ್ರಾಂತಿ ಸಿನಿಮಾದ ನಾಲ್ಕನೇ ಹಾಡು ರಿಲೀಸ್‌ : ವೈರಲ್‌ ಆಯ್ತು ಮಾಸ್‌ ಸಾಂಗ್‌

ಚಾಲೆಂಚಿಂಗ್‌ ಸ್ಟಾರ್‌ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಕ್ರಾಂತಿ’ ಸಿನಿಮಾದ ನಾಲ್ಕನೇ (Kranti Movie Fourth Song Release ) ಹಾಡು ಬಿಡುಗಡೆ ಆಗಿದೆ. ಸಿನಿತಂಡ ಮೊದಲೇ ಹೇಳಿದಂತೆ ಹಾಡುಗಳನ್ನು ರಾಜ್ಯದ ಬೇರೆ ಬೇರೆ ನಗರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಅದೇ ರೀತಿಯಲ್ಲಿ ನಿನ್ನೆ (ಜನವರಿ 14) ಹೊಸ ಹಾಡನ್ನು ತುಮಕೂರಿನಲ್ಲಿ ಅಭಿಮಾನಿಗಳ ಮಧ್ಯೆ ಬಿಡುಗಡೆ ಮಾಡಲಾಗಿದೆ. ಹೊಸ ಹಾಡು ‘ಡೋಂಟ್ ಮೆಸ್ ವಿತ್ ಹಿಮ್’ ಎನ್ನುವ ಸಾಲುಗಳು ಸಖತ್ ಮಾಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಹಾಡು ಬಿಡುಗಡೆ ಕಾರ್ಯಕ್ರಮ ಆರಂಭವಾಗುವ ಮುನ್ನವೇ ‘ಕ್ರಾಂತಿ’ ಸಿನಿಮಾದ ಈ ಹಿಂದೆ ಬಿಡುಗಡೆ ಆದ ಹಾಡುಗಳಿಗೆ ದರ್ಶನ್ ಅಭಿಮಾನಿಗಳು ನೃತ್ಯ ಮಾಡಿ ಕಾರ್ಯಕ್ರಮದ ಜೋಶ್ ಹೆಚ್ಚಿಸಿದರು. ಅದರ ಜೊತೆಗೆ ‘ಡೋಂಟ್ ಮೆಸ್ ವಿತ್ ಹಿಮ್’ ಎಂಬ ಈ ಜೋಶ್ ಭರಿತ ಮಾಸ್ ಹಾಡನ್ನು ಸಿನಿತಂಡ ಬಿಡುಗಡೆ ಮಾಡಿತು. ತುಮಕೂರಿನ ಬಿಎಚ್‌ ರಸ್ತೆ, ಶಿವಕುಮಾರ ಸ್ವಾಮಿ ವೃತ್ತದಲ್ಲಿ ‘ಕ್ರಾಂತಿ’ ಸಿನಿಮಾದ ಹಾಡನ್ನು ಬಿಡುಗಡೆ ಮಾಡಲಾಗಿದೆ. ಜೊತೆಗೆ ಡೀ ಬೀಟ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಹಾಡು ಬಿಡುಗಡೆ ಆಗಿದ್ದು ಹಾಡು ಸಖತ್‌ ವೈರಲ್ ಆಗುತ್ತಿದೆ.

