ಮರಳಿ ಮನಸ್ಸಾಗಿದೆ ಮುಕ್ತಾಯ : ಮತ್ತೆ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟ ನಟ ಚಂದನ್

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮರಳಿ ಮನಸ್ಸಾಗಿದೆ’ ಧಾರಾವಾಹಿಯು ಮುಕ್ತಾಯಗೊಳ್ಳಲಿದೆ. ಈಗಾಗಲೇ ಧಾರಾವಾಹಿಯ ಕೊನೆಯ ದಿನದ ಚಿತ್ರೀಕರಣವೂ ಕೂಡಾ ಮುಗಿದಿದೆ. ಇನ್ನು ಧಾರಾವಾಹಿಯಲ್ಲಿ ನಾಯಕ ಎಸಿಪಿ ವಿಕ್ರಾಂತ್ ಆಗಿ ಅಭಿನಯಿಸುತ್ತಿರುವ ಚಂದನ್ ಕುಮಾರ್ (Chandan Kumar) ಅವರು ಸಣ್ಣ ವಿಡಿಯೋವೊಂದನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ಧಾರಾವಾಹಿ ಮುಕ್ತಾಯಗೊಳ್ಳುವುದರ ಸೂಚನೆಯನ್ನು ಕೂಡಾ ನೀಡಿದ್ದಾರೆ. ವಿಡಿಯೋದ ಜೊತೆಗೆ ” ಶುಭಂ, ಎಸಿಪಿ ವಿಕ್ರಾಂತ್ ಪಾತ್ರ ಮುಗಿಯುತ್ತಿದೆ” ಎಂದು ಕೂಡಾ ಅವರು ಬರೆದುಕೊಂಡಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ರಾಧಾ ಕಲ್ಯಾಣ” ಧಾರಾವಾಹಿಯಲ್ಲಿ ನಾಯಕ ವಿಶು ಆಗಿ ಕಾಣಿಸಿಕೊಳ್ಳುವ ಮೂಲಕ ನಟನೆಗೆ ಕಾಲಿಟ್ಟ ಚಂದನ್ ಕುಮಾರ್ ಅವರ ಬಣ್ಣದ ಲೋಕಕ್ಕೆ ಕಾಲಿಟ್ಟು ಹನ್ನೆಡರು ವರ್ಷ ಆಗಿದೆ. ಸದ್ಯ ಕಿರುತೆರೆ ಜೊತೆಗೆ ಬೆಳ್ಳಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಚಂದನ್ ಕುಮಾರ್ ಅವರು ಕಿರುತೆರೆ ರಿಯಾಲಿಟಿ ಶೋ ಮೂಲಕ ಕಾಲಿಟ್ಟಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಪರಿಚಿತರಾದ ಚಂದನ್ ಕುಮಾರ್‌ಗೆ ಆ ಶೋ ತಂದುಕೊಟ್ಟ ಜನಪ್ರಿಯತೆ ಅಷ್ಟಿಷ್ಟಲ್ಲ. ಮುಂದೆ ರಿಯಾಲಿಟಿ ಶೋ ಮುಗಿದದ್ದೇ, ನಟಿಸುವ ಸುವರ್ಣಾವಕಾಶ ಚಂದನ್ ಅವರಿಗೆ ದೊರಕಿತು.