‘ಡೋಂಟ್ ಮೆಸ್ ವಿತ್ ಹಿಮ್’ ಹಾಡು ಪಕ್ಕಾ ಮಾಸ್ ಹಾಡಾಗಿದ್ದು ನಾಯಕ ದರ್ಶನ್‌ ಅವರ ರಗಡ್ ವ್ಯಕ್ತಿತ್ವವನ್ನು ಬಿಂಬಿಸುವ ಹಾಡು ಇದಾಗಿದೆ. ಚೇತನ್ ಕುಮಾರ್ ಬರೆದಿರುವ ಈ ಹಾಡಿನಲ್ಲಿ ದರ್ಶನ್‌ಗೆ ಸಖತ್ ಬಿಲ್ಡಪ್ ಸಹ ನೀಡಲಾಗಿದೆ. ದರ್ಶನ್ ಅಭಿಮಾನಿಗಳಿಗೆ ಪಕ್ಕಾ ಇಷ್ಟವಾಗುವ ಹಾಡು ಇದಾಗಿದೆ. ಹರಿಕೃಷ್ಣ ಸಂಗೀತ ನಿರ್ದೇಶನ ನೀಡಿರುವ ಈ ಹಾಡನ್ನು ಟಿಪ್ಪು, ರಂಜಿತ್ ಹಾಗೂ ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ . ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದಾರೆ.

ಇದನ್ನೂ ಓದಿ : ಡಾ. ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆ : ಸಾಮಾಜಿಕ ಜಾಲತಾಣಗಳಲ್ಲಿ ನಟ ಅನಿರುದ್ದ ಹೀಗಂದಿದ್ಯಾಕೆ?

ಇದನ್ನೂ ಓದಿ : ಚಿತ್ರೀಕರಣ ಮುಗಿಸಿದ “ಕರಿ ಹೈದ ಕರಿ ಅಜ್ಜ” ಸಿನಿತಂಡ : ಸ್ಯಾಂಡಲ್‌ವುಡ್‌ಗೆ ಬರಲಿದೆ ಮತ್ತೊಂದು ದೈವದ ಸಿನಿಮಾ

ಇದನ್ನೂ ಓದಿ : Sunil Holkar passed away: ಚಿತ್ರನಟ ಹಾಗೂ ಖ್ಯಾತ ಕಥೆಗಾರ ಸುನೀಲ್ ಹೋಲ್ಕರ್ ವಿಧಿವಶ

ಕ್ರಾಂತಿ ಸಿನಿಮಾದ ನಾಲ್ಕು ಹಾಡುಗಳು ಈವರೆಗೆ ಬಿಡುಗಡೆ ಆಗಿವೆ. ಒಂದೊಂದು ಹಾಡನ್ನು ರಾಜ್ಯದ ಒಂದೊಂದು ನಗರದಲ್ಲಿ ಬಿಡುಗಡೆ ಮಾಡಿರುವುದು ವಿಶೇಷ. ಈವರೆಗೆ ಬಿಡುಗಡೆ ಆಗಿರುವ ‘ಧರಣಿ’, ‘ಪುಷ್ಪಾವತಿ’, ‘ಬೊಂಬೆ’ ಹಾಡುಗಳು ಹಿಟ್ ಆಗಿದ್ದು, ಇದೀಗ ‘ಡೋಂಟ್ ಮೆಸ್ ವಿತ್ ಹಿಮ್’ ಹಾಡು ಸಹ ಹಿಟ್ ಆಗುವ ನಿರೀಕ್ಷೆ ಹುಟ್ಟಿಸಿದೆ. ಇನ್ನು ‘ಕ್ರಾಂತಿ’ ಸಿನಿಮಾವು ಶಿಕ್ಷಣ ವ್ಯವಸ್ಥೆಯ ಕುರಿತಾದ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ದರ್ಶನ್ ಎನ್‌ಆರ್‌ಐ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಸಿನಿಮಾದಲ್ಲಿ ರವಿಚಂದ್ರನ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಹಿಟ್ ಸಿನಿಮಾ ‘ಯಜಮಾನ’ ನಿರ್ಮಿಸಿದ್ದ ತಂಡವೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ದರ್ಶನ್‌ರ ಆತ್ಮೀಯ ಗೆಳೆಯ ವಿ ಹರಿಕೃಷ್ಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಜನವರಿ 26 ರಂದು ತೆರೆಗೆ ಬರಲಿದೆ.

Kranti Movie Fourth Song Release : Viral Mass Song

Comments are closed.