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 3 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟ ಚಂದನ್ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾದರು. ಮಾತ್ರವಲ್ಲದೇ ಆ ಸೀಸನ್ ನ ರನ್ನರ್ ಅಪ್ ಆಗಿ ಹೊರಹೊಮ್ಮಿದ ಚಂದನ್ ಕುಮಾರ್ ನಂತರ ಮಹಾಶಂಕರನಾಗಿ ಕಿರುತೆರೆಗೆ ಮರಳಿದರು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರ್ವ ಮಂಗಳ ಮಾಂಗಲ್ಯೇ’ ಧಾರಾವಾಹಿಯಲ್ಲಿ ನಾಯಕ ಮಹಾಶಂಕರನಾಗಿ ನಟಿಸಿ ಸೈ ಎನಿಸಿಕೊಂಡರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕುಕ್ಕು ವಿತ್ ಕಿರಿಕ್ಕು’ ರಿಯಾಲಿಟಿ ಶೋ ನಲ್ಲಿ ಪತ್ನಿ ಕವಿತಾ ಗೌಡ ಅವರ ಜೊತೆಗೆ ಭಾಗವಹಿಸಿದ್ದ ಚಂದನ್ ಪ್ರಸ್ತುತ ಶೋವಿನ ವಿನ್ನರ್ ಆಗಿಯೂ ಹೊರಹೊಮ್ಮಿದರು. ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮರಳಿ ಮನಸ್ಸಾಗಿದೆ’ ನಟಿಸುವ ಅವಕಾಶವನ್ನು ಕೂಡಾ ಗಿಟ್ಟಿಸಿಕೊಂಡರು. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ’ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿಯೂ ಮಿಂಚಿದರು ಚಂದನ್ ಕುಮಾರ್. ಕೋವಿಡ್ ಸಮಯದಲ್ಲಿ ‘ಸಾವಿತ್ರಮ್ಮಗಾರಿ ಅಬ್ಬಾಯಿ’ ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿ ‘ಸನ್ ಆಫ್ ಸಾವಿತ್ರಮ್ಮ’ ಹೆಸರಿನಲ್ಲಿ ಪ್ರಸಾರಗೊಂಡಿತ್ತು.

ಇದನ್ನೂ ಓದಿ : The Kashmir Files Movie : ಮತ್ತೆ ತೆರೆಗೆ ಬರಲಿದೆ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ

ಇದನ್ನೂ ಓದಿ : ರಸ್ತೆ ಅಪಘಾತದಲ್ಲಿ ಅಭಿಮಾನಿ ನಿಧನ : ಸಂತಾಪ ಸೂಚಿಸಿದ ನಟ ದರ್ಶನ್

ಇದನ್ನೂ ಓದಿ : ನಟ ದರ್ಶನ್‌ ಹೇಳಿಕೆ ವಿಡಿಯೋವನ್ನು ಶೇರ್‌ ಮಾಡಿದ ಆಮ್ ಆದ್ಮಿ ಪಕ್ಷ

ಮುಂದೆ ಅದೇ ವಾಹಿನಿಯಲ್ಲಿ ಪ್ರಸಾರಗೊಂಡ ಶ್ರೀಮತಿ ಶ್ರೀನಿವಾಸ ಧಾರಾವಾಹಿಯಲ್ಲಿ ನಾಯಕ ಶ್ರೀನಿವಾಸನಾಗಿ ಚಂದನ್ ಕಮಾಲ್ ಮಾಡಿದರು. ಅಷ್ಟೇ ಅಲ್ಲದೇ “ಲೈಫು ಇಷ್ಟೇನೆ” ಸಿನಿಮಾದಲ್ಲಿ ಸಪೋರ್ಟಿಂಗ್ ರೋಲ್ ನಲ್ಲಿ ಕಾಣಿಸಿಕೊಂಡ ಚಂದನ್ ನಾಯಕನಾಗಿ ನಟಿಸಿದ ಮೊದಲ ಸಿನಿಮಾ ‘ಪರಿಣಯ’. ಮುಂದೆ ಕಟ್ಟೆ, ಎರಡೊಂದ್ಲಾ ಮೂರು, ಲವ್ ಯೂ ಆಲಿಯಾ, ಬೆಂಗಳೂರು 560023 ಹಾಗೂ ಪ್ರೇಮಬರಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ನಂತರ ಚಂದನ್ ಕುಮಾರ್ ಡಾರ್ಲಿಂಗ್ ಕೃಷ್ಣ ಅಭಿನಯದ ಶ್ರೀಕೃಷ್ಣಜೀಮೈಲ್. ಕಾಂ ಸಿನಿಮಾದಲ್ಲಿಯೂ ಅತಿಥಿ ಪಾತ್ರದ ಮೂಲಕ ಗಮನ ಸೆಳೆದಿದ್ದರು.

Marali Manasaagide Serial Ending : Actor Chandan who gave sandalwood entry again

Comments are closed.